ವಿದ್ಯಾರ್ಥಿಗಳಲ್ಲಿ ಕಠಿಣ ಶ್ರಮ ಮತ್ತು ಆತ್ಮ ವಿಶ್ವಾಸ ಇದ್ದರೆ ಕ್ರೀಡಾಕೂಟದಲ್ಲಿ ಯಶಸ್ಸು ಸಾಧ್ಯ…..
1 min read
ವಿದ್ಯಾರ್ಥಿಗಳಲ್ಲಿ ಕಠಿಣ ಶ್ರಮ ಮತ್ತು ಆತ್ಮ ವಿಶ್ವಾಸ ಇದ್ದರೆ ಕ್ರೀಡಾಕೂಟದಲ್ಲಿ ಯಶಸ್ಸು ಸಾಧ್ಯ ಮೂಡಿ

ಗೆರೆ ತಾಲೂಕು ಮಟ್ಟದ 14 ವರ್ಷ ವಯೋಮಿತಿ ಯೋ ಳಗಿನ ಕ್ರೀಡಾಕೂಟವು ನಗರದ ಎಸ್ ಹೊಯ್ಸಳ ಕ್ರೀಡಾಂಗಣದಲ್ಲಿ ಜರುಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾನ್ಯ ಶಾಸಕರಾದ ಶ್ರೀಮತಿ ನಯನ ಮೊಟಮ್ಮ ಕ್ರೀಡಾಕೂಟ ವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಠಿಣ ಆತ್ಮವಿಶ್ವಾಸ ಇದ್ದರೆ ತಾಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಯಶಸ್ಸು ಪಡೆಯಲು ಸಾಧ್ಯ ಶಿಕ್ಷಣದ ಜೊತೆಗೆ ಕ್ರೀಡೆಯನ್ನುಅಳವಡಿಸಿಕೊಂಡಲ್ಲಿ ಉತ್ತಮ ಅರೋಗ್ಯ ಹಾಗೂ ಸದೃಢ ದೇಹವನ್ನು ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು
ಮಾನ್ಯ ಶಿಕ್ಷಣಾಧಿಕಾರಿಗಳಾದ ಎನ್ ಎ ಮೀನಾಕ್ಷಿ ರವರು ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳಲು ಕ್ರೀಡಾಕೂಟ ಗಳು ಪ್ರಮುಖವಾದ ಪಾತ್ರ ವಹಿಸುತ್ತದೆ ಸೋಲು ಗೆಲವು ನಾಣ್ಯ ದ ಎರಡು 2 ಮುಖಗಳು ಕ್ರೀಡೆಗಳಲಿ ಭಾಗವಹಿಸುವುದು ಮುಖ್ಯ ನಿರ್ದಿಷ್ಟ ಗುರಿ ತಲುಪಬೇಕಾದರೆ ನಿರಂತರ ಅಭ್ಯಾಸ ಕಠಿಣ ಶ್ರಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು ಕ್ರೀಡಾಾಕೂಟದ ಯಶಸ್ವಿಗೆ ದೈಹಿಕ ಶಿಕ್ಷಣ ಶಿಕ್ಷಕರು ಹಂಸ ಕ್ಷೀರ ನ್ಯಾಯ ಒದಗಿಸುವಲ್ಲಿ ದೈ ಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವ ಎಂದು ಅಭಿಪ್ರಾಯಬಟ್ಟರು ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯರಾದ ರವಿ ಕುನ್ನಳ್ಳಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರಾದ ಲವೀನಾ ಸೆ ಲ್ವಿಯ ಲೋಬೊ ಸಿಸ್ಟರ್ ಡೀನಾ ಮಂಜಪ್ಪ H ಸುಧಾಕರ್ ನವೀನ್ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಹಾಬಾ ಮಂಜುನಾಥ್ ನಿರೂಪಿಸಿದರು ಸಿಸ್ಟೆರ್ ಸ್ಮಿತಾ ಹಾಗೂ ಜಗದೀಶ್ ಜಿ ಸಿ ಸ್ವಾಗತಿಸಿದರು. ಜಗದೀಶ್ m s ವಂದನಾರ್ಪಣೆ ನೆರೆವೆರಿದರು.
ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ವೀರಗ್ರಹಿಣಿ ಪ್ರಶಸ್ತಿಯನ್ನು ಪಂಚಮಿ ಸೆಕ್ರೆಡ್ ಹಾರ್ಟ್ ಶಾಲೆ ಪಡೆದುಕೊಂಡರು
ಬಾಲಕರ ವಿಭಾಗದಲ್ಲಿ ಸಂತ ಮಾರ್ಥಾಸ್ ಪ್ರೌಢಶಾಲಾ ವಿದ್ಯಾರ್ಥಿ ಸಹನ್ ಸಿ ವೀರ ಗ್ರಹಿಣಿ ಪ್ರಶಸ್ತಿ ಪಡೆದುಕೊಳ್ಳಲಾಯಿತು.

