…ನಿಧನ…
1 min read
……ನಿಧನ………………….ನರಸಿಂಹರಾಜಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಹಾಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳು ವಕೀಲ ಎಸ್ ಎಸ್ ಸಂತೋಷ್ ಕುಮಾರ್ ಅವರ ಪೂಜ್ಯ ತಂದೆಯವರಾದ ಗುಳ್ಳದಮನೆ ಶಿವಣ್ಣಗೌಡರು ನೆನ್ನೆ ಸಂಜೆ ಹೃದಯಾಘಾತದಿಂದ ಇಹ ಬದುಕಿಗೆ ವಿದಾಯ ಹೇಳಿ ಹೊರಟು ಹೋಗಿದ್ದಾರೆ, 77ರ ವಯೋಮಾನದ ಪೂಜ್ಯ ಶಿವಣ್ಣಗೌಡರು ಪತ್ನಿ ಸುಮಿತ್ರಾ,, ಗಂಡು ಮಕ್ಕಳಾದ ಸಂತೋಷ್ ಕುಮಾರ್, ಸತೀಶ್ ಮತ್ತು ಮಗಳು ಸೌಮ್ಯ ಸೇರಿದಂತೆ ದೊಡ್ಡ ಕುಟುಂಬವನ್ನು ಬಿಟ್ಟು ಆಗಲಿದ್ದಾರೆ, ಪ್ರಗತಿಪರ ಕೃಷಿಯೊಂದಿಗೆ ರೈತಾಪಿ ಜೀವನವನ್ನು ಮಾಡುತ್ತಿದ್ದ ಶಿವಣ್ಣಗೌಡರ ಮನೆತನ ಸಾಹಿತ್ಯ-ಸಂಸ್ಕೃತಿ -ಕಲೆ ಇನ್ನು ಮುಂತಾದ ಜನಪರ ಚಟುವಟಿಕೆಗಳೊಂದಿಗೆ ತನ್ನೊಂದಿಗೆ ತನ್ನ ಮಕ್ಕಳನ್ನು ತೊಡಗಿಸಿ ಬೆಳೆದು ಬೆಳೆಸಿದ್ದರು, ಸಾಯುವವರೆಗೂ ಅತ್ಯಂತ ಚಂದವಾಗಿ ಇದ್ದವರು, ಇದ್ದಕ್ಕಿದ್ದಂತೆ ದಿಡೀರನೆ ಹೃದಯಾಘಾತದಿಂದ ಅಗಲಿದ ಅವರ ಸಾವು ಅತ್ಯಂತ ನೋವಿನ ಸಂಗತಿಯಾಗಿದೆ,, ಈ ಸಾವಿನ ದುಃಖವನ್ನು ತಡೆಯುವ ಶಕ್ತಿ ಕುಟುಂಬಕ್ಕೆ ಬರಲಿ ಎಂದು, ಅಗಲಿದ ಹಿರಿಯ ಚೇತನಕ್ಕೆ ಭಾವಪೂರ್ಣ ಸಂತಾಪಗಳನ್ನು ಸಮರ್ಪಿಸಿದ್ದಾರೆ. ಬರಹ ಕೃಪೆ.ಡಿ, ಎಂ, ಮಂಜುನಾಥಸ್ವಾಮಿ, ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.