*ಜಿ ಹೊಸಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ*
1 min read
*ಜಿ ಹೊಸಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ*
ಮೂಡಿಗೆರೆ:
ನಮ್ಮದಿವ್ಯ ಭಾರತದ ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿ ಪ್ರಮುಖ ವಾದ ಹಬ್ಬ ಎಂದು ಜೇಸಿಐ ಗೋಣೀಬೀಡು ಹೊಯ್ಸಳ ಅಧ್ಯಕ್ಷ ಜೇಸಿ ಯೋಗೇಶ್ ಕುಮಾರ್ ಹೇಳಿದರು.
ಅವರು ಇಂದು ಜಿ ಹೊಸಳ್ಳಿ ಗ್ರಾಮ ದಲ್ಲಿ ಜೇಸಿಐ ಗೋಣೀಬೀಡು ಹೊಯ್ಸಳ ನೇತೃತ್ವದಲ್ಲಿ ಬಡ ಕಾರ್ಮಿಕ ರಿಗೆ ಎಳ್ಳು ಬೆಲ್ಲ ಹಣ್ಣು ಗಳನ್ನೂ ನೀಡಿ ವಿಶಿಷ್ಟ ವಾಗಿ ಆಚರಿಸಿ ಮಾತನಾಡಿದರು.
ವಿಶೇಷ ವಾಗಿ ರೈತಾಪಿ ಬಂದುಗಳಿಗೆ. ಕೃಷಿ ಕರಿಗೆ. ಇದು ತುಂಬಾ ಮಹತ್ವ ದ ಹಬ್ಬ. ಹೊಲ ಗದ್ದೆ ಗಳ ಬೆಳೆ ಫಸಲಾಗಿ ದವಸ ಧನ್ಯ ಗಳು ಮನೆ ಸೇರಿ ಸುಗ್ಗಿಯ ಸಡಗರ ದಲ್ಲಿ ಹರ್ಷೋಲ್ಲಾಸ ಗರಿಗೆದರಿ ನಲಿವೇರಿ ನರ್ತಿಸುವ ಸಂಭ್ರಮ ದ ಹಬ್ಬವೇ ಸಂಕ್ರಾಂತಿ ಎಂದರು.
ಕಾರ್ಯದರ್ಶಿ ರಂಜಿತ್ ಮಾತನಾಡುತ್ತಾ ಸಂಕ್ರಾಂತಿ ಹಬ್ಬ ಎಂದರೆ ಹಳ್ಳಿ ಸಂಸ್ಕೃತಿ ಸಂಭ್ರಮಾಚರಣೆ ಸಾಕ್ಷಿಯಾಗಿ ಸಡಗರ ಸಂಭ್ರಮ ಎಲ್ಲೇಡೆ ಮನೆ ಮಾಡಿದ್ದು ವಿವಿಧ ಸಂಪ್ರದಾಯ ಸಾಂಸ್ಕೃತಿಕ ಆಚರಣೆಗಳಿಗೆ ಸಾಕ್ಷಿ ಆಗಿದೆ ಸಂಕ್ರಾಂತಿ ಹಬ್ಬ. ಸಂಕ್ರಾಂತಿ ಯು ಭಾರತೀಯ ಸಂಸ್ಕೃತಿ ಯಲ್ಲಿ ಮಹತ್ತರ ಸ್ತಾನವಿದೆ ಎಂದರು..
ಉಪಾಧ್ಯಕ್ಷ ಜೇಸಿ ಮದು ಮಾತನಾಡುತ್ತಾ ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವುದು. ಒಂದು ಹಬ್ಬ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವುದು ಈ ಹಬ್ಬ ಸಮೃದ್ಧಿಯ ಸಂಕೇತ.
ಸಂಕ್ರಾಂತಿ ಯು ಧಾರ್ಮಿಕ ತತ್ವ ಗಳಿಂದ ಸ್ವತಂತ್ರ ವಾಗಿ ಆಚರಿಸಲಾಗುತ್ತದೆ ಎಂದರು
.
ಜೇಸಿರೇಟ್ ಅಧ್ಯಕ್ಷಿಣಿ ರಕ್ಸಿತಾ ಯೋಗೇಶ್.. ಜೆಜೆಸಿ ಅಧ್ಯಕ್ಷ ದಿಶಾನ್..
ರಾಜೇಗೌಡ. ದರ್ಶನ್. ಭರತ್ ಹಾಗೂ ಅಪಾರ ಕಾರ್ಮಿಕರು ಗ್ರಾಮಸ್ಥರು ಭಾಗವಹಿಸಿದ್ದರು..
ಎಳ್ಳು -ಬೆಲ್ಲ -ಹಣ್ಣುಗಳು ಕಾರ್ಮಿಕರಿಗೆ ಪರಸ್ಪರ ವಿನಿಮಯ ಮಾಡಿ ಆಚರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |