ಯುವ ಸ್ಪಂದನ ಅರಿವು ಹಾಗೂ ಗ್ರಾಮೀಣ ಕ್ರೀಡಾಕೂಟ
1 min read
ಯುವ ಸಪ್ತಾಹ
ದಿನಾಂಕ 14/1/2022 ಶುಕ್ರವಾರ,ಮೂಡಿಗೆರೆಯ ಡಿ.ಎಸ್.ಬಿ.ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಯುವ ಸಬಲೀಕರಣ ಕ್ರೀಡಾ ಇಲಾಖೆ,
ಯುವ ಸ್ಪಂದನ
ನೆಹರು ಯುವ ಕೇಂದ್ರ
ರಾಷ್ಟ್ರೀಯ ಸೇವಾ ಯೋಜನೆ
ರೊವರ್ಸ್ ಹಾಗೂ ರೆಂಜರ್ ಘಟಕ
ಸಹಯೋಗದಲ್ಲಿ
ಯುವ ಸ್ಪಂದನ ಅರಿವು ಹಾಗೂ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಪ್ರಸ್ತಾವಿಕವಾಗಿ ಅಬ್ದುಲ್ ನಾಜ಼ೀಮ್ ಮಾತನಾಡಿ ಮಾನಸಿಕ ಆರೋಗ್ಯ, ದೈಹಿಕ ಚಟುವಟಿಕೆಗಳ ತೊಡಗಿಕೊಳ್ಳುವ ರೀತಿ, ಯುವ ಸ್ಪಂದನ, ಕ್ರೀಡಾ ಇಲಾಖೆ ಇನ್ನಿತರ ಸಂಸ್ಥೆಗಳಿಂದ ಸಬಲೀಕರಣ ಆಗುವ ಬಗೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರಂಗಸ್ವಾಮಿ ಮಾತನಾಡಿ ಇತ್ತಿಚಿನ ಅಧುನಿಕ ದಿನಗಳಲ್ಲಿ ಸದೃಡವಾಗಿರುವುದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮಹತ್ವ ಪಡೆದಿದೆ ಎಂದು ನುಡಿದರು..ನಂತರ ಹಗ್ಗ ಜಗ್ಗಾಟ,ಒಂಟಿ ಕಾಲಿನ ಓಟ,ಕಬಡ್ಡಿ ,ಗೋಣಿ ಚೀಲದ ಓಟ ಇತರೆ ಗ್ರಾಮೀಣ ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಆಡಿಸಿ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು..ಈ
ಕಾರ್ಯಕ್ರಮದಲ್ಲಿ ಯುವ ಸಮಾಲೋಚಕಿ ಶಿಲ್ಪ,ನೆಹರು ಯುವ ಕೇಂದ್ರದ ಸ್ವಯಂ ಸೇವಕಿ ಅಕ್ಷತ ಹಾಗೂ ಸೃಜನಶೀಲ ತಂಡದ ಅದ್ಯಕ್ಷರಾದ ಅಬ್ದುಲ್ ನಾಜಿಮ್, ಕಾರ್ಯದರ್ಶಿ ವಿಜಯಲಕ್ಷ್ಮಿ,ಉಪಾದ್ಯಕ್ಷರಾದ ಪರಮೇಶ್N K , ಕಾಲೇಜಿನ ಉಪನ್ಯಾಸಕರಾದ ದಯಾನಂದ್ ಹಾಗೂ ನೌಶದ್, ಶಿವರಾಜ್, ಅಪೂರ್ವ, ಕವಿತಾ ಮತ್ತಿತರ ಉಪನ್ಯಾಸಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ॥ ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್
ಅವಿನ್ ಟಿವಿ
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |