•ಭಾರತೀಯ ಸೇನಾ ದಿನಾಚರಣೆ•
1 min read
•ಭಾರತೀಯ ಸೇನಾ ದಿನಾಚರಣೆ•
ಮೂಡಿಗೆರೆ :ಭಾರತೀಯ ಯೋಧರ ಶೌರ್ಯ ಮತ್ತು ಅತ್ಯಮೂಲ್ಯ ಸೇವೆ ಅನನ್ಯ ಎಂದು ಜೇಸಿಐ ಗೋಣೀಬೀಡು ಹೊಯ್ಸಳ ಅಧ್ಯಕ್ಷ ಯೋಗೇಶ್ ಕುಮಾರ್ ಹೇಳಿದರು.
ಅವರು ಇಂದು ಜೇಸಿಐ ಗೋಣೀಬೀಡು ಹೊಯ್ಸಳ ಸಂಸ್ಥೆಯಆವರಣ ದಲ್ಲಿ ಭಾರತೀಯ ಸೇನಾ ದಿನವನ್ನುಆಚರಸಿ ಅಧ್ಯಕ್ಷತೇ ವಹಿಸಿ ಮಾತನಾಡಿದರು.
ನಮ್ಮ ಭಾರತೀಯ ಸೇನೆ ಬಲಿಷ್ಠ ವಾಗಿದೆ. ಸೈನಿಕರು ಧೈರ್ಯ ಶಾಲಿಗಳಾಗಿದ್ದು ದೃಢ ನಿರ್ಧಾರ. ನಿಷ್ಠೆ. ಶ್ರದ್ದೆ ಅವರಲ್ಲಿದೆ. ದೇಶಕ್ಕೆ ಹೆಮ್ಮ ತರುವ ಕೆಲಸ ವನ್ನು ಯಾವಾಗಲೂ ಮಾಡುತ್ತಾರೆ ಎಂದರು.
ಮಾಜಿ ಯೋಧ ಶ್ರೀ ರಮೇಶ್ ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಅವರ ಅನುಭವ ವನ್ನು ಹಂಚಿಕೊಂಡರು. ದೇಶದ ವಿಷಯ ಬಂದಾಗ ತಮ್ಮ ಜೀವನವನ್ನು ಬದಿಗೊತ್ತಿ ತ್ಯಾಗ. ಬಲಿದಾನ ಮಾಡಿದವರನ್ನುನಾವು ಈ ಸಂದರ್ಭದಲ್ಲಿ ಸ್ಮರಿಸೋಣ ಎಂದರು.
ನಿಕಟಪೂರ್ವಾಧ್ಯಕ್ಸ ಬಿ ಕೆ ಚಂದ್ರಶೇಖರ್ ಮಾತನಾಡುತ್ತಾ ನಮ್ಮ ಹೆಮ್ಮೆಯ ಸೈನಿಕರಿಗೆ ಭಾರತೀಯ ಸೇನಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ.ತ್ಯಾಗ ಬಲಿದಾನ ಗಳನ್ನು ಕೊಂಡಾಡಿದರು.
ಕಾರ್ಯಕ್ರಮ ದಲ್ಲಿ ಮಾಜಿಯೋಧ ರವರ ಪತ್ನಿ ಭಾರತಿರಮೇಶ್. ಕಾರ್ಯದರ್ಶಿ ರಂಜಿತ್. ಉಪಾಧ್ಯಕ್ಷ ಮದು. ಗೌರವ ಸಲಹೆಗಾರ ವೈ ಬಿ ಸುಂದರೇಶ್. ಭರತ್. ಚಂದ್ರಶೇಖರ. ದರ್ಶನ್. ಜಗತ್. ರಾಜೇಗೌಡರು . ಧರ್ಶನ್. ಇನ್ನೂ ಮುಂತಾದವರು ಇದ್ದರು.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |