*ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯ 2022 ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ*
1 min read
*ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯ 2022 ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ*
ಮೂಡಿಗೆರೆ.
ಬಣಕಲ್ ಗ್ರಾಮಪಂಚಾಯಿತಿ ಭವನದಲ್ಲಿ ದಿನಾಂಕ 11.01 2022ರ ಮಂಗಳವಾರದಂದು ಸಂಜೆ ನಡೆಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ ಎಲ್ ಶರತ್ ಫಲ್ಗುಣಿ ಅವರಿಗೆ ಜೆ ಸಿ ವಲಯ 14ರ ಅಧ್ಯಕ್ಷ ಜೆಸಿ ಸೆನೆಟರ್ ಕುನಾಲ್ ಮಾನಕ್ ಚಂದ್ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ವಿಧಾನ ಪರಿಷತ್ತಿನ ಮಾನ್ಯ ಉಪಸಭಾಪತಿಗಳಾದ ಶ್ರೀಯುತ ಪ್ರಾಣೇಶ್, ದಿಕ್ಸೂಚಿ ಭಾಷಣಕಾರರಾಗಿ ಜೇಸಿಐ ರಾಷ್ಟ್ರೀಯ ತರಬೇತುದಾರರಾದ ಶ್ರೀರಾಘವೇಂದ್ರ ಹೊಳ್ಳ ಆಗಮಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಲಯ ಉಪಾಧ್ಯಕ್ಷರಾದ ಜೆಸಿ ಸಂತೋಷ್, ಬಣಕಲ್ ಜೆಸಿಐ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಡಿಟಿ ನವೀನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜೇಸಿರೇಟ್ ಅಧ್ಯಕ್ಷರಾಗಿ ಶ್ರೀಮತಿ ಅಶ್ವಿನಿ ಶರತ್ ಹಾಗೂ ಜೂನಿಯರ್ ಜೆಸಿ ಅಧ್ಯಕ್ಷರಾಗಿ ಕುಮಾರಿ ಶ್ರಾವ್ಯ ಜವಾಬ್ದಾರಿ ವಹಿಸಿಕೊಂಡರು.
ಸಂಸ್ಥೆಯ 2022 ನೇ ಸಾಲಿನ ಕಾರ್ಯದರ್ಶಿಯಾಗಿ ಪಿ ಎಂ ಪ್ರಮೋದ್, ಸಹ ಕಾರ್ಯದರ್ಶಿಯಾಗಿ ಸರ್ವೇಶ್, ಖಜಾಂಚಿಯಾಗಿ ಗಗನ್ ಮತ್ತು ಉಪಾಧ್ಯಕ್ಷರು ಗಳಾಗಿ ಕೆಎಲ್ ರವಿ, ಕೆಪಿ ಸುರೇಂದ್ರ, ಎಆರ್ ಅಭಿಲಾಶ್, ಅಶ್ವಿನ್, ಮಧುರ ಕವೀಶ್ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಇತ್ತೀಚೆಗಷ್ಟೇ ರಾಜ್ಯ ಮಾನವೀಯ ವರದಿಗಾರ ಪ್ರಶಸ್ತಿ ಪಡೆದ ಟಿವಿ9 ವರದಿಗಾರ ಪ್ರಶಾಂತ್ ಅವರಿಗೆ ಗೌರವ ಸಮರ್ಪಣೆ ಮತ್ತು ಮಾನ್ಯ ಉಪಸಭಾಪತಿಗಳಾದ ಎನ್ ಕೆ ಪ್ರಾಣೇಶ್ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರುಗಳು, ವಲಯ ಅಧಿಕಾರಿಗಳು, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರು, ಹಲವು ವಿವಿಧ ಜೇಸಿ ಸಂಸ್ಥೆಯ ಅಧ್ಯಕ್ಷರುಗಳು, ರಾಜಕೀಯ ಪಕ್ಷಗಳ ಮುಖಂಡರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |