ನವ ಭಾರತನಿರ್ಮಾಣ ಕ್ಕೆ ಬುನಾದಿ ಹಾಕಿದರು. ಕುನಾಲ್ ಮಾಣಿಕ್ ಚಂದ್.
1 min read
ಮೂಡಿಗೆರೆ : ನವ ಭಾರತನಿರ್ಮಾಣ ಕ್ಕೆ ಬುನಾದಿ ಹಾಕಿದರು. ಕುನಾಲ್ ಮಾಣಿಕ್ ಚಂದ್.
ಮೂಡಿಗೆರೆ :ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿ ಯುತ ವ್ಯಕ್ತಿತ್ವ ದ ಮೂಲಕ ಅಪೂರ್ವ ವಾಗ್ಮಿಯತೆ ಹಾಗುಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ರಾಷ್ಟ್ರ ಚೇತನ ವನ್ನು ಜಾಗೃತ ಗೊಳಿಸಿ ಯುವಕರಲ್ಲಿ ನವೋತ್ಸಹ ವನ್ನು ಕೆರಳಿಸಿ ಅದರಲ್ಲಿ ನಮ್ಮ ಸಂಸ್ಕೃತಿ ಯ ಬಗ್ಗೆ ಹೆಮ್ಮೆ ಯನ್ನು ಕುದುರಿಸಿ ಸ್ವತಂತ್ರ ನವಭಾರತ ನಿರ್ಮಾಣ ಕ್ಕೆ ಬುನಾದಿ ಹಾಕಿದರು ಎಂದು ಜೇಸಿಐ ವಲಯ ಅಧ್ಯಕ್ಷ ಜೇಸಿ ನೆನೆಟರ್. ಕುನಾಲ್ ಮಾಣಿಕ್ ಚಂದ್ ಹೇಳಿದರು.
ಅವರು ಇಂದು ಜೇಸಿಐ ಗೋಣೀಬೀಡು ಹೊಯ್ಸಳ ಸಂಸ್ಥೆ ಯವರು.ಹೊಯ್ಸಳ ಪ್ರೌಢ ಶಾಲೆಯಲ್ಲಿ “ಯುವದಿನವನ್ನು ಸ್ವಾಮಿ ವಿವೇಕಾನಂದ “ರ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
1983ರಲ್ಲಿ ಚಿಕಾಗೋ ದಲ್ಲಿ ನೆಡದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ನೀಡಿದ ಭಾಷಣ ಇಂದಿಗೂ ಕೂಡ ಪ್ರಸಿದ್ದಿ ಯಾಗಿದೆ ಎಂದರು.
ಹೊಯ್ಸಳ ಪ್ರೌಢ ಶಾಲೆ ಮುಖ್ಯ ಶಿಕ್ಷಕ.ಎಂ.ಬಿ.ಪುಟ್ಟಸ್ವಾಮಿ ರವರು ಮಾತನಾಡುತ್ತ ಹಿಂದೂ ಧರ್ಮ ವನ್ನು ಪಾಶ್ಚಿಮತ್ಯರಿಗೆ ಪರಿಚಯಿಸಲು ಮಹತ್ತರ ವಾದ ಕೊಡುಗೆ ಯನ್ನು ನೀಡಿದರು ಅದರಲ್ಲೂ ವೇದಾಂತ. ಮತ್ತು ಯೋಗ ಪರಂಪರೆ ಯನ್ನು ಪ್ರಸಿದ್ದಿ ಗೊಳಿಸಿದರು ಅವರು ಹಿಂದೂ ಧರ್ಮ ವನ್ನು ಆಧುನಿಕರಣ ಗೊಳಿಸಲು ಶ್ರಮಿಸಿದರು ಎಂದರು.
ಜೇಸಿಐ ಗೋಣೀಬೀಡು ಹೊಯ್ಸಳ ಅಧ್ಯಕ್ಷ ರಾದ ಜೇಸಿ ಯೋಗೇಶ್ ಕುಮಾರ್ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಭಾರತೀಯ ಸಂಸ್ಕೃತಿ ಯನ್ನು ವಿದೇಶಿ ಯಾರು ಮೆಚ್ಚುವಂತೆ ಮಾಡಿದ ವೀರ ಸನ್ಯಾಸಿ ವಿವೇಕಾನಂದರುನಮಗೆ ಆದರ್ಶ ರಾಗಬೇಕು ಮತ್ತು ಅವರ ಸಂದೇಶ ಗಳನ್ನೂ ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಪೂರ್ವಧ್ಯಕರಾದ ವೈ ಬಿ ಸುಂದರೇಶ್. ಎಂ.ಸಿ.ಗಣೇಶ್ ಗೌಡ . ಕಾರ್ಯದರ್ಶಿ ರಂಜಿತ್. ವಿಕಾಸ್. ಜಗತ್. ಭರತ್. ಹಾಗು ಶಿಕ್ಷಕರ ವೃಂದ. ವಿದ್ಯಾರ್ಥಿ ಗಳು ಭಾಗವಹಿಸಿ ದ್ದರು.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |