*ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾದೀಕ್ಷೆ ಸಮಾರಂಭ*
1 min read
*ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾದೀಕ್ಷೆ ಸಮಾರಂಭ*
ನೂತನವಾಗಿ ಆಯ್ಕೆಯಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ಸೇವಾದೀಕ್ಷೆ ಸಮಾರಂಭವು ದಿನಾಂಕ :02:01:2022ನೇ ಭಾನುವಾರ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಷಿಯವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಅದರದೇ ಆದ ಸಂಸ್ಕೃತಿಯನ್ನು ಹೊಂದಿದ್ದು ಯತಾವತ್ತಾಗಿ ಓದಿ ಬರೆಯಬಲ್ಲ ಏಕೈಕ ಭಾಷೆ ಅದು ಕನ್ನಡವಾಗಿದೆ. ಪ್ರತಿಯೊಬ್ಬ ಕನ್ನಡಿಗನಿಗೂ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಸಿಗುವಂತಾಗಬೇಕು ಮತ್ತು ಕನ್ನಡದ ಯಾವುದೇ ಕಾರ್ಯಕ್ರಮ ಅತ್ಯಂತ ಸರಳ ಹಾಗೂ ಕನ್ನಡದ ಅಸ್ಮೀತೆಯನ್ನು ಉಳಿಸುವಂತಾಗಬೇಕು ಎಂದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಡಾ.ಕೆ.ಎನ್.ರಮೇಶ್. ಭುವನೇಶ್ವರಿ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು ಕಾರಣ ಅದಕ್ಕಿರುವ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕನ್ನಡದ ಸಾಹಿತ್ಯದಿಗ್ಗಜರ ಕೊಡುಗೆಯಾಗಿದೆ ಎಂದರು.
ಅಭಿನಂದನಾ ನುಡಿಯನ್ನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಬಿ.ವಿ.ವಸಂತ ಕುಮಾರ್ ಕನ್ನಡವನ್ನು ಕಟ್ಟಿ ಬೆಳೆಸುವ ದಿಸೆಯಲ್ಲಿ ಯುವಮನಸ್ಸುಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬಿತ್ತುವ ಕೆಲಸವಾಗಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಪರಿಷತ್ತಿನ ಧ್ವಜ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಪರಿಷತ್ತನ್ನು ಗ್ರಾಮೀಣ ಭಾಗದವರೆಗೂ ತಲುಪಿಸುವ ಗುರಿ ಹೊಂದಿದ್ದು, ಈ ನಿಮ್ಮ ನುಡಿ ಪರಿಚಾರಕನಿಗೆ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಹಿರಿಯ ಪತ್ರಕರ್ತರಾದ ಗಿರಿಜಾ ಶಂಕರ್ ಮಾತನಾಡಿ ಕನ್ನಡಕ್ಕೆ ಶ್ರಮಿಸುವ ಮನಸ್ಥಿತಿ ಕೇವಲ ಸಾಹಿತ್ಯ ಪರಿಷತ್ತಿನ ಜವಬ್ದಾರಿಯಾಗದೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು ಎಂದರು.
ನಿಕಟ ಪೂರ್ವ ಅಧ್ಯಕ್ಷರಾದ ಕುಂದೂರು ಅಶೋಕ್ ಮಾತನಾಡಿ ಜಾತಿ ಮತ ಧರ್ಮವೆಂಬ ಸಂಕೋಲೆಯನ್ನು ಭೇದಿಸುವ ಕೆಲಸ ಸಾಹಿತ್ಯಪರಿಷತ್ತಿನ ಕಾರ್ಯವಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕರಾದ ಡಾ.ಜೆ.ಪಿ.ಕೃಷ್ಣೇಗೌಡ ವಹಿಸಿದ್ದು ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಎಂ.ಎಲ್.ಮೂರ್ತಿ. ಕಾರ್ಯದರ್ಶಿ ಪವನ್. ಜಿಲ್ಲೆಯ ತಾಲ್ಲೂಕು ಅಧ್ಯಕ್ಷರುಗಳಾದ ಸೋಮಶೇಖರ್. ಸಿಂಗಟಗೆರೆ ಸಿದ್ದಪ್ಪ. ನವೀನ್ ಪೆನ್ನಯ್ಯ. ರಾಜಣ್ಣ. ಚಂದ್ರಕಲಾ. ಶೃಂಗೇರಿ ಸುಬ್ಬಣ್ಣ. ಕಾಂತರಾಜ್. ಶಾಂತಕುಮಾರ್. ಸತೀಶ್ಚಂದ್ರ. ಜಿಲ್ಲಾ ಪ್ರಧಾನ ಸಂಚಾಲಕ ಮೂಡಿಗೆರೆಯ ಮಗ್ಗಲಮಕ್ಕಿ ಗಣೇಶ್. ಜಿಲ್ಲಾ ಸಂಚಾಲಕರಾದ ಮೂಡಿಗೆರೆಯ ವಿಶಾಲ ನಾಗರಾಜ್ ಲಕ್ಷ್ಮಣ್ ಗೌಡ. ವಸಂತ್ ಹಾರ್ಗೋಡು. ಪ್ರಕಾಶ್. ಮಂಜುನಾಥ್ ಸ್ವಾಮಿ. ಸೋಮೇಶ್. ಮೋಹನ್ ರಾಜಣ್ಣ. ಮೇಕನಗದ್ದೆ ಲಕ್ಷ್ಮಣ್ ಗೌಡ. ತಿಮ್ಮೇಗೌಡ. ಮುಂತಾದವರು ಉಪಸ್ಥಿತರಿದ್ದರು.
ಬರಹ ಕೃಪೆ – ವಸಂತ್ ಹಾರ್ ಗೋಡು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್
http://nisargacare.com/career/
http://nisargacare.com/navachaithanya-old-age-home/