*ಅದಿಕಾರಿಗಳ ನಿರ್ಲಕ್ಷ್ಯ*
1 min read
*ಅದಿಕಾರಿಗಳ ನಿರ್ಲಕ್ಷ್ಯ*
ಚಿಕ್ಕಮಗಳೂರು ಜಿಲ್ಲೆ
ಮೂಡಿಗೆರೆಯ ವಲಯ ಕೃಷಿ ಮತ್ತು ತೋಟಗಾರಿಕ ಸಂಶೋದನ ಕೇಂದ್ರ.(ZERS)ಮೂಡಿಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ದುಡಿಮೆಗೆ ತೆರಳಿದ ಮಗನ ಬರುವಿಕೆಗೆ ಕಾದು ಕುಳಿತ ಹೆತ್ತವರಿಗೆ ಬಂದ ಕರೆಗೆ ಹೃದಯ ಒಡೆದ ಹಾಗಾಗಿತ್ತು
(ZARS)
ಗುತ್ತಿಗೆ ಅದಾರದಲ್ಲಿ ಕೆಲಸ ಮಾಡುತಿದ್ದ ಹರೀಶ್ ತನ್ನವರನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು .
ಬೆಳಗ್ಗೆ ಕೆಲಸಕ್ಕೆಂದು ತೆರಳಿದ್ದ ಹರೀಶ್. ಟ್ರಾಕ್ಟರ್ ಓಡಿಸುತ್ತಿದಾಗ ಟ್ರ್ಯಾಕ್ಟರ್ ಮೂರು ಪಲ್ಟಿ ಯಾಗಿ ತನ್ನ ಉಸಿರು ಚೆಲ್ಲಿದ್ದಾರೆ.
ಇವರು ಮೂಡಿಗೆರೆಯ ಬಿದರಹಳ್ಳಿ ಗ್ರಾಮದ ನಟರಾಜ್ ಅವರ ಮಗನಾಗಿದ್ದು ವಯಸ್ಸು 28 ವರ್ಷ.
ತಂದೆ ತಾಯಿ ಮತ್ತು ಪತ್ನಿ ಕುಟುಂಬಸ್ಥರನ್ನು ಯನ್ನು ಬಿಟ್ಟು ಅಗಲಿದ್ದಾರೆ
ಮದುವೆಯಾಗಿ ನಿನ್ನೆಗೆ 45 ದಿನಗಳು ಕಳೆದಿತ್ತು
. ಮೂಡಿಗೆರೆ ಸಮೀಪದ. ಹಳೇಕೊಟೆ ಬಳಿಯ
ತೋಟದಲ್ಲಿ ಹಳೆಯದಾದ ಟ್ರಾಕ್ಟರ್ ನಿಯಂತ್ರಣಕ್ಕೆ ಬಾರದೆ ಇಳಿಜಾರಿಗೆ ಉರುಳಿ ಹರೀಶ್ ಮೃತ ಪಟ್ಟಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಹರೀಶ ನನ್ನು ನೆನೆದು ಸ್ನೇಹಿತರು ಕಣ್ಣೀರಿಟ್ಟರು
ಮೃತ ದೇಹ ವನ್ನೂ ಮೂಡಿಗೆರೆಯ ಎಂಜಿಎಂ ಹಾಸ್ಪಿಟಲ್ನಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ ..
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನವನ್ನು ಸಕಾಲದಲ್ಲಿ ರೀಪೆರಿ ಮಾಡಿಸದಿದ್ದಕ್ಕೆ ಇ ಘಟನೆ ನಡೆದಿದೆ ಎನ್ನಲಾಗಿದೆ.
ಗಟನೆಯ ಸತ್ಯ ಸತ್ಯತೆ ಪೊಲೀಸರ ತನಿಖೆಯಿಂದ ತಿಳಿಯ ಬೇಕಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.