*ಕಾರ್ಯಾನುಭವ ಶಿಬಿರ*
1 min read
**ಸ್ವತಂತ್ರ ಭಾರತದ ಅಮೃತ ಮಹೋತ್ಸವದಿಂದ
ಸ್ವರ್ಣಿಮ ಭಾರತದೆಡೆಗೆ**
ಓಂ ಶಾಂತಿ…ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮೂಡಿಗೆರೆಯಲ್ಲಿ, ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ/ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಮಾಡುವುದಕ್ಕೆ ರಾಜಯೋಗಿನಿ ಬ್ರಹ್ಮಾ ಕುಮಾರಿ ಭಾಗ್ಯಕ್ಕರವರು ಜಿಲ್ಲಾ ಸಂಚಾಲಕರು ಚಿಕ್ಕಮಗಳೂರು ಇವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು ಇಂದು ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯ ಶಿಕ್ಷಣ, ರಾಜಯೋಗ ದ್ಯಾನ ಬಾಲ್ಯದಲ್ಲಿ ಬಹಳ ಅವಶ್ಯಕವಾಗಿದೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ, ಶಿಕ್ಷಕರು ಪ್ರತಿನಿತ್ಯ ಬದುಕುವ ಕಲೆ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಶಿವರಾಮೇಗೌಡರು, ಮತ್ತು ಶಿಕ್ಷಕರು, 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು, ಸ್ಥಳೀಯ ಸೇವಾ ಕೇಂದ್ರದ ರಾಜಯೋಗ ಶಿಕ್ಷಕಿಯರು ಬ್ರಹ್ಮಾ ಕುಮಾರಿ ಪ್ರೇಮಕ್ಕ ಮತ್ತು ಆತ್ಮಿಕ ಅಕ್ಕ ಉಪಸ್ಥಿತರಿದ್ದರು.
ಇದೆ ರೀತಿಯಲ್ಲಿ ಗೋಣಿಬೀಡು ಮತ್ತು ಅಕ್ಕ ಪಕ್ಕದ ಶಾಲೆಗಳು.
ಜನ್ನಾಪುರ.ಅಣಜೂರು.
ಮುತ್ತಿಗೆಪುರ ಪ್ರೈಮರಿ ಹೈಸ್ಕೂಲ್ ಇನ್ನು ಅನೇಕ ಕಡೆ ನಡೆಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.