लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಸ್ವತಂತ್ರ ಭಾರತದ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ**

1 min read
Featured Video Play Icon

*ಕಾರ್ಯಾನುಭವ ಶಿಬಿರ*

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ , ಶಿವಮೊಗ್ಗ. ತೋಟಗಾರಿಕೆ ಮಹಾವಿದ್ಯಾಲಯ , ಮೂಡಿಗೆರೆ. ಗ್ರಾಮೀಣ ತೋಟಗಾರಿಕಾ *ಕಾರ್ಯನುಭವ ಶಿಬಿರ*2021-2022 ರ ಭಾಗವಾಗಿ ಡಿಸೆಂಬರ್ 15, 16, 17 ರಂದು ಹೇಜ್ಜಿಗೇನಹಳ್ಳಿ ಗ್ರಾಮದಲ್ಲಿ ರೋಟರಿ ಕಾಫಿ ಲ್ಯಾಂಡ್ ಚಿಕ್ಕಮಗಳೂರು ಕ್ಲಬ್ ಅವರ ಸಹಯೋಗದಲ್ಲಿ ರೈತಕ್ರೀಡೆಯನ್ನು ಆಯೋಜಿಸಲಾಗಿತ್ತು.

ಈ ಕ್ರೀಡೆಯಲ್ಲಿ ರೈತರಿಗೆ ಹಗ್ಗಜಗ್ಗಾಟ, ಗೋಣಿಚೀಲದ ಓಟ ಮತ್ತು ಮಡಿಕೆ ಹೋಡಯುವ ಆಟ, ರೈತ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್ ಮತ್ತು ಗ್ರಾಮದಲ್ಲಿನ ಪುಟಾಣಿ ಮಕ್ಕಳಿಗೆ ನೀರು ತುಂಬುವ ಆಟ, ಚೆಂಡು ಎಸೆಯುವ ಆಟ, ಹಾಗೂ ಕಪ್ಪೆ ಜಿಗಿತವನ್ನು ಏರ್ಪಡಿಸಲಾಗಿತ್ತು. ವಿಜೇತ ರೈತ ಮತ್ತು ರೈತಮಹಿಳೆಯರಿಗೆ ತೆಂಗಿನ ಸಸಿಗಳನ್ನು ಮತ್ತು ವಿಜೇತ ಮಕ್ಕಳಿಗೆ ಓದಲು ಅವಶ್ಯಕವಾಗಿರುವಂತಹ ಬಹುಮಾನವನ್ನು ರೋಟರಿ ಕಾಫಿ ಲ್ಯಾಂಡ್ ಚಿಕ್ಕಮಗಳೂರು
ಕ್ಲಬನ ಸದಸ್ಯರಾದಂತಹ ಪ್ರಕಾಶ್, ಗುರುಮೂರ್ತಿ, ರವೀಂದ್ರನಾಥ್ ನಾಯ್ಡು, ದಯಾನಂದ್, ಹಾಗೂ ವಿವೇಕ್ ರವರು ವಿತರಿಸಿದರು.

ಸದಸ್ಯರಾದಂತಹ ಪ್ರಕಾಶ್ ರವರು ಗ್ರಾಮಸ್ತರನ್ನು ಕುರಿತು ಸಾವಯವ ಕೃಷಿಯ ಮಹತ್ವ, ಲಾಭ, ಅದರಿಂದ ಮಣ್ಣಿಗೆ ಆಗುವ ಲಾಭ ಗಳ ಬಗ್ಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯದ ಸಹನರವರು ತಮ್ಮ ಗಾಯನ ದೊಂದಿಗೆ ಎಲ್ಲರನ್ನೂ ಮನರಂಜಿಸಿದರು. ಅಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶಿವಕುಮಾರ್, ಪವನ್ ಕುಮಾರ್, ತೇಜ, ವಿಜಯ್ , ಹಾಗೂ ಸುಮಿತ್ ಅವರು ತೋಟಗಾರಿಕೆ ಬೆಳೆಗಳ ಸಮಗ್ರ ಬೇಸಾಯ ಕ್ರಮಗಳು, ಕೀಟ ಮತ್ತು ರೋಗ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ನಾಟಕದ ಮೂಲಕ
ನೀಡಿದರು. ಇನ್ನು ವಿದ್ಯಾರ್ಥಿ ನಿಯರಾದ ಸಹನ, ಪೂಜಾ, ಗಗನ, ಮರೀನಾ ಅವರು ಹೆಣ್ಣುಮಕ್ಕಳ ವಿದ್ಯಾಬ್ಯಾಸದ ಮಹತ್ವವನ್ನು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಸಂದೇಶವನ್ನು ನಾಟಕ ಮೂಲಕ ಸಾರಿದರು. ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ನೃತ್ಯದ ಮೂಲಕ ಗ್ರಾಮಸ್ತರನ್ನು ಮನರಂಜಿಸಿದರು.
ಈ ಕಾರ್ಯಕ್ರಮ ಅಂತ್ಯ ದಲ್ಲಿ ಸಮಸ್ತ ಗ್ರಾಮಸ್ತರಿಗೆ ಲಗು ಉಪಹಾರ ಮತ್ತು ಉಟದ ವ್ಯವಸ್ತೆ ಯನ್ನು ಮಾಡಲಾಗಿತ್ತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author