*ಜನ್ಮ ದಿನಾಚರಣೆ*
1 min read
*ಜನ್ಮ ದಿನಾಚರಣೆ*
ಕಡೂರಿನ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶ್ವ ಮಾನವ,ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಹಾಗೂ ಸಿ.ಅಶ್ವಥ್ ರವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಸೂರಿ ಶ್ರೀನಿವಾಸ್ ಅವರು ನೆರವೇರಿಸಿದರು. ಆರ್. ಜಿ.ಕೃಷ್ಣಸ್ವಾಮಿ ಅವರು ಕುವೆಂಪು ರವರನ್ನು ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಸಿಂಗಟಗೆರೆ ಸಿದ್ಧಪ್ಪನವರು ವಹಿಸಿದ್ದರು. ಗೌರವ ಕಾರ್ಯದರ್ಶಿ ಗಳಾದ ನಂಜುಂಡ ಸ್ವಾಮಿಯವರು ಸ್ವಾಗತಿಸಿ, ಕುಪ್ಪಾಳು ಶಾಂತಮೂರ್ತಿ ಅವರು ಸರ್ವರಿಗೂ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಡೂರು ನಗರ ಘಟಕದ ಅಧ್ಯಕ್ಷರಾದ ಹೊ.ರಾ.ಕೃಷ್ಣಕುಮಾರ್, ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಕೆ.ಪಿ.ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು. ಈ ಸುಸಮಯದಲ್ಲಿ ಕುವೆಂಪುರವರ ಗೀತೆಗಳ ಗಾಯನ ಹಾಗೂ ಸಿ.ಅಶ್ವಥ್ ರವರು ಹಾಡಿರುವ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.