*ಜನ್ಮ ದಿನಾಚರಣೆ*
1 min read
*ಜನ್ಮ ದಿನಾಚರಣೆ*
ಕೊಪ್ಪತಾ, ಹಿರೇಕೊಡಿಗೆ ಕುವೆಂಪು ಅವರ ಜನ್ಮಸ್ಥಳ. ಅಲ್ಲಿ ಕುವೆಂಪು ಸಂದೇಶ ಭವನವಿದೆ.
ತಾಲ್ಲೂಕು ತಹಶೀಲ್ದಾರ್, ಸಿಬ್ಬಂದಿ ವರ್ಗ ಮತ್ತು ತಾ. ಕ. ಸಾ. ಪ. ಜೊತೆಗೂಡಿ ಸಂದೇಶ ಭವನಕ್ಕೆ ತೆರಳಿ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಗೈದು ನುಡಿ ಗೌರವ ಸಲ್ಲಿಸಿದ ನಂತರ ತಾಲ್ಲೂಕು ಕಛೇರಿಯಲ್ಲಿ ವಿಶ್ವಮಾನವ ದಿನಾಚರಣೆಯ ಸಭಾ ಕಾರ್ಯಕ್ರಮ ನಡೆಸಲಾಯಿತು.
ಶಿಕ್ಷಕ ಆರ್,ಡಿ. ರವೀಂದ್ರ ಉಪನ್ಯಾಸ ನೀಡಿದರು. ಕ. ಸಾ. ಪ. ನ ಕಾರ್ಯದರ್ಶಿ ಬಿ. ವಿ. ಗುರುಮೂರ್ತಿ ವಿಶ್ವ ಮಾನವ ಸಂದೇಶ ಮಹತ್ವದ ಬಗ್ಗೆ ವಿವರಿಸಿದರು.
ನಂತರ ನಚಿಕೇತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಹೆಮ್ಮೆಯ ರಾಷ್ಟ್ರಕವಿ ಕೂರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ. ಸಾ. ಪ. ಕಾರ್ಯದರ್ಶಿ ಬಿ, ವಿ. ಗುರುಮೂರ್ತಿ ವಹಿಸಿದ್ದರು. ಕ. ಸಾ. ಪ. ಕಸಬಾ ಹೋಬಳಿ ಅಧ್ಯಕ್ಷ ಹೇಮಂತ ಶೆಟ್ಟಿ ಪ್ರಕಾಶ್ ದುರ್ಗೇಶ್ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.