लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಜನ್ಮ ದಿನಾಚರಣೆ*

1 min read
Featured Video Play Icon

*ಜನ್ಮ ದಿನಾಚರಣೆ*

ಕುವೆಂಪು ರವರ ಮೇರುಕೃತಿಗಳ ಲ್ಲಿ ವ್ಯಕ್ತವಾಗುವ ಮಲೆನಾಡ ನಿಸಗ೯ದ ಮೇಲಿನ ಪ್ರೀತಿ,ಅವರು ನೀಡಿದ ವಿಶ್ವಮಾನವ ಸಂದೇಶಗಳು ರಾಷ್ಟ್ರ ಕವಿಯ ಹೃದಯ ವೈಶಾಲ್ಯತೆಯ ಹಾಗೂ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತದೆ.ರಾಮಾಯಣ ಕೃತಿಯಲ್ಲಿ ಬರುವ ಶಬರಿಯ ಚಿತ್ರಣ ಇದಕ್ಕೊದು ಸ್ಪಷ್ಟವಾದ ನಿದಶ೯ನವಾಗಿದೆ ಎಂದು ಕ ಸಾ ಪ ಜಿಲ್ಲಾ ಪ್ರಧಾನ ಸಂಚಾಲಕ ಆಗುಂಬೆ ಗಣೇಶ ಹೆಗ್ಗಡೆ ಹೇಳಿದರು ಅವರು ಬುಧವಾರ ಶೃಂಗೇರಿ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕುವೆಂಪು ಮತ್ತು ಸಿ ಅಶ್ವಥ್ ಜನ್ಮ ದಿನೋತ್ಸವದಲ್ಲಿ ಮಾತನಾಡಿದರು.ಇನ್ನೊವ೯ ಮುಖ್ಯ ಅತಿಥಿ ಕ್ಷೇತ್ರಶಿಕ್ಷಣಾಧಿಕಾರಿ ಎನ್ ಜಿ ರಾಘವೇಂದ್ರ ಮಾತನಾಡಿ ಕುವೆಂಪು ಆಧುನಿಕ ಯುಗದಲ್ಲೂ ಹಳೆಗನ್ನಡದ ಕಂಪನ್ನು ಬೀರಿದ್ದಾರೆ.ಅವರ ಎಲ್ಲ ಕೃತಿಗಳೂ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿವೆ ಎಂದರು ಶ್ರೀಮತಿ ಪುಷ್ಪ ಲಕ್ಷೀನಾರಾಯಣ್ ಕುವೆಂಪುರವರ ಗೀತೆಯನ್ನು ಹಾಗೂ ಗಾಯಕ ಗೋಪಾಲಕೃಷ್ಣಅಶ್ವಥ್ ಹಾಡಿದ ಹಾಡನ್ನು ಪ್ರಸ್ತುತಪಡಿಸಿದರು. ತಾ ಕ ಸಾ ಪ ಅಧ್ಯಕ್ಷರಾದ ಶೃಂಗೇರಿ ಸುಬ್ಬಣ್ಣ ಕಾಯ೯ಕ್ರಮ ಅಧ್ಯಕ್ಷತೆ ವಹಿಸಿದ್ದರು ಹೋಬಳಿ ಅಧ್ಯಕ್ಷರುಗಳಾದ ಅಂಗುರುಡಿ ದಿನೇಶ್ ಮತ್ತು ತನಿಕೋಡು ಹೆಚ್ ಟಿ ಮಂಜುನಾಥ್ ಪೂವಾ೯ಧ್ಯಕ್ಷರುಗಳಾದ ಹೆಚ್ ಎ ಶ್ರೀನಿವಾಸ್, ಶೈಲಜಾರತ್ನಾಕರಹೆಗ್ಡೆ ,ಕೆ ಎನ್ ಗೋಪಾಲಹೆಗ್ಡೆ ,ಬೇಗಾನೆ ಕಾಡಪ್ಪಗೌಡ, ಪುಷ್ಪಲಕ್ಷೀನಾರಾಯಣ್ ,ವಿ ಆರ್ ನಟಶೇಖರ್ ,ಸಂಘ ಸಂಸ್ಥೆಗಳ ಪ್ರತಿನಿಧಿ ನಾಗೇಶಕಾಮತ್ ಹಾಜರಿದ್ದರು ಹೆಚ್ ಎ ಪ್ರಕಾಶ್ ಸ್ವಾಗತಿಸಿ ಹೆಗ್ಗದ್ದೆ ಶಿವಾನಂದರಾವ್ ನಿರೂಪಿಸಿ ಸುನೀತ ನವೀನ್ ಗೌಡ ವಂದಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author