*ಜಿಲ್ಲಾ ಕಸಾಪ ಕಾರ್ಯಕ್ರಮ*
1 min read
*ಜಿಲ್ಲಾ ಕಸಾಪ ಕಾರ್ಯಕ್ರಮ*
ದಿನಾಂಕ 24 ಡಿಸೆಂಬರ್ 2021 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ.ಚನ್ನಬಸಪ್ಪ ಪಟ್ಟದೇವರು ಇವರ 132ನೇಜಯಂತ್ಸುವ ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಶ್ರೀ ಸೂರಿ ಶ್ರೀ ನಿವಾಸ್ ವಹಿಸಿದ್ದರು . ಉದ್ಘಾಟನೆ ಯನ್ನು ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇದರ ಸದಸ್ಯ ರಾದ ಶ್ರೀ ಮತಿ ಲಕ್ಷ್ಮೀ ದೇವಮ್ಮ ನೆರವೇರಿಸಿ ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಲಾಭ ವಲ್ಲದ ಮನಸ್ಸಿರುವ ಪರಿಷತ್ತು, ಕನ್ಡ ತಾಯಿ ಆಶೀರ್ವಾದದಿಂದ ಕನ್ನಡ ಸಂಸ್ಕೃತಿಯ ನ್ನು ಬೆಳೆಸಬೇಕು ,ಬೆಳಸಬೇಕು ಎಂದರು.
ಉಪನ್ಯಾಸಕರಾಗಿ ಶ್ರೀ ಮತಿ ಚಂದ್ರಕಲಾ ಉಪನ್ಯಾಸ ಕರು, ಮತ್ತು ಅದ್ಯಕ್ಷರುಕ.ಸಾ.ಪ.ಕೊಪ್ಪ ಇವರುನಾಡು ನುಡಿಗಾಗಿ ಶ್ರಮಿಸಿ ಕನ್ನಡದ ಪಟ್ಟ ದೇವರು ಅನ್ನುವ ಕೀರ್ತಿ ಗೆ ಭಾಜನರಾದ ಡಾ.ಚನ್ನಬಸಪ್ಪ ಪಟ್ಟದೇವರು 1890ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಜನಿಸಿದ ಇವರು ಹೈದರಾಬಾದ್ ನಿಜಾಮನ ಕಾಲದ ಉರ್ದು ಆಡಳಿತ ಭಾಷೆಯ ಸಂದರ್ಭದಲ್ಲಿ ಕನ್ನಡತನ,ಸಂಸ್ಕೃತಿಗಳ ಬೆಳೆಸಲು ಕನ್ನಡ ಉಸಿರಾಗಿಸಿ ಕೊಂಡರು. ಶಾಲಾ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಪಾಠವನ್ನು ಹೇಳಿಕೊಡುತ್ತಿದ್ದರು. ಸರಳ ವಚನಗಳ ಮೂಲಕ ಶರಣರ ತತ್ವಗಳಲ್ಲಿ ಕನ್ನಡತ್ವವನ್ನು ಬೆಳೆಸಿದರು.
ಮಾನ್ಯರ 132ನೇ ಜಯಂತಿ ಪ್ರದರ್ಶನಕ್ಕಲ್ಲ ಇವರ ಮೌಲ್ಯ ಗಳನ್ನು ಸಾಹಿತ್ಯ, ಸಂಸ್ಕೃತಿ,ಸಂಗೀತ, ಕಲೆ ಮೂಲಕ ಕನ್ನಡ ಕಟ್ಟೋಣ ಎಂದು ತಿಳಿಸಿದರು. ಶ್ರೀ ಗುರು ದೇವ್,ಪ್ರ.ಸಂಚಾಲಕರು, ಜಿಲ್ಲಾ ಕ.ಸಾ.ಪ.ಮತ್ತು ಶ್ರೀ SM ಲೋಕೇಶಪ್ಪ ಸಂಘಟನಾ ಕಾರ್ಯದರ್ಶಿ ಜಿಲ್ಲಾ ಕ.ಸಾ.ಪ. ಉಪಸ್ಥಿತಿ ಇದ್ದರು.
ಹಾಗೂ ಗೌ.ಕಾರ್ಯದರ್ಶಿ SS ವೆಂಕಟೇಶ್, ಶ್ರೀ ಪವನ್ GB ,ಗೌ.ಕೋಶಾಧ್ಯಕ್ಷರು ಶ್ರೀ ಬಿ.ಪ್ರಕಾಶ್ ಹಾಗೂ 9 ತಾಲ್ಲೂಕಿನ ಅಧ್ಯಕ್ಷ ರುಗಳು ಜಿಲ್ಲಾ ಮತ್ತು ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.