*ವಾರ್ಷಿಕ ಸಭೆ* ಹಂತೂರು ಇದರ ವಾರ್ಷಿಕ ಮಹಾ ಸಭೆ ನಡೆಯಿತು
1 min read
ಇಂದು ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ; ಹಂತೂರು ಇದರ ವಾರ್ಷಿಕ ಮಹಾ ಸಭೆ ನಡೆಯಿತು
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಉತ್ತಮ್ ಕುಮಾರ್ ವಹಿಸಿದ್ದರು
ಸಭೆಯಲ್ಲಿ ಹಂತೂರು ಸಹಕಾರಿ ಸಂಘದ ವ್ಯಾಪ್ತಿಯ 7 ನೇ ಮತ್ತು 10 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಕೋವಿಡ್ ಸಮಯದಲ್ಲಿ ಉತ್ತಮ ಸೇವೆ ನೀಡಿದ ಡಾ,ಗೌತಮ್ ಹಾಗೂ ಹಂತೂರು ಮತ್ತು ದೇವರುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮೋಹನ್ ಜಾಣಿಗೆ ಯವರು ಆರೋಗ್ಯ ಇಲಾಖೆಯ ಪ್ರತಿಯೊಬ್ಬರೂ ತಮ್ಮ ಜೀವದ ಹಂಗು ತೊರೆದು ಸೊಂಕಿತರ ಮನೆ ಬೇಟಿ ಮಾಡಿ ಸೂಕ್ತ ಚಿಕಿತ್ಸೆ ನೀಡಿ ದೖರ್ಯ ತುಂಬುವ ಕೆಲಸ ಮಾಡುವುದರ ಜೊತೆಗೆ ಎಲ್ಲರಿಗೂ ಲಸಿಕೆ ಹಾಕುವ ಕಾರ್ಯದಲ್ಲೂ ಯಶಸ್ವಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು
ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಹಳಸೆ ಶಿವಣ್ಣನವರು ಮಾತನಾಡಿ ಹಂತೂರು ಸಹಕಾರಿ ಸಂಘ ಯಶಸ್ಸಿನ ಹಾದಿಯಲ್ಲಿದೆ ಇದನ್ನು ಹೀಗೆ ಕಾಪಾಡಿಕೊಂಡು ಹೋಗುವಂತೆ ಸಲಹೆ ನೀಡಿದರು
ಹಳಸೆ ಶಿವಣ್ಣನವರನ್ನು ಸನ್ಮಾನಿಸಲಾಯಿತು
ನಂತರ ರಾಷ್ಟೀಯ ಕಿಸಾನ್ ಮೋರ್ಚಾದ ಸದಸ್ಯರು ಹಾಗೂ ಹಂತೂರು ಸಹಕಾರಿ ಸಂಘದ ಯಶಸ್ಸಿನ ಮಾಜಿ ಅಧ್ಯಕ್ಷರು ಆದ ದೇವರುಂದ ದಿನೇಶ್ ರವರನ್ನು ಸನ್ಮಾನಿಸಲಾಯಿತು
ಸನ್ಮಾನ ಸ್ವೀಕರಿಸಿ ಮಾತನಾಡಿದ ದಿನೇಶ್ ರವರು ನೆರೆದಿದ್ದ ರೈತರಿಗೆ ಸುಮಾರು 1 ಗಂಟೆಗಳ ಕಾಲ ಕೃಷಿಯ ಬಗ್ಗೆ ಉತ್ತಮ ಮಾಹಿತಿ ನೀಡಿದರು,ನಾವುಗಳು ಬೆಳೆದ ಕಾಫಿ,ಕಾಳು ಮೆಣಸು,ಹಾಗೂ ಇತರ ಬೆಳೆಗಳಿಗೆ ಯಾವ ರೀತಿ ಬೆಲೆ ತೆಗೆದುಕೊಳ್ಳಬೇಕು,ಸಕಾಲಕ್ಕೆ ಮಣ್ಣು ಪರೀಕ್ಷೆ ಮಾಡಬೇಕು,ಯಾವ ಗೊಬ್ಬರ ಹಾಕಬೇಕು ಎಂಬ ಮಾಹಿತಿ ನೀಡಿದರು
ಅಧ್ಯಕ್ಷರಾದ ಉತ್ತಮ್ ಕುಮಾರ್ ಮಾತನಾಡಿ ಈ ಸಾಲಿನಲ್ಲಿ ನಮ್ಮ ಹಂತೂರು ಸಹಕಾರಿ ಸಂಘ 15 ಲಕ್ಷ ಲಾಭಂಶ ಗಳಿಸಿದೆ,ಮುಂದಿನ ದಿನದಲ್ಲಿ ಹೊಸ ಯೋಜನೆಗಳೊಂದಿಗೆ ಸಹಕಾರಿ ಸಂಘದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು
ನಿರ್ದೇಶಕರಾದ ನಯನ್ ಕಣಚೂರು ಸ್ವಾಗತಿಸಿದರು
ವ್ಯವಸ್ಥಾಪಕರಾದ ಸುಮಿತ್ರೆಗೌಡ್ರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ
C C ಲಕ್ಷ್ಮಿ
K M ಪ್ರಸನ್ನ
U P ಗಿರೀಶ್
B G ಪ್ರಕೃತಿ
J B ನಾಗೇಶ್
K N ನಯನ್ ಕುಮಾರ್
K A ಸುರೇಶ್
H P ರವಿ
P M ಬಾಬು
ಮೇಲ್ವಿಚಾರಕರಾದ ನಿತಿನ್ ಪಟೇಲ್ ಮತ್ತು ಪ್ರಯಾಗ್
ಕಣಚೂರು ವಿನೋದ್,ಹಂತೂರು ಸುರೇಶ್,ಹಾಗೂ ಸಂಘದ ಸದಸ್ಯರು ಮುಖಂಡರು