लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಕನ್ನಡ ಬಾವುಟಕ್ಕೆ ಬೆಂಕಿಸಿಡಿದೆದ್ದ ಕಸಾಪ ಕಡೂರು**

1 min read
Featured Video Play Icon

**ಕನ್ನಡ ಬಾವುಟಕ್ಕೆ ಬೆಂಕಿ
ಸಿಡಿದೆದ್ದ ಕಸಾಪ ಕಡೂರು**

ಕಡೂರಿನ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆ ಜರುಗಿತು.
ಈ ಸಭೆಯ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಸೂರಿ ಶ್ರೀನಿವಾಸ್ ಅವರು ವಹಿಸಿದ್ದರು.
1.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಘೋಷಣೆ ಮಾಡಿ ಹಾಜರಿದ್ದ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು.
2. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕಿಡಿಗೇಡಿಗಳು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ
ಪ್ರಕರಣವನ್ನು ಸಭೆ ಒಕ್ಕೊರಲಿನಿಂದ ಖಂಡಿಸಿತು.
3. ಈ ದಿನ ಬೆಳಗಾವಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿದವರ ವಿರುದ್ಧವೂ ಸಭೆ ವಿರೋಧ ವ್ಯಕ್ತಪಡಿಸಿತು.
3. ದಿನಾಂಕ 02/ 01/2022 ರಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಸೂರಿ ಶ್ರೀನಿವಾಸ್ ಅವರು ತಿಳಿಸಿದರು.
4. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಗಳಾಗಿ ಕುಪ್ಪಾಳು ಶಾಂತಮೂರ್ತಿ ಹಾಗೂ ನಂಜುಂಡಸ್ವಾಮಿ ಅವರನ್ನು ಆಯ್ಕೆ ಮಾಡಿ ಅಭಿನಂದಿಸಲಾಯಿತು.
5.ಕೋಶಾಧ್ಯಕ್ಷರಾಗಿ ವಡೇರಹಳ್ಳಿ ಅಶೋಕ್ ಅವರನ್ನು ಆಯ್ಕೆ HBಮಾಡಲಾಯಿತು.
ಪದಾಧಿಕಾರಿಗಳಾಗಿ ಅಣ್ಣಪ್ಪನಾಯ್ಕ, ಶೂದ್ರ ಶ್ರೀನಿವಾಸ್, ಆರ್. ಶಿವಮ್ಮ, ಅನಿತಾ ಸುದರ್ಶನ್, ಶೋಭಾಶ್ರೀನಿವಾಸ್, ಎನ್.ಡಿ.ಸೀತಾಲಕ್ಷ್ಮಿ, ಹೊ.ರಾ.ಕೃಷ್ಣಕುಮಾರ್, ಜಗದೀಶಾಚಾರ್, ಆರ್.ಜಿ.ಕೃಷ್ಣಸ್ವಾಮಿ, ಮುಂತಾದವರನ್ನು ಆಯ್ಕೆ ಮಾಡಲಾಯಿತು.
6. ಗೌರವಾಧ್ಯಕ್ಷರಾಗಿ ಹೆಚ್.ಸಿ.ರೇವಣಸಿದ್ದಪ್ಪ, ಹೆಚ್.ಎಂ.ಲೋಕೇಶ್, ಕ್ಷೇತ್ರಪಾಲ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರ ಅಪ್ಪಣೆ ಮೇರೆಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಅವರು ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿಂಗಟಗೆರೆ ಸಿದ್ದಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎಂ ರಾಜಪ್ಪ, ತಾಲ್ಲೂಕು ಸಮಿತಿಯ ಪದಾಧಿಕಾರಿಗಳಾದ ಹೆಚ್.ಎಂ.ಲೋಕೇಶ್, ಹೆಚ್.ಸಿ.ರಾವಣಸಿದ್ದಪ್ಪ, ಎಸ್.ಟಿ.ರಾಜಪ್ಪ, ಮುಂತಾದವರು ಮಾತನಾಡಿದರು.ಜಗದೀಶಾಚಾರ್ ಪ್ರಾರ್ಥನೆ ಮಾಡಿದರೆ, ಕುಪ್ಪಾಳು ಶಾಂತಮೂರ್ತಿ ಸ್ವಾಗತಿಸಿದರು, ನಂಜುಂಡಸ್ವಾಮಿ ಸರ್ವರಿಗೂ ವಂದನಾರ್ಪಣೆ ಸಲ್ಲಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

ಶಾಸಕರು ಅಧಿಕಾರಿಗಳು ಗಮನ ಹರಿಸದೆ ಇರುವದು ನಾಚಿಗೇಡಿತನ ಸಂಗತಿ

About Author