ಶ್ರೀ ಶನೇಶ್ಚರ ದೇವಸ್ಥಾನದಲ್ಲಿ ನಡೆದ ಕಾರ್ತಿಕ ದೀಪೊತ್ಸವ ಆಚರಣೆ
1 min read
ಶ್ರೀ ಶನೇಶ್ಚರ ದೇವಸ್ಥಾನದಲ್ಲಿ ನಡೆದ ಕಾರ್ತಿಕ ದೀಪೊತ್ಸವ ಆಚರಣೆ
ಕಾರ್ತಿಕ ಮಾಸದಂದು ಲಕ್ಷ್ಮೀ ದೇವಿ ಎದ್ದಳು ಇನ್ನು ಭಗವಂತ ಕೂಡ ಯೋಗ ನಿದ್ರೆಯಿಂದ ಎದ್ದೇಳುತ್ತಾರೆ ಎಂದು ಸಂಭ್ರಮದಿಂದ ದೀಪಗಳನ್ನು ಹಚ್ಚಿ ವಿಶೇಷ ಪೂಜೆಯನ್ನು ಮಾಡುವ ಸಂಪ್ರದಾಯ ಅಂದಿನ ಕಾಲದಿಂದಲೂ ನಡೆದು ಬಂದಿದೆ..ದಿನಾಂಕ 1/12/2021 ರ ಬುಧವಾರದಂದು ಮೂಡಿಗೆರೆ ಪಟ್ಟಣದ ಶ್ರೀ ಶನೇಶ್ಚರ ದೇವಸ್ಥಾನದಲ್ಲಿ ಕಾರ್ತಿಕ ದೀಪೊತ್ಸವ ನಡೆಯಿತು..ದೇವಸ್ಥಾನವನ್ನು ದೀಪಾಲಂಕಾರದೊಂದಿಗೆ ಹಾಗೂ ಹೂವಿನಿಂದ ಶೃಂಗರಿಸಲಾಗಿತ್ತು, ಮಹಿಳೆಯರಿಂದ ಭಜನಾ ಕಾರ್ಯಕ್ರಮವಿದ್ದು..ದಾವಣಗೆರೆಯ ಭಕ್ತಾದಿಗಳಾದ ಹರೀಶ್ ಹಾಗೂ ರಶ್ಮಿರವರು ರಂಗಪೂಜೆ ಶನೇಶ್ಚರ ಸ್ವಾಮಿಗೆ ಬೆಳ್ಳಿಯ ಮುಖವಾಡವನ್ನು ಮತ್ತು ಕಿರೀಟವನ್ನು ಸಮರ್ಪಸಿದರು,ಅವರಿಗೆ ಸಮಿತಿಯ ವತಿಯಿಂದ ಸನ್ಮಾನ ಮಾಡಲಾಯಿತು ..ಮಹಿಳೆಯರು ಮತ್ತು ಮಕ್ಕಳು ದಿಪದಿಂದ ದೀಪವನ್ನು ಬೆಳಗಿಸಿದರು..ಕತ್ತಲಿನಿಂದ ಬೆಳಕಿನೆಡೆಗೆ ಹಾಗೆಯೇ ಅಜ್ನಾನದಿಂದ ಜ್ನಾನದೆಡೆಗೆ ಸಾಗಬೇಕು ಎಂಬ ಹಿತ ನುಡಿಗಳೊಂದಿಗೆ ಪೂಜಾ ಕಾರ್ಯಕ್ರಮವನ್ನು ಶ್ರೀ ಶನೇಶ್ಚರ ಸೇವಾ ಸಮಿತಿ(ರಿ)ಬಹಳ ಭಕ್ತಿಯಿಂದ ನಡೆಸಿಕೊಟ್ಟರು,ನಂತರ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ವರದಿ: ಮಗ್ಗಲಮಕ್ಕಿ ಗಣೇಶ್