ನಾಪತ್ತೆಯಾಗಿದ ವ್ಯಕ್ತಿ ಶವವಾಗಿ ಪತ್ತೆ:ಕೊಲೆ ಶಂಕೆ
1 min read
ನಾಪತ್ತೆಯಾಗಿದ ವ್ಯಕ್ತಿ ಶವವಾಗಿ ಪತ್ತೆ:ಕೊಲೆ ಶಂಕೆ
ಮೂಡಿಗೆರೆ.ಕೊಟ್ಟಿಗೆಹಾರ:
ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಳೂರಿನ ನಾಗೇಶ್ ಅಚಾರ್(46) ಅವರ ಮೃತದೇಹ ಬಿದಿರುತಳದಲ್ಲಿ ಪತ್ತೆಯಾಗಿದೆ.
ಬಿದಿರುತಳಕ್ಕೆ ಕೆಲಸಕ್ಕೆಂದು ಹೋಗಿದ್ದ ನಾಗೇಶ್ ಆಚಾರ್ ಅವರು ಕೆಲದಿನಗಳಿಂದ ನಾಪತ್ತೆಯಾಗಿದ್ದರು.
ಈ ಬಗ್ಗೆ ನಾಗೇಶ್ ಆಚಾರ್ ಅವರ ಪತ್ನಿ ಸುಮ ಬಾಳೂರು ಠಾಣೆಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಬಿದಿರುತಳದಲ್ಲಿ ಕಳೆದ ಎರಡು ದಿನಗಳಿಂದ ಪೋಲಿಸರು, ಅರಣ್ಯ ಅಧಿಕಾರಿಗಳು ಹಾಗೂ 100 ಕ್ಕೂ ಹೆಚ್ಚು ಗ್ರಾಮಸ್ಥರು ಹುಡುಕಾಟ ನಡೆಸಿದ್ದು ಮಂಗಳವಾರ ಸಂಜೆ ಬಿದಿರುತಳದ ಅರಣ್ಯದಲ್ಲಿ ಮೃತ ದೇಹ ಪತ್ತೆಯಾಗಿದೆ.
ಬಿದಿರುತಳ ಗ್ರಾಮದಿಂದ ಸುಮಾರು ಒಂದು ಕಿ.ಮಿ ದೂರದಲ್ಲಿ ಅರಣ್ಯ ಪ್ರದೇಶದಲ್ಲಿ ಮೃತದೇಹವನ್ನು ಹೂತು ಹಾಕಿದ್ದು ವಾಸನೆ ಹಾಗೂ ಹೆಜ್ಜೆ ಗುರುತಿನ ಆಧಾರದಲ್ಲಿ ಮೃತದೇಹವನ್ನು ಪತ್ತೆ ಹಚ್ಚಲಾಯಿತು.
ಕಳೆದ ಮೂರುದಿನದಿಂದ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು.
ಮೃತದೇಹವನ್ನು ಹಾಸನದ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತರ ಪತ್ನಿಯಿಂದ ಕೊಲೆ ಆರೋಪ:ದೂರು
ಬಾಳೂರಿನ ಕೃಷ್ಣೆಗೌಡ, ಪ್ರದೀಪ್, ಉದಯ್ ಎಂಬುವವರು ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಮೃತರ ಪತ್ನಿ ಸುಮ ಬಾಳೂರು ಠಾಣೆಗೆ ದೂರು ನೀಡಿದ್ದಾರೆ. ಮೂವರನ್ನು ಪೋಲಿಸರು ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ.
ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/
http://nisargacare.com/navachaithanya-old-age-home/