*ಸಹಾಯ ಹಸ್ತ*
1 min read
*ಸಹಾಯ ಹಸ್ತ*………………………ದಿನಾಂಕ:30/11/2021ಮೂಡಿಗೆರೆಯ ಬಿಜುವಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೀರಿನ ವ್ಯವಸ್ಥೆ ಹಾಳಾದ ಕಾರಣ
ಈ ದಿನ ಬಿಜುವಳ್ಳಿ ಶಾಲೆಯಲ್ಲಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಡಿ ಎಂದು ಮುಖ್ಯ ಉಪಾಧ್ಯಾಯರಾದ ಧರಣಿಯವರು,ಎಂ ಕೆ ಅಬ್ದುಲ್ ರೆಹಮಾನ್ ರವರಿಗೆ ಕರೆಮಾಡಿ ಸಮಸ್ಯೆಯನ್ನು ತಿಳಿಸಿದ್ದರಿಂದ ತಕ್ಷಣ ಕಾಫಿನಾಡು ಸಮಾಜ ಸೇವಕರು ಅಸೈನಾನ್ ಬಿಳಗುಳ,ಅಬ್ದುಲ್ ರೆಹಮಾನ್ ಬಿಳಗುಳ ಇವರುಗಳು ಶಾಲೆಗೆ ತೆರಳಿ ಖರ್ಚು ವೆಚ್ಚವನ್ನು ತಾವೆ ಭರಿಸಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಟ್ಟಿರುತ್ತಾರೆ. ಹಾಗೂ ಸಮಾಜ ಸಕ್ರಿಯಾ ಸೇವಾ ಸಂಸ್ಥೆಯ ಅಧ್ಯಕ್ಷ ಫಿಶ್ ಮೋಣು,ಗಣೇಶ್, ಶ್ರೀಧರ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.