लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ರೈತರ ಬೆನ್ನುಲುಬು ಮುರಿದ ಸರ್ಕಾರ*

1 min read
Featured Video Play Icon

*ರೈತರ ಬೆನ್ನುಲುಬು ಮುರಿದ ಸರ್ಕಾರ*

ಇವರಿಗೆ
ಜಿಲ್ಲಾಧಿಕಾರಿಗಳು
ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು.

ಮಲೆನಾಡು ಭಾಗದ ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ, ಕಳಸ,ಕೊಪ್ಪ, ಎನ್ಆರ್ ಪುರ ತಾಲೂಕುಗಳಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದ ಅರೇಬಿಕ ಕಾಫಿ ಹಣ್ಣುಗಳು ಕೊಳೆತು ಎಲೆ ಸಮೇತ ಉದುರಿ ಶೇಕಡ 80ರಷ್ಟು ಪಸಲು ನಷ್ಟ ಉಂಟಾಗಿರುತ್ತದೆ. ಜನವರಿಯಿಂದ ವರ್ಷಪೂರ್ತಿ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಫಿ, ಕಾಳುಮೆಣಸು , ಅಡಕೆ ಅರ್ಧದಷ್ಟು ಬೆಳೆ ಹಾನಿಯಾಗಿದೆ .ಇದೇ ಪರಿಸ್ಥಿತಿ ಮುಂದುವರಿದರೆ ರೋಬಸ್ಟ ಫಸಲು ಉಳಿಯು ದಿಲ್ಲ. ಅರೇಬಿಕ ಕಾಫಿ ಗಿಡಗಳು ಎಲೆ ಉದುರಿ ತೋಟಗಳೇ ನಿರ್ನಾಮವಾಗುವ ಸನ್ನಿವೇಶವು ಎದುರಾಗಿದೆ.
ಶೇಕಡ 50ರಷ್ಟು ಅಡಕೆ ಕೊಳೆ ರೋಗಕ್ಕೆ ತುತ್ತಾಗಿದೆ.ಈ ನಷ್ಟ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ .ಬಯಲು ಭಾಗದಲ್ಲಿ ರಾಗಿ, ಸಾಮೆ, ಮೆಕ್ಕೆಜೋಳ ,ಈರುಳ್ಳಿ ,ಆಲೂಗಡ್ಡೆ ,ಅಡಕೆ ,ಬೆಳೆಗಳು ನಾಶವಾಗಿವೆ. ಜಿಲ್ಲೆಯಲ್ಲಿ 4 ಸಾವಿರ ಕೋಟಿ ರೂಗಳಿಗೂ ಅಧಿಕ ಮೌಲ್ಯದ ಫಸಲು ನಾಶವಾಗಿದೆ.
ವಾಡಿಕೆಯಂತೆ ಮಾರ್ಚ್, ಏಪ್ರಿಲ್ ಮೊದಲ ವಾರದಲ್ಲಿ ಕಾಫಿಗೆ ಹೂಮಳೆ ಬೀಳುವ ಬದಲಿಗೆ ಅಕಾಲಿಕವಾಗಿ ಜನವರಿ ,ಫೆಬ್ರವರಿಯಲ್ಲಿ ಅಧಿಕ ಪ್ರಮಾಣದಲ್ಲಿ ಸುರಿದ ಮಳೆಯಿಂದ ಆಗಸ್ಟ್ ತಿಂಗಳಿನಿಂದ ಅರೇಬಿಕಾ ಕಾಫಿ ಹಣ್ಣು ಬಂದಿದ್ದು ಕೊಯ್ಲು ಮಾಡಲು ಸಾಧ್ಯವಾಗದೇ ಕೊಳೆತು ಮಣ್ಣುಪಾಲಾಗಿದೆ . ಕೊಳೆತು ಉದುರುತ್ತಿರುವ ಕಾಫಿ ಹಣ್ಣುಗಳಿಂದ ತೋಟಗಳು ರೋಗಕ್ಕೆ ತುತ್ತಾಗುವ ಭೀತಿ ಉಂಟಾಗಿದೆ . ಅಲ್ಪಸ್ವಲ್ಪ ಕೊಯ್ಲು ಮಾಡಿದ ಕಾಫಿ ,ಅಡಕೆ ಒಣಗಿಸಲು ಸಾಧ್ಯವಾಗದೆ, ಗುಣಮಟ್ಟ ಹಾಳಾಗುತ್ತಿದೆ . ಭತ್ತದ ಬೆಳೆ ಕಟಾವಿಗೆ ಬಂದಿದ್ದು ನಿರಂತರ ಮಳೆಯಿಂದ ಅಡ್ಡಿ ಉಂಟಾಗಿ ರೈತ ಬೆಳಗಾರರು ಕಂಗಾಲಾಗಿದ್ದಾರೆ. ಕೃಷಿ ಯಂತ್ರೋಪಕರಣ,ರಸಗೊಬ್ಬರ ,ಕೀಟನಾಶಕ ,ಕ್ರಿಮಿನಾಶಕ , ಕಾರ್ಮಿಕರ ಕೂಲಿ ದುಪ್ಪಟ್ಟಾಗಿದೆ, ಇದಲ್ಲದೆ ಕಳಪೆ ರಸಗೊಬ್ಬರ, ಕೀಟನಾಶಕ ತಯಾರು ಮಾಡುವ, ಹಾಗೂ ಮಾರಾಟಗಾರರ ಜೀವಂತವಾಗಿದ್ದು ಇವರ ಜೊತೆ ಇಲಾಖೆಗಳು ಶಾಮೀಲಾಗಿ ಕೃಷಿಕರ ಬದುಕು ಡೋಲಾಯಮಾನವಾಗಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಪ್ರಕೃತಿ ವಿಕೋಪದ ಜೊತೆಗೆ ಕೃಷಿ ಜಮೀನಿಗೆ ಕಾಡುಕೋಣಗಳು, ಆನೆಗಳು ,ಮಂಗಗಳು ಹಿಂಡುಹಿಂಡಾಗಿ ನುಗ್ಗಿ ಕಾಫಿ, ಅಡಕೆ ,ಬಾಳೆ ,ಭತ್ತದ ಬೆಳೆಗಳನ್ನು ನೆಲಸಮ ಮಾಡುತ್ತಿವೆ. ಕಾಡು ಪ್ರಾಣಿಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತ ಬೆಳಗಾರರಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಈ ಮೊದಲೇ ನಿರಂತರ ಸುರಿಯುತ್ತಿರುವ ಮಳೆಯಿಂದ ಕಾಫಿ, ಅಡಕೆ ,ಕಾಳುಮೆಣಸು ಬೆಳೆಗಳ ಮೇಲೆ ಖಾಸಗಿ ಬಡ್ಡಿ ಸಾಲ , ಕಾಫಿ ವ್ಯಾಪಾರಸ್ಥರಿಂದ ಸಾಲ, ಬ್ಯಾಂಕ್ ಸಾಲ ಮಾಡಿ ಹಾಕಿರುವ ಹಣ ನಷ್ಟವುಂಟಾಗಿ ಕೃಷಿಕರು ಕಣ್ಣೀರಿಡುತ್ತಿದ್ದಾರೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಸತತ ಮೂರು ವರ್ಷಗಳಿಂದ ಬೆಳೆ ಕಳೆದುಕೊಂಡು ನಷ್ಟದ ಸುಳಿಯಲ್ಲಿರುವ ರೈತ ಬೆಳಗಾರರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಲದ ಹೊರೆ ದಿನದಿಂದ ದಿನಕ್ಕೆಹೆಚ್ಚಾಗುತ್ತಿದೆ, ಇಂತಹ ಸಂಕಷ್ಟದ ದಿನಗಳಲ್ಲಿ ರೈತ ಬೆಳೆಗಾರರ ಸಾಲ ವಸೂಲಾತಿಗೆ ಬ್ಯಾಂಕುಗಳು ಮುಂದಾಗಿರುವುದು ಅಮಾನವೀಯ. ಸಾಲಗಾರ ರೈತರ ಭೂಮಿಯನ್ನು ಹರಾಜು ಮಾಡುವುದಾಗಿ ಡಿ. ಆರ್. ಟಿ ಹಾಗೂಸ್ಥಳೀಯ ನ್ಯಾಯಾಲಯದಲ್ಲಿ ದಾವ ದಾಖಲು ಮಾಡಿ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಭೂಮಿ ಹರಾಜು ಪ್ರಕ್ರಿಯೆಗೆ ಮುಂದಾಗಿರುವ ಕ್ರಮಸರಿಯಲ್ಲ. ರೈತರು ಸಾಲದ ಸುಳಿಗೆ ಬೀಳಲು ಕಾರಣವಾದ ಅಂಶಗಳನ್ನು ಗಮನಿಸದೆ ಸರ್ಫೆಸಿ ಕಾಯ್ದೆ ಮೂಲಕ ಜಮೀನು ವಶ ಪಡಿಸಿಕೊಳ್ಳುವ ಕ್ರಮ ಖಂಡನೀಯ.ಕಾಫಿ ವಹಿವಾಟು ಕೇವಲ ವಾಣಿಜ್ಯ ವ್ಯವಹಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ.ಬೆಳೆಗಾರರ ಜೀವನೋಪಾಯದ ಪ್ರಶ್ನೆಯಾಗಿದೆ. ಪ್ರಕೃತಿ ವಿಕೋಪ ದಂತ ಪರಿಸ್ಥಿತಿಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿರುವುದು ಖಂಡನೀಯ. ರೈತರ ನೆರವಿಗೆ ಧಾವಿಸ ಬೇಕಾದ ಸರ್ಕಾರ, ಜಿಲ್ಲಾಡಳಿತ ,ಜನಪ್ರತಿನಿಧಿಗಳು ಸೂಕ್ತರೀತಿಯಲ್ಲಿ ಸ್ಪಂದಿಸದೆ ಕಣ್ಣು ಮುಚ್ಚಿ ನಿರ್ಲಕ್ಷ ತಾಳಿರುವುದು ನಾಚಿಕೆಗೇಡು .ಜಿಲ್ಲಾಡಳಿತ ವೈಜ್ಞಾನಿಕವಾದ ಬೆಳೆ ಸಮೀಕ್ಷೆ ನಡೆಸಿ ಬೆಳೆ ನಷ್ಟದ ವಾಸ್ತವ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಬೆಳೆನಷ್ಟಕ್ಕೆ ಹೆಕ್ಟೇರಿಗೆ 2 ಲಕ್ಷಪರಿಹಾರ ನೀಡಬೇಕು. ಸತತ ಮಳೆಯಿಂದ ನೋವನ್ನು ಅನುಭವಿಸುತ್ತಿದ್ದು ಕೃಷಿಕರು ಬೇಸತ್ತಿದ್ದಾರೆ. ಜಿಲ್ಲಾ ಕಛೇರಿಗೆ ರೈತರು ಬರುವ ಮೊದಲು ಜಿಲ್ಲಾಡಳಿತದ ಎಚ್ಚೆತ್ತುಕೊಳ್ಳಬೇಕೆನ್ಧು ಮನವಿ ಮಾಡಿಕೊಳ್ಳುತೇವೆ.

ವಂದನೆಗಳೊಂದಿಗೆ
ಡಿ.ಆರ್ ದುಗ್ಗಪ್ಪ ಗೌಡ
ಜಿಲ್ಲಾಧ್ಯಕ್ಷರು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Assisted living facilities in Bangalore India

About Author