ಮಕ್ಕಳ ದಿನಾಚರಣೆಯ ಸಂಭ್ರಮ
1 min read
ಮಕ್ಕಳ ದಿನಾಚರಣೆಯ ಸಂಭ್ರಮ
ಸ ಹಿ ಪ್ರಾ ಶಾಲೆ ಬೆಟ್ಟದಮನೆ, ಮೂಡಿಗೆರೆ ತಾ. ಚಿಕ್ಕಮಗಳೂರು ಜಿಲ್ಲೆ ಇಲ್ಲಿ ನವೆಂಬರ್ 14 ಜವಾಹರ್ ಲಾಲ್ ನೆಹರು ಹುಟ್ಟುಹಬ್ಬದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಅದ್ದೂರಿಯಾಗಿ ಮಕ್ಕಳಿಗೆ ವಿವಿಧ ಆಟೋಟ, ರಸಪ್ರಶ್ನೆ ಪ್ರಬಂಧಗಳನ್ನು ಏರ್ಪಡಿಸಿ ಹಾಗೂ ಪೋಷಕರಿಗೂ ಸಹ ಸ್ಪರ್ಧೆಗಳನ್ನು ಏರ್ಪಡಿಸಿ ಕಾರ್ಯಕ್ರಮದಲ್ಲಿ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದ ವಿಶೇಷತೆಯೆಂದರೆ ಈ ಕಾರ್ಯಕ್ರಮದ ನಿರೂಪಣೆ ಸ್ವಾಗತ ಭಾಷಣ ಹಾಗೂ ವಂದನಾರ್ಪಣೆ ಎಲ್ಲವೂ ಮಕ್ಕಳ ನಡೆಸಿಕೊಟ್ಟಿದ್ದು ಅಲ್ಲಿಯ ಶಿಕ್ಷಕರು ಮಕ್ಕಳಿಗೆ ಬಾಲ್ಯದಿಂದಲೇ ನಾಯಕತ್ವ ಭಾಷಣದ ಕಲೆಯ ತರಬೇತಿ ನೀಡಿ ಕಲಿಸುತ್ತಿರುವುದು ವಿಶೇಷವಾಗಿತ್ತು. ಸಮಾರಂಭದಲ್ಲಿ ಶಾಲಾ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲದ ವಿದ್ಯಾರ್ಥಿಗಳು ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಕಿರುಗುಂದ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ಸ್ವಾತಿ ಹಾಗೂ ಪಂಚಾಯತಿಯ ಸದಸ್ಯರುಗಳು ಗ್ರಾಮಸ್ಥರು ಪೋಷಕರು ಹಾಜರಿದ್ದು ಶಿಕ್ಷಕರನ್ನು ಅಭಿನಂದಿಸಿದರು. ಮುಖ್ಯ ಶಿಕ್ಷಕರಾದ ಶ್ರೀಮತಿ ನಾಗರತ್ನ, ದೈಹಿಕ ಶಿಕ್ಷಣ ಶಿಕ್ಷಕರಾದ ಡಾ. ಫೈರೋಜ್ ಅಹಮದ್, ಶಿಕ್ಷಕರಾದ ಚನ್ನಬಸಯ್ಯ ಹಾಗೂ ಅಡಿಗೆ ಮಾಡುವವರು ಮತ್ತು ಜ್ಯೋತಿ B K ಹಾಗೂ sdmc ಸದಸ್ಯರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.