लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಪರಿಸರ ಜಾಗ್ರತೆ ಮೂಡಿಸುವ ಜಾಥ*

1 min read
Featured Video Play Icon

*ಪರಿಸರ ಜಾಗ್ರತೆ ಮೂಡಿಸುವ ಜಾಥ*

ಭಾರತ್ ಸ್ಕೌಟ್ಸ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು , ಸ್ಥಳಿಯ ಸಂಸ್ಥೆ ಮೂಡಿಗೆರೆಯಲ್ಲಿ ಸೈಕಲ್ ಜಾಥಾದ ಮೂಲಕ ಆಗಮಿಸಿದ ದಾವಣಗೆರೆ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ವಾಮಿ ವಿವೇಕಾನಂದ ರೊವರ್ಸ ಗ್ರೂಪ್ ನ 17 ಮಂದಿ ರೊವರ್ಸಗಳಿಗೆ, ಜಾಥಾ ಯಶಸ್ವಿಯಾಗಲೆ0ದು, ಮೂಡಿಗೆರೆಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಹೇಮಂತ್ ರಾಜ್,ಹಾಗೂ
ಸ್ಕೌಟ್ಸ ಮತ್ತು ಗೈಡ್ಸ್ ನ ಸ್ಥಳಿಯ ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀಯುತ ಮಗ್ಗಲಾಮಕ್ಕಿ ಗಣೇಶ್ .ರವರು ಆಗಮಿಸಿದ 17 ಮಂದಿ ರೊವರ್ಸಗಳಿಗೆ ಶುಭವನ್ನ ಹಾರೈಸಿದರು.
ರೊವರ್ಸನ ವಿದ್ಯಾರ್ಥಿಗಳು 8-11-2021 ರಂದು ದಾವಣಗೆರೆಯಿಂದ ಹೊರಟು ಹೊನ್ನಾಳಿ, ಶಿವಮೊಗ್ಗ, ತೀರ್ಥಹಳ್ಳಿ, ಉಡುಪಿ, ಮಂಗಳೂರು, ಧರ್ಮಸ್ಥಳ, ಮೂಡಿಗೆರೆ, ಕಡೂರು, ಚನ್ನಗಿರಿ, ಮಾರ್ಗವಾಗಿ ದಿನಾಂಕ 17-11-2021 ರಂದು ದಾವಣಗೆರೆ ತಲುಪುತ್ತಾರೆ, ಅವರ ಉದ್ದೇಶ, ಪರಿಸರದ ಅರಿವು, ರಾಜ್ಯಾದ್ಯಂತ ಸ್ಕೌಟ್ಸ ಮತ್ತು ಗೈಡ್ಸ್ ಬೆಳೆಸುವುದಾಗಿದೆ, ಇವರ ಉದ್ದೇಶಕ್ಕೆ ಮೂಡಿಗೆರೆ ಸ್ಥಳಿಯ ಸಂಸ್ಥೆಯವರು ಶುಭವನ್ನ ಕೋರಿದ್ದಾರೆ, ಮೂಡಿಗೆರೆಗೆ ಆಗಮಿಸಿದ ಇವರಿಗೆ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿ ನಿಲಯದಲ್ಲಿ ತಂಗಲು, ಅವಕಾಶಮಾಡಿ ಕೊಡಲಾಗಿತ್ತು.
ಅವಕಾಶ ಮಾಡಿಕೊಟ್ಟ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ, ಮೂಡಿಗೆರೆ ಸ್ಥಳಿಯ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನ ತಿಳಿಸಲಾಯಿತು,
ಈ ಸಂದರ್ಭದಲ್ಲಿ, ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷರಾದ
D.K. ಲಕ್ಷ್ಮಣಗೌಡ.
ಸ್ಥಳಿಯ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಯುತ ಜಯಪಾಲ್, ಸ್ಕೌಟ್ಸ ಮಾಸ್ಟರ್ ಆದ ಶ್ರೀಯುತ ಚೇತನ್ ಹಾಗೂ ಮೂಡಿಗೆರೆ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು, ಉಪಸ್ಥಿತರಿದ್ದರು,,,

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Assisted living facilities in Bangalore India

Career | job

About Author