ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಯುವ ಸ್ಪಂದನ ಚಿಕ್ಕಮಗಳೂರು ತಂಡಕ್ಕೆ ಸಮಗ್ರ ಪ್ರಶಸ್ತಿ
1 min read
ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಯುವ ಸ್ಪಂದನ ಚಿಕ್ಕಮಗಳೂರು ತಂಡಕ್ಕೆ ಸಮಗ್ರ ಪ್ರಶಸ್ತಿ
ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಯುವ ಸ್ಪಂದನ ಹಾಗೂ ಜೀವನ ಕೌಶಲ್ಯ ಕಾರ್ಯಕ್ರಮಗಳ ಮೂಲಕ ಕೋವಿಡ್-19 ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ (ಯುವ ಪರಿವರ್ತಕರು, ಯುವ ಸಮಾಲೋಚಕರು ಹಾಗೂ ಕ್ಷೇತ್ರ ಸಂಪರ್ಕಾಧಿಕಾರಿಗಳಿಗೆ) ರಾಜ್ಯಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಸ್ಪರ್ಧೆಯಲ್ಲಿ ಭಾಗವಹಿಸಿ ಯುವ ಸ್ಪಂದನ
ಚಿಕ್ಕಮಗಳೂರು ತಂಡ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಿಮಿಕ್ರಿ,ಛಾಯಾಚಿತ್ರ, ವಿಭಾಗದಲ್ಲಿ ಪ್ರಥಮ ಅಬ್ದುಲ್ ನಾಜ಼ೀಮ್
ರಸಪ್ರಶ್ನೆ ವಿಭಾಗದಲ್ಲಿ ದ್ವಿತೀಯ ಅಬ್ದುಲ್ ನಾಜ಼ೀಮ್.
ಛಾಯಾಚಿತ್ರ ಹಾಗೂ ಕಾರ್ಟೂನ್ ಚಿತ್ರ ವಿಭಾಗದಲ್ಲಿ ತೃತೀಯ ಶಿಲ್ಪ ಹೆಚ್ ಆರ್.
ಮಕ್ಕಳ ಚಿತ್ರಕಲೆ ರಚನೆ ತೃತೀಯ ಮೂಡಿಗೆರೆಯ ಮುಸ್ಕಾನ್ ಪ್ರಶಸ್ತಿ ಪಡೆದಿರುತ್ತಾರೆ.
ಘೋಷವಾಕ್ಯ ರಚನೆ ದ್ವಿತೀಯ ಸ್ಥಾನ ಯುವ ಸ್ಪಂದನ- ಚಿಕ್ಕಮಗಳೂರು.
ರಾಜ್ಯಮಟ್ಟದಲ್ಲೇ ಅತೀ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ ಚಿಕ್ಕಮಗಳೂರು ತಂಡದ ಶಿಲ್ಪ ಹೆಚ್ ಆರ್, ಅಬ್ದುಲ್ ನಾಜ಼ೀಮ್, ವಿನೋದ್ ಟಿ ಪಿ, ಗವಿರಂಗಸ್ವಾಮಿ ಬಿ ಎಸ್, ಶ್ರೀನಿವಾಸ್ ಎಮ್ ಕೆ ಎಲ್ಲರಿಗೂ ಜಿಲ್ಲೆಯಿಂದ ಪ್ರತಿನಿಧಿಸುವ ಮೂಲಕ ಕೀರ್ತಿ ತಂದ ಹಿನ್ನೆಲೆ ಎಲ್ಲಡೆಯೂ ಪ್ರಶಂಸೆ ವ್ಯಕ್ತವಾಗಿದೆ.
ಬರಹ: ಅಬ್ದುಲ್ ನಾಜಿಮ್
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೊ ನ್ಯೂಸ್