*ಮತ ಯಾಚನೆ*
1 min read
*ಮತ ಯಾಚನೆ*
ಕಳಸ:- ಜಿಲ್ಲೆಯ ಹೊಸ ತಾಲೂಕುಗಳಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸುವುದರ ಬಗ್ಗೆ ಮೊದಲ ಆದ್ಯತೆ ನೀಡುವುದು. ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕನ್ನಡ ಭವನ ನಿರ್ಮಿಸುವುದು ಗ್ರಾಮ ಪಂಚಾಯಿತಿ ಘಟಕಗಳಲ್ಲಿ ಕನ್ನಡ ಭವನಕ್ಕಾಗಿ ನಿವೇಶನ ಪಡೆಯಲಾಗುವುದು ಎಂಬುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಸೇವಾ ಆಕಾಂಕ್ಷಿ ಸೂರಿ ಶ್ರೀನಿವಾಸ್ ಕಳಸ ಪಟ್ಟಣದಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಕಸಾಪ ನಿಕಟ ಪೂರ್ವ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕಳೆದ ಮೂವತ್ತು ವರ್ಷದಿಂದ ನಿರಂತರವಾಗಿ ಕನ್ನಡದ ನುಡಿ ಪರಿಚಾರಕನಾಗಿ ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿರುವ ಸೂರಿ ಶ್ರೀನಿವಾಸ ಇವರು ಬಹಳ ಅಂತರ ಮತಗಳಿಂದ ಗೆಲ್ಲುವ ವಿಶ್ವಾಸ ಇದೆ ಎಂದರು
ಮೂಡಿಗೆರೆ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್, ಸಾಹಿತಿ ಅ ರಾ ರಾಧಾಕೃಷ್ಣ,ಮಮ್ ತಾಜ್ ಬೇಗಂ, ಸತೀಶ್ಚಂದ್ರ,ಶೇಷಗಿರಿ ಇತರರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೊ ನ್ಯೂಸ್.