*ಪುಣಾಣಿಗಳಲ್ಲಿ ಸಂತೋಷದ ಕ್ಷಣ*
1 min read
*ಪುಣಾಣಿಗಳಲ್ಲಿ ಸಂತೋಷದ ಕ್ಷಣ*
ಕೋವಿಡ್ ಹಿನ್ನೆಲೆಯಲ್ಲಿ ಒಂದು ವರುಷದಿಂದ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಸರಕಾರದ ಆದೇಶದನ್ವಯ ಇಂದಿನಿಂದ ತೆರೆದಿವೆ . ಈ ಇನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ನಿಡುವಾಳೆ ಆಂಗನವಾಡಿ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗರಿಸಿ , ಬಲೂನುಗಳನ್ನು ಕಟ್ಟಿ ಪುಟಾಣಿಗಳನ್ನು ಬರಮಾಡಿಕೊಳ್ಳಲಾಯಿತು . ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.
ಈ ಸಂಧರ್ಭದಲ್ಲಿ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಸುಮೀತ್ರ ಜಗನ್ನಾಥ ಭಂಡಾರಿ, ಸಹಾಯಕಿ ವತ್ಸಲ ನಾಗೇಶ್, ನಿಡುವಾಳೆ ಗ್ರಾಮಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು, ಪುಟಾಣಿಗಳು ಹಾಗೂ ಪುಟಾಣಿಗಳ ಪೋಷಕರು ಹಾಜರಿದ್ದರು .
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.