ಬೆಟ್ಟದ ಹೂವಿಗೆ ಗಾನ ನಮನ
1 min read
ಬೆಟ್ಟದ ಹೂವಿಗೆ ಗಾನ ನಮನ
ತೀವ್ರ ಹೃದಯಘಾತದಿಂದ ಇಹಲೋಕವನ್ನು ತ್ಯಜಿಸಿದ ರಾಜರತ್ನ ಪುನೀತ್ ರಾಜ್ ಕುಮಾರ್ ರವರಿಗೆ ಅವಿನ್ ಸ್ವರ ಸಂಗಮ ತಂಡವು ಇಂದು ಗಾನ ನಮನವನ್ನು ಸಲ್ಲಿಸಿತು.
ಜನಮಾನಸದಲ್ಲಿ ಮನೆಮಾಡಿರುವ ದೊಡ್ಮನೆ ಹುಡುಗನ ಅಗಲಿಕೆ ಇಡೀ ಚಲನ ಚಿತ್ರರಂಗಕ್ಕೆ ತುಂಬಲಾರದ ನಷ್ಟವೆಂದರೆ ತಪ್ಪಾಗಲಾರದು.
ಕೋಟ್ಯಂತರ ಅಭಿಮಾನಗಳ ಹೃದಯದ ರಾಜನಂತಿದ್ದ ಪುನೀತ್ ರಾಜಕುಮಾರ್ ರವರ ಅಕಾಲಿಕ ಮರಣ ಎಂತಹ ಕಲ್ಲು ಮನಸುಗಳನ್ನು ಕರಗಿಸಿದೆ.
ಅಭಿಮಾನಿಯಾಗಿ ಅವಿನ್ ಸ್ವರ ಸಂಗಮ ಫೇಸ್ಬುಕ್ ಲೈವ್ ಸಂಗೀತ ಕಾರ್ಯಕ್ರಮದ ನಿರ್ದೇಶಕರು ಯುವ ಸಾಹಿತಿಯಾಗಿರುವ ಹೆಸಗಲ್ ವೆಂಕಟೇಶ್ ಸ್ವತಃ ತಾವೇ ಸಾಹಿತ್ಯ ರಚಿಸಿ ರಾಗಸಂಯೋಜನೆಯನ್ನು ಮಾಡಿರುವ ಗೀತೆಗೆ ಮಲೆನಾಡ ಕೋಗಿಲೆ ಬಕ್ಕಿ ಮಂಜುನಾಥ್ ಧ್ವನಿಯಾದರು.
ಈ ಗೀತೆಗೆ ಸಂಗೀತವನ್ನು ಸಂಗೀತ ನಿರ್ದೇಶಕರಾಗಿರುವ ಗದಗದ ಸಿರಿಲ್ ರವರು ನೀಡಿದ್ದಾರೆ.
ಈ ಗೀತೆಯ ಸಾಲುಗಳು ಹೀಗಿವೆ..
“ಇಲ್ಲಿ ಬಾಳದೆ ಬಾಡಿದ
ಆ ಬೆಟ್ಟದ ಈ ಹೂವಿಗೆ.
ಏನು ಹೇಳದೇ.. ಸಾಗಿದ
ಆ ಬಾನಿನ ಈ ಮೋಡಕೆ.
ನಮ್ಮ ಮನವು ಮಿಡಿದಿದೆ ಏತಕೆ.?
ನಿಮ್ಮ ಹೃದಯ ನಿಂತಿತು ಏತಕೆ?
ಹೃದಯ ರಾಜನು ನೀನು ರಾಜ ರತ್ನನು ನೀನು.
ಮುತ್ತು ರಾಜನ ಕಣ್ಣು ವಿನಯ ರೂಪದ ಹೊನ್ನು.
ಎನ್ನುವ ಭಾವನಾತ್ಮಕ ಗೀತೆಯನ್ನು ರಚಿಸಿ ಹಾಡಿ ಅವಿನ್ ಸ್ವರ ಸಂಗಮ ಬಳಗವು ಬೆಟ್ಟದ ಹೂವಿಗೆ ಗಾನ ನಮನವನ್ನು ಸಲ್ಲಿಸಿತು.
ಬರಹಕೃಪೆ :
ಹೆಸಗಲ್ ವೆಂಕಟೇಶ್.
ವರದಿ :ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.