लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರದ್ದಾಂಜಲಿ ಸಭೆ.

1 min read
Featured Video Play Icon

ಶ್ರದ್ದಾಂಜಲಿ ಸಭೆ.

30-10-2021ರಂದು ಬೆಳಗ್ಗೆ 10 ಗಂಟೆಗೆ ಮೂಡಿಗೆರೆ ಪಟ್ಟಣದ ಜೆಸಿಐ ಭವನದಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ಶ್ರದ್ಧಾಂಜಲಿ ನಡೆಸಲಾಯಿತು.
ಮೂಡಿಗೆರೆಯ ಸಾಹಿತಿ ಹಳೆಕೋಟೆ ರಮೇಶ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಅವಿನ್ ಟಿವಿ ಸಂಪಾದಕರಾದ ಮಗ್ಗಲಮಕ್ಕಿಗಣೇಶ್.ಹಾಗೂ ಮೂಡಿಗೆರೆ ಜೇಸಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಕುನ್ನಹಳ್ಳಿ , ಜೇಸಿ ನಿಕಟಪೂರ್ವ ಅಧ್ಯಕ್ಷರಾದ ರವಿಕುಮಾರ್,ಜೆಸಿ ಕಾರ್ಯದರ್ಶಿ ಶ್ರೇಷ್ಠಿ ಹಾಗೂ ಜೇಸಿ ಉಪಾಧ್ಯಕ್ಷರಾದ ವಿದ್ಯಾರಾಜು. ಜಮೀರ್ ಅಹ್ಮದ್ ,ಮೂಡಿಗೆರೆ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ರಂಗನಾಥ್. ಹಾಗೂ ಒಕ್ಕಲಿಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಲಕ್ಷ್ಮಣ ಗೌಡ್ರು ಹಾಗೂ ಕನ್ನಡ ಜನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಮಂಜು,ಲೋಕೇಶ್ ಗೇಶ್ ಬೆಟ್ಟಗೆರೆ, ರವಿ.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ಎಲ್ಲ ಸಂಘ-ಸಂಸ್ಥೆಗಳಿಂದ ಒಂದು ನಿಮಿಷದ ಮೌನಾಚರಣೆ, ಹಾಗೂ ಅವರಿಗೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ಸಂಘ-ಸಂಸ್ಥೆಯವರು ಮಾತನಾಡಿ ಪುನೀತ್ ರಾಜಕುಮಾರ್ ನಿಧನದಿಂದ ರಾಷ್ಟಕ್ಕೆ, ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ .
ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಧೈರ್ಯತುಂಬಲಿ ಎಂದು ಎಲ್ಲರೂ ಕೇಳಿಕೊಂಡರು.ಇಂಥ ಒಬ್ಬ ಕಲಾವಿದನ ಮರಣದಿಂದ ನಮ್ಮೆಲ್ಲರಿಗೂ ನೋವುಂಟಾಗಿದೆ,ಭಗವಂತ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಕೇಳಿಕೊಂಡರು.

ವರದಿ ಮಗ್ಗಳಮಕ್ಕಿಗಣೆಶ.
ಬ್ಯುರೋ ನ್ಯೂಸ್.

Career | job

Assisted living facilities in Bangalore India

About Author