day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj * ಶ್ರದ್ದಾಂಜಲಿ * ಬಾಡಿ ಹೋದ ಬೆಟ್ಟದ ಹೂವು – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

* ಶ್ರದ್ದಾಂಜಲಿ * ಬಾಡಿ ಹೋದ ಬೆಟ್ಟದ ಹೂವು

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಶ್ರದ್ದಾಂಜಲಿ

ಬಾಡಿ ಹೋದ ಬೆಟ್ಟದ ಹೂವು
ಕನ್ನಡ ಚಲನಚಿತ್ರ ಜಗತ್ತಿನ ಬೆಟ್ಟದ ಹೂವೊಂದು ಇಂದು ಬಾಡಿ ಹೋಯಿತು.
ತೀವ್ರ ಹೃದಯಘಾತದಿಂದ ಇಹಲೋಕವನ್ನು ತ್ಯಜಿಸಿದ ನಟ ಪುನೀತ್ ರಾಜ್ ಕುಮಾರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸ್ಫೂರ್ತಿ ಮಿತ್ರ ಮಂಡಳಿ ಗ್ರಂಥಾಲಯ ಕೊಟ್ಟಿಗೆಹಾರ ಇಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡುತ್ತ
ಕನ್ನಡ ಸಿನಿಮಾ ಪ್ರಪಂಚದ ಬೆಟ್ಟದ ಹೂವೊಂದು ಇಂದು ಬಾಡಿಹೋಯಿತು ಎಂದರು.
2006ರಲ್ಲಿ ಮೂಡಿಗೆರೆಯಲ್ಲಿ ನಡೆದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥಿಯಾಗಿ ಆಗಮಿಸಿದ್ದ ಪುನೀತ್ ರಾಜಕುಮಾರ್ ಮಲೆನಾಡಿನ ಅಳಿಯನು ಕೂಡ ಹೌದು.
ತನ್ನ ನಟನೆ ಮತ್ತು ಸರಳವಾದ ವ್ಯಕ್ತಿತ್ವದೊಂದಿಗೆ ಕರ್ನಾಟಕದ ಮನೆ ಮಗನಾಗಿದ್ದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ರವರ ನಿಧನ ಈ ದೇಶದ ಕಲಾ ಸಂಕುಲಕ್ಕೆ ತುಂಬಲಾರದ ನಷ್ಟವೆಂದರು.
ತಾಲ್ಲೂಕು ಜಾನಪದ ಪರಿಷತ್ ನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್ ಮಾತನಾಡಿ ಪುನೀತ್ ರಾಜ್ ಕುಮಾರ್ ತಮ್ಮ ಅಪೂರ್ವ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳ ಮೂಲಕ ಯುವ ಸಮೂಹಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದರು ಎಂದರು.
ಸಾಹಿತ್ಯ ಪರಿಷತ್ ನ ಹೋಬಳಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ವಸಂತ್ ಹಾರ್ಗೋಡು ಮಾತಾಡಿ ಪುನೀತ್ ರಾಜ್ ಕುಮಾರ್ ತಮ್ಮ ತಂದೆಯ ಆದರ್ಶಗಳನ್ನು ಮೈಗೂಡಿಸಿಕೊಂಡು ಸದಾ ಸಮಾಜಕ್ಕೆ ಒಂದು ಪ್ರೇರಣಾ ಶಕ್ತಿಯಾಗಿ ಮಾದರಿಯಾಗಿದ್ದರು ಎಂದರು.
ಹಿರಿಯರಾದ ಖಾದರ್, ಸಂಸ್ಕೃತಿ ಚಿಂತಕರಾದ ಪಿ. ಕೆ. ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಪ್ರಭಾಕರ್ ಬಿನ್ನಡಿ, ಸಾಹಿತಿ ನಂದೀಶ್ ಬಂಕೇನಹಳ್ಳಿ, ಶಿಕ್ಷಕರಾದ ಭಕ್ತೇಶ್, ಯುವ ಸಾಹಿತಿ ಹೆಸಗಲ್ ವೆಂಕಟೇಶ್, ಸ್ಥಳೀಯರಾದ ಗೋಪಾಲ್, ಶಮಂತ್, ಸಿದ್ದಿಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಕೃಪೆ :
ಹೆಸಗಲ್ ವೆಂಕಟೇಶ್.

ವರದಿ :ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.

Career | job

Assisted living facilities in Bangalore India

About Author