ಸಂವಿಧಾನ ಭಾರತೀಯರ ಪವಿತ್ರ ಗ್ರಂಥ
1 min read
ಸಂವಿಧಾನ ಭಾರತೀಯರ ಪವಿತ್ರ ಗ್ರಂಥ
ಸಂವಿಧಾನ ಭಾರತೀಯರೆಲ್ಲರ ಪವಿತ್ರ ಗ್ರಂಥವಾಗಿದೆ ಎಂದು ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ನಾಗಮೋಹನ ದಾಸ್ ಹೇಳಿದರು.
ಕಡೂರಿನ ಲಕ್ಷಾ ಕನ್ವೆನ್ ಷನ್ ಹಾಲ್ ನಲ್ಲಿ ಬುಧವಾರ ನಡೆದ ಗಾಂಧೀಯಾನ-ವರ್ತಮಾನದ ಭಾರತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಕಾರಣದಿಂದಾಗಿ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಶೋಷಿತ ವರ್ಗ, ಬಡವರ್ಗದ ಸರ್ವಾಗೀತ ಅಭಿವೃದ್ದಿಗೆ ಸಂವಿಧಾನದ ಪಾತ್ರ ಅಪಾರ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಾ.ಬಿ.ಎಲ್.ಶಂಕರ್ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಜಸ್ಟೀಸ್ ನಾಗಮೋಹನ ದಾಸ್ ಅವರ ಕಾರ್ಯ ಮಹತ್ವದಾಗಿದೆ. ಕೃತಿಯ ಮೂಲಕ ಸಂವಾದ ವಿಚಾರ ಸಂಕಿರಣಗಳ ಮೂಲಕ ಜಸ್ಟೀಸ್ ನಾಗಮೋಹನ ದಾಸ್ ಅವರು ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಡೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬಾಸೂರು ಚಂದ್ರಮೌಳಿ, ಮುಖಂಡರಾದ ಆನಂದ್ ಕೆ.ಎಸ್, , ಆಸಂದಿ ಕಲ್ಲೇಶ್, ಶ್ರೀನಿವಾಸ್ ಮೂರ್ತಿ, ಸಾವಿತ್ರಿ ಗಂಗಣ್ಣ, ಕೆ.ಎಂ ಮೋಹನ್ ಕುಮಾರ್, ಶಶಿಕುಮಾರ್, ಯಾಸಿನ್, ಕೆ.ಜಿ ಶ್ರೀನಿವಾಸ್, ಕೆ.ಎಸ್ ವಿನಯ್, ಉಮೇಶ್, ಶ್ರೀಕಂಠ ಒಡೆಯರ್, ಜಿಗಣೆಹಳ್ಳಿ ಬಸವರಾಜ್, ಪಂಚನಹಳ್ಳಿ ಸಿದ್ದರಾಮಪ್ಪ, ಮುಂತಾದವರು ಇದ್ದರು.ನೂರಾರು ಜನ ಪಕ್ಷ ಬೇದ ಮರೆತು ಜಮಾಯಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/