लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

* ಸಾಹಿತ್ಯಾಕ್ಷತೆ ಕಾರ್ಯಕ್ರಮದಲ್ಲೊಂದು ಬಾಲ ಅನುಶ್ರೀ*

1 min read
Featured Video Play Icon

* ಸಾಹಿತ್ಯಾಕ್ಷತೆ ಕಾರ್ಯಕ್ರಮದಲ್ಲೊಂದು ಬಾಲ ಅನುಶ್ರೀ*
ದಿನಾಂಕ:30:09:2021ನೇ ಗುರುವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ವಸಂತ್ ಹಾರ್ಗೋಡುರವರ ಸಹೋದರಿ ಲಕ್ಷ್ಮಿ .ಎಂ.ಎಸ್ ಮತ್ತು ಉಮೇಶ್ ರವರ ಮದುವೆ ಸಂಭ್ರಮದಲ್ಲಿ ವಿನೂತನ ಸಾಹಿತ್ಯಾಕ್ಷತೆ ಕಾರ್ಯಕ್ರಮವನ್ನು ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವಾಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ. ತಾಲ್ಲೂಕು ಕನ್ನಡ ಸಾಹಿತ್ಯಪರಿಷತ್ತು ಮೂಡಿಗೆರೆ ಹಾಗೂ ಹೋಬಳಿ ಘಟಕ ಬಣಕಲ್ ತನ್ನ ಅವಧಿಯಲ್ಲಿ ವಿಭಿನ್ನ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಅದರಲ್ಲಿ ವಿನೂತನ “ಸಾಹಿತ್ಯಾಕ್ಷತೆ” ಕಾರ್ಯಕ್ರಮವು ಒಂದು. ಪ್ರಸ್ತುತ ಪರಿಷತ್ತಿನ ಅವಧಿ ಕೊನೆಗೊಂಡರು ಸಹಾ ಸಾಹಿತ್ಯಿಕ ಕೆಲಸ ಕೊನೆಯಾಗಬಾರದೆಂಬ ದೃಷ್ಠಿಯಿಂದ ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಡಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಿಂತ ನೀರಾಗದೆ ಸದಾ ಮೈದುಂಬಿ ಹರಿಯುವ ನದಿಯಂತಾಗಬೇಕು ಮತ್ತು ಕನ್ನಡಕ್ಕೆ ದುಡಿಯುವ ಮನಸ್ಥಿತಿ ಪ್ರತೀ ಕನ್ನಡಿಗರಲ್ಲಿ ಬೆಳೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್ ವಹಿಸಿ ಮಾತನಾಡಿ ಪ್ರತಿಯೊಂದು ಸಮುದಾಯಕ್ಕು ಅದರದೇ ಆದ ಸಂಪ್ರದಾಯ ಆಚರಣೆಗಳಿವೆ ಆ ಎಲ್ಲಾ ಆಚರಣೆಗಳ ಮೂಲ ಜಾನಪದವಾಗಿದೆ. ಇಂದಿನ ಆಧುನಿಕ ಜೀವನದ ಬರಾಟೆಯಲ್ಲಿ ಅದೆಷ್ಟೊ ಆಚರಣೆಗಳೂ ಮೂಲೆಗುಂಪಾಗಿವೆ ಇದನ್ನು ತಪ್ಪಿಸಿ ಪ್ರತಿಯೊಂದು ಸಮುದಾಯದ ಆಚಾರವಿಚಾರ ರೂಢಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ವಸಂತ್ ಹಾರ್ಗೋಡು ಮಾತನಾಡಿ. ಕನ್ನಡ ಸಾಹಿತ್ಯ ಪರಿಷತ್ತಿನ ಅವಧಿ ಮುಗಿದಿದ್ದ ಕಾರಣ ನನ್ನ ತಂಗಿಯ ಮದುವೆ ಸಂಭ್ರಮಕ್ಕೆ ಸಾಹಿತ್ಯದ ಮೆರುಗನ್ನು ನೀಡಲು ಸಾಧ್ಯವಾಗದು ಎಂಬ ಬೇಸರವನ್ನು ಜಾನಪದ ಪರಿಷತ್ತು ದೂರಮಾಡಿದೆ. ಇಂತಹ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಗ್ರ ಕರ್ನಾಟಕದ ಸಾಹಿತ್ಯಿಕ ಏಳಿಗೆ ಸಾಧ್ಯ ಹಾಗಾಗಿ ಯಾವುದೇ ಒಂದು ಸಂಸ್ಕೃತಿ ಮತ್ತಷ್ಟು ಮೆರುಗು ಪಡೆಯಲು ಇಂತಹ ವಿಭಿನ್ನ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬಕ್ಕಿ ಮಂಜುನಾಥ್. ಕೃಷ್ಣಪ್ಪ ಜಾವಳಿ ಹಾಡಿನ ಮೂಲಕ ನೆರೆದವರನ್ನು ರಂಜಿಸಿದರು. ಈ ಸಂಭ್ರಮದಲ್ಲಿ ಬಾಲಪ್ರತಿಭೆ ಸೈನಾ ಕನ್ನಡದ ಅಮೋಘ ನಿರೂಪಕಿ ಅನುಶ್ರೀಯನ್ನು ಅನುಕರಣೆ ಮಾಡಿ ಎಲ್ಲರ ಉಬೇರುವಂತೆ ಮಾಡಿದಳು.
ಎರಡು ದಿನ ನಡೆದ ಮದುವೆ ಸಂಭ್ರಮಕ್ಕೆ ಅನೇಕ ಜನ ಸಾಕ್ಷಿಯಾದರು. ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ ಸುಭಾಶ್ ನಗರ ಬಣಕಲ್ ನ ಅರ್ಚಕರಾದ ಶಂಕರಕಣ್ಣನ್ನರಾಯ ಇವರು ಮುಹೂರ್ತ ಕಾರ್ಯವನ್ನು ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಡಿ.ಕೆ.ಲಕ್ಷ್ಮಣ್ ಗೌಡ. ಪ್ರಕಾಶ್. ನಾಗೇಶ್. ಸಾಹಿತಿಗಳಾದ ನಾಗರಾಜ್. ವೆಂಕಟೇಶ್. ಪತ್ರಿಕಾ ವರದಿಗಾರರಾದ ನಂದೀಶ್ ಬಂಕೇನಹಳ್ಳಿ. ಮಲ್ನಾಡು ಗಲ್ಫ್ ಅಸೋಷಿಯೇಶನ್ ಅಧ್ಯಕ್ಷ ಹಮೀದ್.ವಿದ್ಯಾಭಾರತಿ ಸಂಸ್ಥೆಯ ಶಿವರಾಮಶೆಟ್ಟಿ. ಲಿಂಗಪ್ಪ. ಶಿಕ್ಷಕರುಗಳು ಆದಿದ್ರಾವಿಡ ಸಮಾಜದ ಜಿಲ್ಲಾ ತಾಲ್ಲೂಕು ಹೋಬಳಿ ಘಟಕದ ಸದಸ್ಯರು ಸ್ಥಳೀಯರಾದ ಸೋಮೇಗೌಡ. ಪ್ರದೀಪ್. ಉಪೇಂದ್ರ. ಉಮೇಶ್ ಮುಗ್ರಹಳ್ಳಿ.

ಬಿದರಹಳ್ಳಿ ಗ್ರಾಮಪಂಚಾಯಿತಿ ಸದಸ್ಯರಾದ ಸಂಪತ್ ಮುಗ್ರಹಳ್ಳಿ. ವಿಶ್ವ ಹಾಗೂ ವಿವಿಧ ಸಂಸ್ಥೆಗಳ ಮುಖಂಡರು.ಸ್ನೇಹಿತರು.ಕುಟುಂಬಸ್ಥರು ಸೇರಿ ವಧುವರರನ್ನು ಶುಭಹಾರೈಸಿದರು

 

ವರದಿ
ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್
ಅವಿನ್ ಟಿ.ವಿ

Navachaitanya Old Age Home

Career | job

About Author