*ಸಮಾಲೊಚನ ಸಭೆ*
1 min read
*ಸಮಾಲೊಚನ ಸಭೆ*
ಚಿಕ್ಕಮಗಳೂರು ಜಿಲ್ಲೆ.ಕಳಸ ತಾಲೂಕಿನ.
ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ, ಕಾರ್ಲೆ ಎಂಬ ಭಾಗದಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮೂಲಭೂತ ಸೌಕರ್ಯಗಳು ಇಲ್ಲದ ಕಾರ್ಲೆ ಭಾಗದ ಸದಸ್ಯರನ್ನು ಭೇಟಿ ಮಾಡಿ ಮನೆ ಮನೆಗೆ ತೆರಳಿ, ಗ್ರಾಮಾಭಿವೃದ್ಧಿ ಯೋಜನೆಯ ಸೌಲಭ್ಯಗಳ ಕುರಿತು ಮನವರಿಕೆ ಮಾಡಿದರು.
ಈ ದಿನ ಕಾರ್ಲೆಯ ಸಮುದಾಯ ಭವನದಲ್ಲಿ ಸಮಾಲೋಚನಾ ಸಭೆ ಏರ್ಪಡಿಸಲಾಗಿದ್ದು,ಈ ಭಾಗದಲ್ಲಿ 26 ಕುಟುಂಬಗಳು ಇದ್ದು 123 ಮಂದಿ ಸದಸ್ಯರನ್ನು ಹೊಂದಿರುತ್ತಾರೆ. ಗ್ರಾಮಾಭಿವೃದ್ಧಿ ಯೋಜನೆಯ, ಸಂಘಗಳನ್ನು ರಚನೆ ಮಾಡಿಕೊಂಡು ಈ ಭಾಗದ ಜನರು ಸಂಘಟಿತರಾಗುವುದು ಆರ್ಥಿಕ ಚಟುವಟಿಕೆ, ಉಳಿತಾಯ ಮಾಡಿಕೊಳ್ಳುವುದು,ಜೀವಕ್ಕೆ ಭದ್ರತೆ ಮಾಡಿಕೊಳ್ಳುವುದು,ಬ್ಯಾಂಕಿಂಗ್ ವ್ಯವಹಾರ ತಾವು ಇರುವ ಭಾಗದಲ್ಲಿಯೇ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಈ ಸಂಘಟನೆಯ ಆಶಯವಾಗಿದೆ.
ಈ ದಿನ,ಕಳಸ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಕುರಿತು ಮಾಹಿತಿ ಕೊಡಿಸಲಾಯಿತು.
ನಮ್ಮಲ್ಲಿ ಇರುವ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳುವ ಕುರಿತು ಹಾಗೂ ಡೆಂಗ್ಯೂ ಮತ್ತಿತರ ಕಾಯಿಲೆಗಳನ್ನು ದೂರವಿಡುವ ಕುರಿತು ಮಾಹಿತಿಯನ್ನು ಯೋಜನೆಯಿಂದ ಕೊಡಿಸಲಾಯಿತು.
ಈ ಭಾಗದಲ್ಲಿ ಸಂಘಟನೆ ಹೆಚ್ಚಾದರೆ ರಸ್ತೆ ಸಂಪರ್ಕ,ಮೂಲಭೂತ ಸೌಕರ್ಯಗಳನ್ನು ತಾವು ಪಡೆದುಕೊಳ್ಳುವಲ್ಲಿ ಸಂಘಟಿತರಾಗುವುದು ಈ ಸಮಾಲೋಚನಾ ಸಭೆಯ ಉದ್ದೇಶ.
ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ರಾಷ್ಟ್ರೀಯ ವಿಪತ್ತು ಪಡೆ ಇದ್ದು ತುರ್ತು ಸಂದರ್ಭದಲ್ಲಿ ಸಹಕಾರ ನೀಡಲಾಗುವುದು. ವಿಪತ್ತು ನಿರ್ವಹಣಾ ಸಂಯೋಜಕರಾದ ಮಹೇಶ್ ತಿಳಿಸಿದರು
ಮತ್ತು ಅವರ ತಂಡವನ್ನು ಪರಿಚಯಿಸಲಾಯಿತು… ಈ ಸಂದರ್ಭದಲ್ಲಿ ಕಳಸ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂಘರ್ಷ ಹಾಗೂ ಸಿಬ್ಬಂದಿ ವರ್ಗದವರು , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳಸ ವಿಭಾಗದ ಮೇಲ್ವಿಚಾರಕರಾದ ನಾಗರಾಜ್ ಮತ್ತು ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.