**ಜಾಗ್ರುತಿ ಕಾರ್ಯಕ್ರಮ**ಕನ್ನಾಪುರದಲ್ಲಿ ಬೀದಿ ನಾಟಕ ಕಾರ್ಯಕ್ರಮ
1 min read
*ಜಾಗ್ರುತಿ ಕಾರ್ಯಕ್ರಮ*
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಡಿಗೆರೆ ತಾಲ್ಲೂಕಿನ ಮೂಡಿಗೆರೆ ಕಸಬಾ ವಲಯದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮಡಿಯಲ್ಲಿ ನಂದೀಪುರದ ಕನ್ನಾಪುರದಲ್ಲಿ ಬೀದಿ ನಾಟಕ ಕಾರ್ಯಕ್ರಮ ವನ್ನು ನಡೆಸಲಾಯಿತು .
ಕಾರ್ಯಕ್ರಮದಲ್ಲಿ ಕೋರೋಣ ಬಗ್ಗೆ ಜಾಗೃತಿ ಮೂಡಿಸುವುದು, ಸ್ವಚ್ಛತೆ, ಬಾಲ್ಯ ವಿವಾಹ, ದುಶ್ಚಟ ಮುಕ್ತ ಜೀವನ, ಆರೋಗ್ಯ, ಕಾನೂನಿನ ಬಗ್ಗೆ ಅರಿವು ಮೂಡಿಸುವುದು ನಾಟಕದ ಮುಖಾಂತರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಧರ್ಮಸ್ಥಳದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು
ಈ ಕಾರ್ಯಕ್ರಮವನ್ನು ತಾಲ್ಲೂಕಿನ ಯೋಜನಾದಿಕಾರಿಯವರಾದ ಶಿವಾನಂದ.ಪಿ , ರವರು ಉದ್ಘಾಟಿಸುವರು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಮೂಡಿಗೆರೆಯ ಸಂಯೋಜಕರಾದ ಪ್ರವೀಣ್ ಪೂಜಾರಿ, ಊರಿನ ಮುಖಂಡರಾದ ರಾಜೇಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಲೋಲಾಕ್ಷಿ, ವಲಯ ಮೇಲ್ವಿಚಾರಕರಾದ ವಿಘ್ನೇಶ್, ಜ್ಞಾನವಿಕಾಸ ಸಮನ್ವಯದಿಕಾರಿ ಶ್ರೀಮತಿ ಲತಾ , ಸೇವಾಪ್ರತಿನಿದಿ ಆಯಿಷಾಬಿ,ಒಕ್ಕೂಟ ಪದಾದಿಕಾರಿ ಕಾವೇರಿ, ಶೃತಿ ಸಾಂಸ್ಕೃತಿಕ ಕಲಾತಂಡದ ವೆಂಕಟೇಶ್ ಹಾಗೂ ಬಳಗ ದವರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.