ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ **ಅಂತ್ಯ ಸಂಸ್ಕಾರ** #avintvcom
1 min read
*ಅಂತ್ಯ ಸಂಸ್ಕಾರ*
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಈ ದಿನ ಕೊರೊನಾದಿಂದ ಮೃತಪಟ್ಟ 56ನೇ ವ್ಯಕ್ತಿಯ ಶವ ಸಂಸ್ಕಾರ ನಡೆಸಲಾಯಿತು.
ಮೂಡಿಗೆರೆ ಕಸಬಾ ವಲಯ ಆಗಸ್ಟ್ 14
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಜನ್ನಾಪುರ ಚಿನ್ನಿಗ ವಾಸಿಯಾದ ಪುಷ್ಪ ಸುಮಾರು 40 ವರ್ಷ ಇವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಯಿತು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 11ಗಂಟೆಗೆ ಸುಮಾರು ದೈವಾದೀನರಾಗಿದ್ದಾರೆ.
ಇವರಿಗೆ ಕೋವಿಡ್ ಪಾಸಿಟಿವ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ
ಇವರ ಅಂತ್ಯಕ್ರಿಯೆಯನ್ನು ಅವರ ಊರಿನಲ್ಲಿ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು ನೆರವೇರಿಸಿರುತ್ತಾರೆ .
ಈ ಸೇವಾಕಾರ್ಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕ ಪ್ರವೀಣ್ ಪೂಜಾರಿ, ಸದಸ್ಯರುಗಳಾದ , ರವಿ ಪೂಜಾರಿ, ಹರೀಶ್ ಗೌಡ, ಪ್ರವೀಣ್ ಅಚ್ಚು, ಹಾಗೂ ಗೋಣಿಬೀಡು ವಲಯದ ಸ್ವಯಂ ಸೇವಕರಾದ ವಿನಿತ್ ಜನ್ನಾಪುರ, ಮತ್ತು
ಮೃತರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.