ಮಸೀದಿ ಉದ್ಘಾಟನಾ ಸಮಾರಂಭ #avintvcom
1 min read
ಮಸೀದಿ ಉದ್ಘಾಟನಾ ಸಮಾರಂಭ
ಶುಕ್ರವಾರ : ೦೬-೦೮-೨೦೨೧
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಚÀಳಮಟ್ಟಿ ಗ್ರಾಮದಲ್ಲಿ ಮಾನ್ಯ ಶ್ರೀ ಡಾ|| ಚಿ. ವಿಎಸ್ವಿ ಪ್ರಸಾದ ವ್ಯವಸ್ಥಾಪಕ ನಿರ್ದೇಶಕರು ಸ್ವರ್ಣಾ ಗ್ರೂಪ್ ಆಪ್ ಕಂಪನೀಸ್ ಹುಬ್ಬಳ್ಳಿ ಇವರು ದಾನವಾಗಿ ನಿರ್ಮಿಸಿಕೊಟ್ಟ “ಮಸೀದಿ” ಉದ್ಘಾಟನಾ ಹಾಗೂ ಶಾಲಾ ಕಂಪೌAಡ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿತು. ಉದ್ಘಾಟನೆಯನ್ನು ತಾಲೂಕಿನ ಜನಪ್ರೀಯ ಶಾಸಕರಾದ ಮಾನ್ಯ ಶ್ರೀ ಸಿ.ಎಂ ನಿಂಬಣ್ಣನವರ ಉದ್ಘಾಟಿಸಿ ಮಾತನಾಡುತ್ತಾ ಸಮಾಜದಲ್ಲಿ ಸಾಕಷ್ಟು ಜನ ಅತ್ಯಂತ ಶ್ರೀಮಂತ ವ್ಯಕ್ತಿಗಳು ಇದ್ದರೂ ಸಮಾಜಕ್ಕಾಗಿ ಸಹಾಯ ಮಾಡುವವರು ತುಂಬಾ ವಿರಳ. ಅಂತಹ ವಿರಳಾತಿ ವಿರಳ ವ್ಯಕ್ತಿಗಳಲ್ಲಿ ಮೇಲ್ಪಂಕ್ತಿಯಲ್ಲಿ ಮಾನ್ಯ ಶ್ರೀ ಡಾ|| ಚಿ. ವಿಎಸ್ವಿ ಪ್ರಸಾದ ನಿಲ್ಲುತ್ತಾರೆ.ಇಂತಹ ಮಹಾನ್ ವ್ಯಕ್ತಿಗಳು ನಮಗೆ ದೊರಕಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಉತ್ಸಾಹ, ಪ್ರಾಮಾಣಿಕತೆ , ದೂರದೃಷ್ಠಿ, ಶೃದ್ದೆ, ಶಿಸ್ತು ಯಾರಲ್ಲಿ ಮೇಳೈಸಿರುತ್ತದೆಯೋ ಅಂತಹ ವ್ಯಕ್ತಿ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಮಾನ್ಯ ಶ್ರೀ ಡಾ|| ಚಿ. ವಿಎಸ್ವಿ ಪ್ರಸಾದ ಅವರು ಜ್ವಲಂತ ನಿದರ್ಶನ.
ತಮ್ಮ ಸ್ವರ್ಣಾ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿ, ಅವರಿಗೆಲ್ಲ ಅನ್ನದಾತರಾಗಿದ್ದಾರೆ. ಸಮಾಜದಲ್ಲಿ ಸರ್ವಧರ್ಮದ ಜನಾಂಗದವರಿಗೆ ಆಹಾರದ ಸಾಮಗ್ರಿ ಕಿಟ್ಗಳು, ಆರೋಗ್ಯಕ್ಕಾಗಿ ವೈದ್ಯಕೀಯ ಸಲಕರಣೆಗಳು, ಶಿಕ್ಷಣ, ಮಹಿಳಾ ಸಬಲಿಕರಣ, ಕ್ರೀಡೆ, ಸಾಂಸ್ಕçತಿಕರAಗಕ್ಕೆ ಎಲ್ಲ ರೀತಿಯಿಂದಲೂ ಸಹಾಯ ಹಸ್ತ ಚಾಚಿ ನೆರವು ನೀಡುತ್ತಿದ್ದಾರೆ. ಇದಕ್ಕೆ ಚಳಮಟ್ಟಿ ಗ್ರಾಮದ ಶಾಲೆಯ ಸರ್ವಂಗೀಣ ಅಭಿವೃದ್ಧಿಯೇ ನಿದರ್ಶನ ಎಂದು ಕೊಂಡಾಡಿದರು. ಸರ್ವ ಧರ್ಮದ ಜನಾಂಗದವರನ್ನು ಎಲ್ಲರೂ ಒಂದೇ ಎಂಬುವುದನ್ನು ಬಸವಣ್ಣನವರ ವಚನದ ಮೂಲಕ ಪ್ರಸಾದರವರ ಗುಣಗಾನ ಮಾಡುತ್ತ ಮಸೀದಿ ನಿರ್ಮಿಸಿಕೊಟ್ಟು ಸಾಮಾಜಿಕ ಸಾಮರಸ್ಯ, ಐಕ್ಯತೆ ಕಾಪಾಡಿದ್ದು, ಮಾನ್ಯರು ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ, ಅವರಿಗೆ ಆರೋಗ್ಯ, ಅಧಿಕಾರ, ಐಶ್ವರ್ಯ, ಅಂತಸ್ತು ಇನ್ನೂ ಹೆಚ್ಚಿಗೆ ಸಿಕ್ಕು ಅವರ ಕುಟುಂಬವರ್ಗ ಸುಖ ಸಂತೋಷ ದಿಂದ ಬಾಳಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾನಿಗಳಾದ ಮಾನ್ಯ ಶ್ರೀ ಡಾ|| ಚಿ. ವಿಎಸ್ವಿ ಪ್ರಸಾದÀ ರವರು ಮಾತನಾಡುತ್ತಾ “ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟ್ಟಿತೆನ ಬೇಡ”À ಎಂಬ ವಚನದ ಮೂಲಕ ದಾನದ ಮಹತ್ವÀದ ಬಗ್ಗೆ ತಿಳಿಸುತ್ತಾ ತಾವು ತಮ್ಮ ಸ್ವರ್ಣಾ ಸಂಸ್ಥೆಯ ಮೂಲಕ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಿದ್ದು, ಮುಂದೆಯೂ ಇನ್ನೂ ಹೆಚ್ಚು ಸಮಾಜಕ್ಕೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು. ಇದೆ ಸಂದರ್ಭದಲ್ಲಿ ದಾನಿಗಳಾದ ಮಾನ್ಯ ಶ್ರೀ ಡಾ|| ಚಿ. ವಿಎಸ್ವಿ ಪ್ರಸಾದ ರವರಿಗೆ ಗ್ರಾಮಸ್ತರ ಪರವಾಗಿ ಶಾಸಕರು ಸನ್ಮಾನಿಸಿ ಸತ್ಕರಿಸಿದರು. ಅಧ್ಯಕ್ಷತೆಯನ್ನು ಉಗ್ಗಿನಕೇೆರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಮಂಜುನಾಥ ಮಾ. ಅಲ್ಲಾಪುರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಐ.ಸಿ.ಗೋಕುಲ, ಮಿಶ್ರೀಕೊಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಾಂತವ್ವ ಸಂಶಿ, ಉಗ್ಗಿನಕೇರಿ ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ಮಾಂಡೆಕರ, ಶ್ರೀಮತಿ ಸೀತವ್ವ ವೆÀಂ. ಕದಂ, ಶ್ರೀ ಮಹಾದೇವಪ್ಪ ಸುಭಾನವರ, ಗ್ರಾಮದ ಹಿರಿಯರಾದ ಶ್ರೀ ಬಸವಂತಪ್ಪ ರಾ. ಸುಭಾನವರ, ಶಿವಲಿಂಗಯ್ಯ ಹಿರೇಮಠ, ನಾರಾಯಣ ಹುಬ್ಬಳ್ಳಿ, ನಾರಾಯಣ ಕದಂ ಮುಂತಾದವರು ಆಗಮಿಸಿದ್ದರು.
ಸಮಾರಂಭದಲ್ಲಿ ಶಾಸಕರನ್ನು ಮಾನ್ಯ ಶ್ರೀ ಡಾ|| ಚಿ. ವಿಎಸ್ವಿ ಪ್ರಸಾದ ರವರು ಗ್ರಾಮಸ್ತರ ನೆರವಿನೊಂದಿಗೆ ಸನ್ಮಾನಿಸಿದರು, ಇದೇ ಸಂದರ್ಭದಲ್ಲಿ ಅನೇಕ ಗಣ್ಯರನ್ನು ಹಾಗೂ ಸ್ವರ್ಣಾ ಸಂಸ್ಥೆಯ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಎಂ.ಎಚ್.ಭಜAತ್ರಿ ಸ್ವಾಗತಿಸಿ ನಿರೂಪಿಸಿದರು. ಶ್ರೀ ಸಂತೋಷ ಕದಂ, ವಂದಿಸಿದರು. ನಂತರ ನಡೆದ ಅನ್ನ ಸಂತರ್ಪಣೆಯನ್ನ ಮಾನ್ಯ ಶ್ರೀ ಡಾ|| ಚಿ. ವಿಎಸ್ವಿ ಪ್ರಸಾದ ರವರು ಊಟ ಬಡಿಸುವುದರ ಮೂಲಕ ನೆರವೇರಿಸಿ ಶುಭ ಕೋರಿದರು.