AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೀವನ ಸಾಗಿಸಲು ಹೊರಟ 12 ಜನಕ್ಕೆ ಕಾದಿತ್ತು ಗ್ರಾಚಾರ ಅವರ ಸಹಾಯಕ್ಕೆ ನಿಂತ ವಿಪತ್ತು ನಿರ್ವಹಣಾ ತಂಡದ ಸದಸ್ಯರು.#avintvcom

1 min read
Featured Video Play Icon

ಜೀವನ ಸಾಗಿಸಲು ಹೊರಟ 12 ಜನಕ್ಕೆ ಕಾದಿತ್ತು ಗ್ರಾಚಾರ ಅವರ ಸಹಾಯಕ್ಕೆ ನಿಂತ ವಿಪತ್ತು ನಿರ್ವಹಣಾ ತಂಡದ ಸದಸ್ಯರು.
ಮೂಡಿಗೆರೆ ಕಸಬ ವಲಯ ಆಗಸ್ಟ್ 1
ದಿನನಿತ್ಯ ಬೆಳಗೆದ್ದು ತನ್ನ ಜೀವನವನ್ನು ಸಾಗಿಸಲು ಬೇರೆಯವರ ತೋಟಕ್ಕೆ ಕೆಲಸಕ್ಕೆಂದು ತೆರಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ವಾಹನ.
ಜನ್ನಾಪುರ ದಿಂದ ಉಗ್ಗೆ ಹಳ್ಳಿಗೆ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವಾಗ ವಾಹನವು ಪಲ್ಟಿಯಾಗಿದ್ದು 12 ಜನರಲ್ಲಿ ನಾಲ್ಕು ಜನರಿಗೆ ಗಂಭೀರವಾಗಿ ಗಾಯವಾಗಿದ್ದು ತುರ್ತು ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಚಿಕ್ಕಮಂಗಳೂರಿನ ಜಿಲ್ಲಾಸ್ಪತ್ರೆಗಳಿಗೆ ಕಳುಹಿಸಿ 8 ಜನರನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ಳಂ ಬೆಳಗ್ಗೆ ಗೋಣಿಬೀಡು ಹೋಬಳಿಯ ಸ್ವಯಂಸೇವಕರಾಗಿ ನಾಗರಾಜ್ ಅವರು ಮೂಡಿಗೆರೆ ಕಸಬಾ ವಲಯದ ಸಂಯೋಜಕರಾದ ಪ್ರವೀಣ್ ಪೂಜಾರಿಗೆ ದೂರವಾಣಿ ಕರೆಯ ಮುಖಾಂತರ ಅಲ್ಲಿ ನಡೆದ ಘಟನೆಯನ್ನು ವಿವರಿಸಿದರು.
ತಕ್ಷಣವೇ ಮೂಡಿಗೆರೆಯ ಎಂಜಿಎಂ ಹಾಸ್ಪಿಟಲ್ಗೆ ಕರೆತರಲಾಯಿತು.
ವಿಪತ್ತು ನಿರ್ವಾಹಣ ತಂಡದ ಸದಸ್ಯರುಗಳು ಉತ್ತಮ ಜವಾಬ್ದಾರಿಯಿಂದ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸುವುದರಲ್ಲಿ ಯಶಸ್ವಿಯಾದರು. ಅವರುಗಳಿಗೆ ನೀರಿನ ವ್ಯವಸ್ಥೆ ಹಾಗೂ ಕಾಫಿ-ಟೀ ಬೆಳಗಿನ ಉಪಹಾರ ಹಾಗೂ ಹಣ್ಣುಹಂಪಲುಗಳನ್ನು ವ್ಯವಸ್ಥೆ ಗಳನ್ನು ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಿದ್ಧಪಡಿಸಿದರು.
ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಪೂಜಾರಿ ಅವರು ಸ್ಥಳಕ್ಕೆ ಆಗಮಿಸಿ ಅಪಘಾತಕ್ಕೀಡಾದ ರೋಗಿಗಳಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಈ ಒಂದು ಸಂದರ್ಭದಲ್ಲಿ ಸಂಯೋಜಕ
ಪ್ರವೀಣ್ ಪೂಜಾರಿ
ಗೋಣಿಬೀಡು ಹೋಬಳಿಯ ಸ್ವಯಂ ಸೇವಕರಾದ ನಾಗರಾಜ ಪೂಜಾರಿ
ಹರೀಶ್ ಗೌಡ.
ಪವನ್ .ಸಂತೋಷ್ .
ಪ್ರವೀಣ್. ಅಚ್ಚು. ಸುರೇಶ್. ರವೀಂದ್ರ.
ಬಣಕಲ್ ರವಿ ಪೂಜಾರಿ. ರಘು ಗೌಡ ಹಾಜರಿದ್ದರು
ಬರಹ ಕೃಪೆ..
ಪ್ರವೀಣ್ ಪೂಜಾರಿ ಸಂಯೋಜಕ
ಕಸಬಾ ವಲಯ
ಮೂಡಿಗೆರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author