ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ *ಅಂತಿಮ ಸಂಸ್ಕಾರ*#avintvcom
1 min read
ಅಂತಿಮ ಸಂಸ್ಕಾರ.
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಈ ದಿನ ಕೊರೊನಾದಿಂದ ಮೃತಪಟ್ಟ 55ನೇ ವ್ಯಕ್ತಿಯ ಶವ ಸಂಸ್ಕಾರ ನಡೆಸಲಾಯಿತು.
ದಿನಾಂಕ ಜುಲೈ 28
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ವಾಸಿಯಾದ ಚಂದ್ರಗೌಡ ಸುಮಾರು 65 ವರ್ಷ ಇವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಈ ದಿನ ಬೆಳಗ್ಗೆ 7 ಗಂಟೆಗೆ ಸುಮಾರು ದೈವಾದೀನರಾಗಿದ್ದಾರೆ.
ಇವರಿಗೆ ಕೋವಿಡ್ ಪಾಸಿಟಿವ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಇವರ ಅಂತ್ಯಕ್ರಿಯೆಯನ್ನು ಅವರ ಊರಿನಲ್ಲಿ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು ನೆರವೇರಿಸಿರುತ್ತಾರೆ .
ಈ ಸೇವಾಕಾರ್ಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕ ಪ್ರವೀಣ್ ಪೂಜಾರಿ,
ಅರುಣ್ ಪಿಂಟೋ ಸದಸ್ಯರುಗಳಾದ ,
ಶಶಿ. ಕೆಲ್ಲೂರು ರವೀಂದ್ರ ಮಂಜುನಾಥ್ ಪೆಟ್ರೋಲ್ ಬಂಕ್. ಮತ್ತು
ಮೃತರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ವರದಿ :-
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.