AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ವಿಶ್ವಕರ್ಮ ಬ್ರಾಹ್ಮಣ ಟ್ರಸ್ಟ್ (ರಿ) ವತಿಯಿಂದ ಸಮಾಜ ಬಾಂಧವರಿಗೆ ಆಹಾರ ಕಿಟ್ ವಿತರಿಸಿದರು .#avintvcom

1 min read
Featured Video Play Icon

ಕೊವೀಡ್ ಸಮಯದಲ್ಲಿನಾ ಸಹಾಯ ಹಸ್ತ
ಶ್ರೀ ವಿಶ್ವಕರ್ಮ ಬ್ರಾಹ್ಮಣ ಟ್ರಸ್ಟ್ (ರಿ) ವತಿಯಿಂದ ವಿಶ್ವಕರ್ಮ ಸಮಾಜ ಬಾಂಧವರಿಗೆ ಕೋವಿಡ್-19ರ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ಸುಮಾರು 25 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ತಯಾರಿಸಿ ಅದನ್ನು ಮೂಡಿಗೆರೆ ಪಟ್ಟಣ,ಬೆಳಗೊಳ, ಜನ್ನಾಪುರ, ಜಿ, ಅಗ್ರಹಾರ, ಹೆಸಗಲ್, ಶಕ್ತಿನಗರ ಹಾಗೂ ಬಿದರಹಳ್ಳಿ ಗ್ರಾಮದ ಕುಟುಂಬದ ಮನೆಗಳಿಗೆ ಭೇಟಿ ನೀಡಿ ಶ್ರೀ ವಿಶ್ವಕರ್ಮ ಬ್ರಾಹ್ಮಣ ಟ್ರಸ್ಟ್ ನ ಅಧ್ಯಕ್ಷರು ಡಿ. ದಿನಕರ ಆಚಾರ್ಯ ಹಾಗೂ ಪದಾಧಿಕಾರಿಗಳಾದ ಬಿ. ಎನ್. ಚಂದ್ರಾಯ ಚಾರ್ಯ, ಪಿ. ವಿಶ್ವ ಕುಮಾರ್ ಹಾಗೂ ಎಸ್ ಮಂಜುನಾಥ್ ಇವರುಗಳು ವಿತರಿಸಿದರು .ಇದರ ಸಂಪೂರ್ಣ ನೇತೃತ್ವವನ್ನು ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ವಿಶ್ವಕರ್ಮ ಬ್ರಾಹ್ಮಣ ಟ್ರಸ್ಟ್ ನ ಉಪಾಧ್ಯಕ್ಷರು ಆದ ಎಸ್. ಮಂಜುನಾಥ್ ರವರು ವಹಿಸಿದ್ದರು .
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೊ ನ್ಯೂಸ್

Navachaitanya Old Age Home

Career | job

About Author