AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಡಾನೆ ಹಾವಳಿ ಬೆಚ್ಚಿಬಿದ್ದ ರೈತರು* #avintvcom

1 min read
Featured Video Play Icon

ಕಾಡಾನೆ ಹಾವಳಿ ಬೆಚ್ಚಿಬಿದ್ದ ರೈತರು*

ಕಳೆದ ಮೂರ್ನಾಲ್ಕು ದಿನಗಳಿಂದ ಮೂರು ಆನೆಗಳು ಮೂಡಿಗೆರೆ ತಾಲೂಕಿನ.
ಊರುಬಗೆ ಹೊಸಹಳ್ಳಿ ಯಲ್ಲಿ ಬಂದು ಬೀಡುಬಿಟ್ಟಿದ್ದು ಕಾಫ಼ಿ ಏಲಕ್ಕಿ ಬಾಳೆ ಅಡಿಕೆ ಕಾಫ಼ಿ಼ ನಾಟಿ ಮಾಡಿದ ಗದ್ದೆ ಮತ್ತು ಅಗಾಡಿ ಯನ್ನು ತುಳಿದು ಬೆಳೆಗಳನ್ನು ನಾಶಮಾಡಿವೆ.
ಅರಣ್ಯ ಇಲಾಖೆ ಗೆ ದೂರು ನೀಡಿದರೂ ಬಂದು ಅವುಗಳನ್ನು ಓಡಿಸದೆ ಇದ್ದು ಇಂದುಇಲಾಖೆಯ ಸಿಬ್ಬಂದಿ ಬಂದು ಪಟಾಕಿ ಹಚ್ಚಿ ಓಡಿಸಲು ಪ್ರಯತ್ನಿಸಿದರೂ ಅವು ಹೊಸಹಳ್ಳಿ ಬೈರೇಗೌಡ ಮನೆ ಬಳಿಯ ತೋಟದಲ್ಲಿ ನೆಲೆಸಿವೆ.
ಇವುಗಳು ಬೈರಾಪುರ ಕಾಡಿನಿಂದ ಬಂದಿದ್ದು ಇವುಗಳನ್ನು ಅರಣ್ಯ ಇಲಾಖೆಯವರು ದೂರದ ಕಾಡಿಗೆ ಓಡಿಸಿ ರೈತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈಗಾಗಲೇ ಬೈರಾಪುರ,ಹೇರಿಕೆ, ಸತ್ತಿಗನಹಳ್ಳಿ, ಊರುಬಗೆ, ಕುಂಬರಡಿ, ಮೇಕನಗದ್ದೆ, ಹೊನ್ನೆಕೂಲು, ಮುಂತಾದ ಊರುಗಳಲ್ಲಿ ಸಾವಿರಾರು ಹೆಕ್ಟೇರ್ ಗದ್ದೆ ತೋಟ ಗಳನ್ನು ಪಾಳು ಬಿಟ್ಟು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ.
ಇಲ್ಲಿನ ಜನರ ಮೂಲ ಕಸುಬು ಕೃಷಿ.
ಗದ್ದೆಯಿಂದ ಬರುವ್ ಆದಾಯವೇ ಮುಖ್ಯವಾದುದು.
ಏಲಕ್ಕಿಯಂತೂ ನಾನಾ ಕಾಯಿಲೆಗೆ ತುತ್ತಾಗಿ ರೈತನ ಬಾಳು ಬಕಬೋರಲಾಗಿದೆ. ಈ ಆನೆಗಳಿಂದ ತಿನ್ನುವ ಅನ್ನಕ್ಕೂ ಕಲ್ಲುಬಿದ್ದಿದೆ.
ಆನೆಗಳಿಂದ ಜೀವ ಹಾನಿ ಸಂಭವಿಸುವ ಮುನ್ನ ಸರಕಾರ ಮತ್ತು ಅರಣ್ಯ ಇಲಾಖೆ ಎಚ್ಚತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಕೋರಿದೆ.
ಕಳೆದ ಕೆಲವಾರು ವರ್ಷ ಗಳಿಂದ ಆನೆಗಳಿಂದ ~ಕಾಡುಕೋಣ ~ ಹಂದಿ ಮಂಗ ನವಿಲು ಗಳಿಂದಾಗಿ ಬೆಳೆಹಾನಿ ಸಂಭವಿಸುತ್ತಿದೆ.
ಇಲಾಖೆ ನೀಡುವ ಪರಿಹಾರ ರಾವಣನ ಹೊಟ್ಟೆ ಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪರಿಹಾರವನ್ನು ಹೆಚ್ಚಿಸಿ.
ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ.

ಮಾಹಿತಿ ಕೃಪೆ.
ಹೊಸಹಳ್ಳಿ ಉಮೇಶ್.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author