*ಮಲೆನಾಡಿಗರೆ ದರೊಡೆಕೊರರಿದ್ದಾರೆ ಎಚ್ಚರ ಎಚ್ಚರ….* ಪೊಟೊ ಸಮೇತ ಮಾಹಿತಿ ಬಿಡುಗಡೆ.#avintvcom
1 min read
*ಮಲೆನಾಡಿಗರೆ ದರೊಡೆಕೊರರಿದ್ದಾರೆ ಎಚ್ಚರ ಎಚ್ಚರ ಎಚ್ಚರ*
ಪೊಟೊ ಸಮೇತ ಮಾಹಿತಿ ಬಿಡುಗಡೆ.
ದಿನಾಂಕ 18-07-2021 ರಂದು ಮೂಡಿಗೆರೆ ಪೊಲೀಸ್ ಠಾಣಾ PSI ರವಿ ರವರು ರಾತ್ರಿ ಗಸ್ತು ಮಾಡುತ್ತಿರುವಾಗ, ಮುದ್ರೇಮನೆ ಬಸ್ ನಿಲ್ದಾಣ ಹಂಪ್ಸ್ ಬಳಿ ಯಾರೋ 4-5 ಜನರು ವಾಹನ ಅಡ್ಡಗಟ್ಟು ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಹೋಗಿ ಸಿಬ್ಬಂದಿ ಸಹಾಯದಿಂದ 4 ಜನರನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿ ಒಬ್ಬನ ಬಳಿ ಪಿಸ್ತೂಲ್, ಮತ್ತೊಬ್ಬನ ಬಳಿ ಡ್ರ್ಯಾಗನ್, ಮತ್ತೊಬ್ಬನ ಬಳಿ ಕಾರದ ಹುಡಿ,ಮತ್ತಿಬ್ಬರು ಬಳಿ ಕಬ್ಬಿಣದ ರಾಡು, ಟಾರ್ಚ್ ಇದ್ದು, ಇವರುಗಳ ಬಳಿ ಎರಡು ಮೋಟಾರು ಸೈಕಲ್ ಇದ್ದು KA 51 ಸಿ 1685, KA 18 W 7484 ಇದ್ದು ಸದರಿಯವರುಗಳು ನಿರ್ಜನ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಹಣ/ ಬಂಗಾರ ದರೋಡೆ ಮಾಡುವ ಸಂಚಿನ ಬಗ್ಗೆ ಬಂದಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ನಂಬರ್.145/2021 ಕಾಯಿದೆ 399,402 ಐಪಿಸಿ ಮತ್ತು 3,25 ಆರ್ಮ್ಸ್ ಆಕ್ಟ್ ರೀತ್ಯಾ ಪ್ರಕರಣ ದಿನಾಂಕ 18-07-2021 ರಂದು ದಾಖಲಾಗಿದೆ.
ಆರೋಪಿತರು
1. ಕುಮಾರ@ ಶಿವು ಬಿನ್ ಶ್ರೀಕಂಠಮೂರ್ತಿ,29 ವರ್ಷ ಲಿಂಗಾಯತ ಜನಾಂಗ ವಾಸ ಬಿ ಹೋಸುರೂ ಮಂಡ್ಯ
2.ಕುಮಾರ ಸ್ವಾಮಿ @ ಹುಲೀವಲ ಚೇತನ ಬಿನ್ ನಂಜುಂಡೇಗೌಡ 23 ವರ್ಷ, ಒಕ್ಕಲಿಗ ಜನಾಂಗ ವಾಸ ಹುಲಿವಲ ಗ್ರಾಮ ಹೊಳೆನರಸೀಪುರ ಹಾಸನ.
3.ಅಜಯ @ ಬಾಬು ಮರ್ಲೆ ಬಿನ್ ಸುನಿಲ್ ಸಿಂಗ್ ರಜಪೂತ್ 25 ವರ್ಷ ವಾಸ ಪಿಣ್ಯಾ ಬೆಂಗಳೂರು.
4. ಶಿವ ಕುಮಾರ ಬಿನ್ ರಾಮ ಪುಜಾರಿ 40 ವರ್ಷ ವಾಸ ಕೊಟ್ಟಿಗೆ ಹಾರ ಬಣಕಲ್ ಮೂಡಿಗೆರೆ.
ಮೂಡಿಗೆರೆ ಪಿ ಎಸ್ ಐ ರವಿ ಮಾತನಾಡಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು.
ರಾತ್ರಿ ಸಮಯದಲ್ಲಿ ಅಪರಿಚಿತರು ಅಡ್ಡ ಹಾಕಿದಾಗ ಜಾಗ್ರತೆಯಿಂದ ಇರಬೇಕು.
ಹೊಂಸ್ಟೆಗಳಲ್ಲಿ ಗುರುತಿನ ಚೀಟಿ ಕಡ್ಡಾಯವಾಗಿ ಪಡೆಯಬೇಕು.
ಅಪರಿಚಿತರು ಕಂಡು ಬಂದರೆ ಅವರ ಮೇಲೆ ಅನುಮಾನ ಬಂದರೆ ಕೂಡಲೆ ಹತ್ತಿರದ ಪೊಲಿಸ್ ಸ್ಟೆಷನ್ ಗೆ ಮಾಹಿತಿ ನೀಡಬೇಕು.
ಸಾರ್ವಜನಿಕರು ಸಹಕರಿಸಿದರೆ ಅಪರಾದಿಗಳು ಸುಲಭವಾಗಿ ಸಿಗುತ್ತಾರೆ ಎಂದರು.
ದರೊಡೆಕೊರರು ಅನೇಕ ಜಿಲ್ಲೆಗಳಲ್ಲಿ ಅಪರಾದದ ಹಿನ್ನೆಲೆಯಲ್ಲಿ ಕೇಸುಗಳನ್ನು ಎದುರಿಸುತಿದ್ದಾರೆ.
ಐಷಾರಾಮಿ ವಾಹನಗಳನ್ನು ಅಡ್ಡಗಟ್ಟಿ ಹಣ ಚಿನ್ನ ವಸೂಲಿ ಮಾಡುತ್ದ್ದರು.
ಪೊಲಿಸರು ತಮ್ಮ ಜೀವದ ಹಂಗು ತೊರೆದು ಅಗುವ ಅನಾಹುತಕ್ಕೆ ತೆರೆ ಎಳೆದಿದ್ದಕ್ಕೆ ಜಿಲ್ಲಾ ಪೊಲಿಸ್ ಅದಿಕಾರಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಹೊಂಚು ಹಾಕಿ ಕಾಯುತಿದ್ದ ದರೊಡೆಕೊರರಿಂದ ಅಗುವ ಅನಾಹುತವನ್ನು ತಪ್ಪಿಸಿದ್ದಕ್ಕಾಕಿ ಜಿಲ್ಲೆಯ ಜನತೆ ಮೂಡಿಗೆರೆ ಪೊಲಿಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.