*ಬೆಂಗಳೂರು ನಿರ್ಮಾಪಕ ನಾಡಪ್ರಭು ಕೆಂಪೇಗೌಡರ 512 ನೇ ವರ್ಷದ ಜಯಂತಿ* #avintvcom
1 min read
*ಬೆಂಗಳೂರು ನಿರ್ಮಾಪಕ ನಾಡಪ್ರಭು ಕೆಂಪೇಗೌಡರ 512 ನೇ ವರ್ಷದ ಜಯಂತಿ*
ವಿಶಿಷ್ಟ ರೀತಿಯಲ್ಲಿ ಸರಳ ಆಚರಣೆ
ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ರ 512ನೇ ಜಯಂತಿಯನ್ನು ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಅಖಿಲ ಕರ್ನಾಟಕ ಒಕ್ಕಲಿಗರ ಪದವೀಧರ ವೇದಿಕೆ ರಾ ರಾ ನಗರ ಕನ್ನಡ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಗಿಡ ನೆಡೆಸುವುದು, ಕೆಂಪೇಗೌಡರ ಜೀವನ ಚರಿತ್ರೆಯ ಕಿರುಹೊತ್ತಿಗೆ, ಲಕ್ಷ್ಮಿ ದೇವಿ ಜೀವನ ಚರಿತ್ರೆಯ ಪುಸ್ತಕ ಉಚಿತ ವಿತರಣೆ, ಕರೋನ ವೈದ್ಯರಿಗೆ ಮತ್ತು ವಾರಿಯರ್ಸ್ ಗಳಿಗೆ ಸನ್ಮಾನ, ಮಾಸ್ಕ್ ವಿತರಣೆ, ಸಿಹಿ ಹಂಚಿಕೆ ಇತರೆ ಕಾರ್ಯಕ್ರಮಗಳೊಂದಿಗೆ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗರ ಡೈರೆಕ್ಟರಿ ಸಂಪಾದಕ ಕೆ.ಟಿ. ಚಂದ್ರು ಕೆಂಪೇಗೌಡ್ರು ಸರ್ವೇಜನೋ ಸುಖಿನೋ ಭವಂತು ಎಂಬ ನುಡಿಯಂತೆ ಎಲ್ಲ ಜಾತಿ ಧರ್ಮವನ್ನು ಸಮಾನತೆಯಲ್ಲಿ ಕಂಡು ಬೆಂಗಳೂರು ನಿರ್ಮಾಣ ಮಾಡಿ ಎಲ್ಲ ಜನರ ಅಭಿವೃದ್ಧಿಗಾಗಿ ಆಡಳಿತ ನಡೆಸಿದರು ಅವರು ಕಟ್ಟಿದ ಈ ಬೆಂಗಳೂರು ನಗರ ವಿಶ್ವ ವಿಖ್ಯಾತಿಯಾಗಿ ಭರತ ಖಂಡದಲ್ಲಿ ಮಿನಿಗುತ್ತಿದೆ ಬೆಂಗಳೂರು ನಗರ ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಎಷ್ಟು ಮುಖ್ಯವೋ ಅವರ ಸೊಸೆ ತ್ಯಾಗಿ ಲಕ್ಷ್ಮಿ ದೇವಿ ಅಷ್ಟೇ ಮುಖ್ಯ ಎಂಬುದನ್ನು ಇಲ್ಲಿ ಸ್ಮರಿಸಬೇಕಾಗಿದೆ. ಬೆಂಗಳೂರು ಕೋಟೆ ನಗರ ನಿರ್ಮಾಣಕ್ಕೆ ತುಂಬು ಗರ್ಭಿಣಿ ಸ್ವಯಂ ರಕ್ತ ಬಲಿದಾನ ಮಾಡಿದ ಫಲವೇ ಬೆಂಗಳೂರು ಕೋಟೆ ನಿಂತಿದ್ದು ಅಂದಿನಿಂದ ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದ್ದು ಈ ದಿನದ ಜಯಂತಿ ಯಂದು ಆ ಮಹಾತ್ಯಾಗಿ ಲಕ್ಷ್ಮೀದೇವಿ ಇಲ್ಲಿ ಸ್ಮರಿಸುವಿದು ಅತೀ ಮುಖ್ಯ ಎಂದು ತಿಳಿಸಿದರು.ಡಾ ಗೋವಿಂದಯ್ಯ ಮಾತನಾಡಿ ಕೆಂಪೇಗೌಡರ ಆದರ್ಶಗಳು ಮತ್ತು ತತ್ವ ಸಿದ್ದಂತಾಗಳು ಈಗಿನ ಕಾಲಕ್ಕೂ ಯುವ ಜನತೆಗೆ ಆದರ್ಶ ಪ್ರಾಯವಾಗಿದೆ ಅವರ ಆಡಳಿತ ವೈಖರಿಯನ್ನು ಇಂದಿನ ರಾಜಕೀಯ ವ್ಯಕ್ತಿಗಳು ಪಾಲಿಸಿದ್ದಾರೆ ರಾಜ್ಯ ರಾಮವಾಗುತ್ತದೆ ಎಂದರು ಪ್ರೊ ನಾರಾಯಣ ಘಟ್ಟರ್ ರವರು ಮಾತನಾಡಿ ಕೆಂಪೇಗೌಡ ದೂರದೃಷ್ಟಿ ಮಹತ್ವ ವಾದದ್ದು ಅವರು ಕಟ್ಟಿಸಿದ ಕೆರೆ ಕುಂಟೆಗಳು ಇಂದು ಮಾಯವಾಗಿದೆ. ಗಿಡ ಮರಗಳಾಗಿವೆ ಅವುಗಳನ್ನು ನಾವು ಈಗ ಉಳಿಸಬೇಕಾಗಿದೆ ಎಂದರು. ಅಖಿಲ ಕರ್ನಾಟಕ ಒಕ್ಕಲಿಗ ಪದವೀಧರ ವೇದಿಕೆ ಅಧ್ಯಕ್ಷ ವೆಂಕಟೇಶ್ ಗೌಡ ಮಾತನಾಡಿ ನಾಡಪ್ರಭು ಕೆಂಪೇಗೌಡ ರ ನೆನಪು ಅವರ ಆದರ್ಶ ಮುಂದಿನ ಪೀಳಿಗೆಗೆ ಆದರ್ಶವಾಗಬೇಕಿದೆ. ಅವರು ಎಲ್ಲ ಧರ್ಮದ ಜನರನ್ನು ಸಮಾನತೆಯಿಂದ ಕಾಣುತಿದ್ದು ಅವರ ಅಭಿವೃದ್ಧಿ ಗೆ ಶ್ರಮಿಸಿದ ಸಮಂತರಾಜು ಎಂದು ತಿಳಿಸಿ ಅವರನ್ನು ಎಷ್ಟು ಸ್ಮರಿಸಿದರು ಸಾಲದು ಎಂದರು. ರಾರಾ ನಗರ ಬಿಜೆಪಿ ಮುಖಂಡ ಜಗದೀಶ್ ರಾಮಚಂದ್ರ ರವರು ಮಾತನಾಡಿ ನಡಪ್ರಭು ಕೆಂಪೇಗೌಡ ರ ಈ ದಿನಾಚರಣೆ ಅರ್ಥಪೂರ್ಣವಾಗಿದೆ ಇಂದು ಗಿಡನೆಡುವ ಕಾರ್ಯಕ್ರಮ ಕರೋನ ವಾರಿಯರ್ಸ್ಗಳಿಗೆ ಸನ್ಮಾನ, ಮಾಸ್ಕ್ ವಿತರಣೆ ಕೆಂಪೇಗೌಡ ರ ಮತ್ತು ಅವರ ಸೊಸೆ ತ್ಯಾಗಿ ಲಕ್ಷ್ಮಿ ದೇವಿ ಜೀವನ ಚರಿತ್ರೆ ಪುಸ್ತಕ ಉಚಿತ ವಿತರಣೆ ಯನ್ನು ಒಕ್ಕಲಿಗ ಡೈರೆಕ್ಟರಿ ಸಂಸ್ಥೆ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ನಾವೆಲ್ಲರೂ ಕೆಂಪೇಗೌಡ ರ ಆದರ್ಶವನ್ನು ಪಾಲಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿರಾವರಿ ತಜ್ಞ ಹಾಗೂ ಕೆಂಪೇಗೌಡ ರ ಜೀವನ ಚರಿತ್ರೆ ಸಂಪಾದಕರ ಡಾ. ಗೋವಿಂದ ರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾರಾ ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಂದ್ರ ಕುಮಾರ್ ಆದಿಚುಂಚನಗಿರಿ ಮಹಿಳಾ ಸಂಘದ ಅಧ್ಯಕ್ಷೆ ಡಾ. ಕರುಣಾ ವೀರಾಕೆಂಪಯ್ಯ, ಸಮಾಜ ಸೇವಕ ಜಗದೀಶ್ ಗೌಡ ಕೆಂಪೇಗೌಡ ವಾಲಿಬಾಲ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥಾಪಕ ಅಧ್ಯಕ್ಷರು ಟಿ ನಂಜಪ್ಪ ಒಕ್ಕಲಿಗ ಯುವ ಮುಖಂಡ ವಾಸು,ಕಾಳಪ್ಪ, ದಾಸಪ್ಪ, ಲಯನ್ಸ್ ಅಧ್ಯಕ್ಷೆ ಡಾ ಸತ್ಯವತಿ ಮುಂತಾದವರು ಭಾಗವಹಿಸಿ ನಾಡಪ್ರಭು ಕೆಂಪೇಗೌಡ ರಿಗೆ ನುಡಿ ನಮನ ಸಲ್ಲಿಸಿದರು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.