AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಒಕ್ಕೂಟ*#avintvcom

1 min read
Featured Video Play Icon

*ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಒಕ್ಕೂಟ*

ಮೂಡಿಗೆರೆ ತಾಲ್ಲೂಕು.
ಚಿಕ್ಕಮಗಳೂರು ಜಿಲ್ಲೆ
ಕರ್ನಾಟಕ ರಾಜ್ಯ**

ಆತ್ಮೀಯ ಸಾರ್ವಜನಿಕ ಬಂಧುಗಳಲ್ಲಿ ಮನವಿ.
ದಿನಾಂಕ.10.5.2021 ರಂದು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಿರುಗುಂದ ಗ್ರಾಮದ ಕೆ.ಎಲ್. ಪುನೀತ್ ಎಂಬ ಯುವಕನನ್ನು ಗೋಣಿಬೀಡು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅರ್ಜುನ್ ಎಂಬಾತ ವಿನಾಕಾರಣ ಈ ಯುವಕನನ್ನು ಠಾಣೆಗೆ ಎಳೆದೊಯ್ದು ಆತನಿಗೆ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಮೂತ್ರ ಕುಡಿಸಿ ಅಮಾನ ವೀಯವಾಗಿ ನಡೆಸಿ ಕೊಂಡಿರುವ ಬಗ್ಗೆ ಇಡೀ ಮಾನವ ಸಮಾಜ ತಲೆತಗ್ಗಿಸುವಂತಾಗಿದೆ.
ಬಹುಸಂಖ್ಯಾತ ದಲಿತ ಸಮುದಾಯವನ್ನು ಒಳಗೊಂಡಿರುವ ಮೀಸಲು ಕ್ಷೇತ್ರವಾದ ಮೂಡಿಗೆರೆಯಲ್ಲಿ ಇಂತಹ ಹೇಯ ಕೃತ್ಯ ನಡೆದಿರುವುದು ಖಂಡನೀಯ.ಸಾರ್ವಜನಿಕರು ಈ ವಿಷಯದ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ದೂರದರ್ಶನದ ಮೂಲಕ ತಾವೆಲ್ಲರೂ ವೀಕ್ಷಿಸಿರುತ್ತೀರಿ.ಇಂತಹ ಅಮಾನವೀಯ ಘಟನೆ ಇನ್ನು ಮುಂದೆ ಯಾವುದೇ ಜಾತಿ ಜನಾಂಗದ ಮನುಷ್ಯರ ಮೇಲೆ ನಡೆಯಬಾರದೆಂಬ ವಿಚಾರ ಕುರಿತು ಹಾಗೂ ಗೂಂಡಾ ವರ್ತನೆ ಪ್ರದರ್ಶಿಸಿರುವ ಪಿಎಸ್ಐ ಅರ್ಜುನ್ ನನ್ನು ಕೆಲಸದಿಂದ ವಜಾ ಮಾಡಿ ಆತನಿಗೆ ಕಠಿಣ ಶಿಕ್ಷೆಗೆ ಗುರಿಪಡಿ ಸಬೇಕೆಂದು ಸರ್ಕಾರದ ಗಮನ ಸೆಳೆಯುವ ಸಲುವಾಗಿ
ದಿನಾಂಕ 09.7.2021 ಶುಕ್ರವಾರ ದಂದು ಮೂಡಿಗೆರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜಕಾರಣಿಗಳು,ರಾಜಕೀಯ ಮುಖಂಡರುಗಳು ಹಾಗೂ ಕಾರ್ಯಕರ್ತರು,ಪ್ರಗತಿ ಪರ ಸಂಘಟನೆಗಳಾದ ಸಿ.ಪಿ ಐ,
ಸಿ ಪಿ ಐ ಎಮ್ ಎಲ್, ರೈತಸಂಘ, ಕನ್ನಡಪರ ಸಂಘಟನೆಗಳು, ವರ್ತಕರ ಸಂಘ,ಆಟೋರಿಕ್ಷಾ ವಾಹನ ಮಾಲೀಕರು ಚಾಲಕರ ಸಂಘ,ಟ್ಯಾಕ್ಷಿ ಮಾಲೀಕರು ಹಾಗೂ ಚಾಲಕರ ಸಂಘ

ಹಾಗೂ ಟೈಲರ್ ಅಸೋಸಿಯೇಶನ್, ಎಲ್ಲಾ ಪ್ರಗತಿಪರ ಮುಸ್ಲಿಂ ಸಂಘಟನೆಗಳು, ಹಾಗೂ ಕೂಲಿ ಕಾರ್ಮಿಕರು,ಕಟ್ಟಡ ಕಾರ್ಮಿಕರು,ಹಿತೈಷಿಗಳು ಹಾಗೂ ಬಂಧುಗಳು ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತ್ರಸ್ತ ಯುವಕ ಕೆ.ಎಲ್. ಪುನೀತ್ ನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮೆಲ್ಲರಲ್ಲಿ ವಿನಮ್ರವಾಗಿ ವಿನಂತಿಸುತ್ತೇನೆ .

ವಂದನೆಗಳೊಂದಿಗೆ. ಕಿರುಗುಂದ ರಾಮಯ್ಯ.
ಪ ಜಾ ಪ ಪಂ ಗಳ ಹಿತರಕ್ಷಣ
ಒಕ್ಕೂಟ ಕಾರ್ಯದರ್ಶಿ. ಮೂಡಿಗೆರೆ ತಾಲ್ಲೂಕು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author