AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೆಸಿ ವತಿಯಿಂದ ಮೂಡಿಗೆರೆ ಎಂ ಜಿ ಎಂ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು #avintvcom

1 min read
Featured Video Play Icon

ರಾಷ್ಟ್ರೀಯ ವೈದ್ಯರ ದಿನಾಚರಣೆ*

 

01-07-2021 ರಂದು ಗುರುವಾರ ಮೂಡಿಗೆರೆ ಜೆಸಿ ವತಿಯಿಂದ ಮೂಡಿಗೆರೆ ಎಂ ಜಿ ಎಂ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಜೇಸಿ ಚಂದ್ರಶೇಖರ್ ಕುನ್ನಹಳ್ಳಿ ಅವರು ವಹಿಸಿದರು,
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಯನ್ನು ಕೇಕ್ ಕತ್ತರಿಸುವ ಮೂಲಕ ಹಾಗೂ ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತ್ತು. ಕೋವಿಡ್ ವಾರಿಯರ್ಸ್ ಡಾಕ್ಟರ್ ಗಳಾದ ಡಾ. ಶಾಂಭವಿ.ಇ ಎನ್ ಟಿ ಮತ್ತುಎಂಜಿಎಂ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಡಾ.ಶಿವ ಪ್ರಸಾದ್ ರವರು ಸ್ಕಿನ್ ಸ್ಪೆಷಲಿಸ್ಟ್,
ಡಾ. ಮಾನಸ. ಪಿಜಿಷಿಯನ್,
ಡಾಕ್ಟರ್ ಇಮ್ರಾನ್ ಆಯುರ್ವೇದಿಕ್ ಮೂಡಿಗೆರೆ ಇವರುಗಳಿಗೆ ಜೇಸಿ ವತಿಯಿಂದ ಸನ್ಮಾನಿಸ ಲಾಯಿತು.
ಎಲ್ಲ ಡಾಕ್ಟರುಗಳಿಗೆ ಕಿರು ಕಾಣಿಕೆ ಮತ್ತು ಗುಲಾಬಿ ಹೂ ನೀಡಿ ಶುಭಹಾರೈಸಿದರು.
.ಹಾಗೂ ಶುಶ್ರೂಕಿಯವರ ದಿನಾಚರಣೆ ಪ್ರಯುಕ್ತ ಶುಶ್ರೂಕಿ ಅಧಿಕಾರಿಗೆ ಸನ್ನಾನಿಸಲಾಯಿತ್ತು.
ಕೆ.ಪಿ ವರಮಹಾಲಕ್ಷ್ಮಿ, ಶುಶ್ರೂಕಿ ಅಧಿಕಾರಿಗಳು, ಹಾಗೂ ವಾಣಿ ಶುಶ್ರೂಕಿ ಅಧಿಕಾರಿಗಳು ಅವರನ್ನು ಸಹ ಜೇಸಿ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಎಲ್ಲಾ M.G.M ಅಸ್ಪತ್ರೆಯ ಸಿಬ್ಬಂದಿಗಳಿಗೆ ಶುಭಹಾರೈಸಲಾಯಿತು. ಪ್ರಸ್ತಾವಿಕ ನುಡಿ ಜೇಸಿ ನಿಕಟಪೂರ್ವ ಅಧ್ಯಕ್ಷರು ರವಿ ಕುಮಾರ್ ಮಾತನಾಡಿ ಎಲ್ಲಾ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯ ಡಾಕ್ಟರುಗಳಿಗೆ ಶುಭಹಾರೈಸಿ ಕೋವಿಡ್ 19 ರ ಸಂಕಷ್ಟದಲ್ಲಿ ವೈದ್ಯರುಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮೂಡಿಗೆರೆಯಲ್ಲಿ ತುಂಬಾ ಚೆನ್ನಾಗಿ ಸೇವೆಯನ್ನು ಸಲ್ಲಿಸಿರುವುದರಿಂದ ಸಾರ್ವಜನಿಕರಿಗೆ ತುಂಬಾ ಸಂತೋಷವಾಗಿದೆ. ಡಾಕ್ಟರ್ ಹಾಗೂ ಎಲ್ಲಾ ಎಂಜಿಎಂ ಸಿಬ್ಬಂದಿ ವರ್ಗದವರು ತಮ್ಮ ಆರೋಗ್ಯವನ್ನು ಬದಿಗೊತ್ತಿ ಎಲ್ಲರೂ ಸೇವೆಯನ್ನು ಸಲ್ಲಿತಿರುತ್ತಾರೆ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.
ಮುಖ್ಯಅತಿಥಿಗಳಾಗಿ ಜೇಸಿ ಪೂರ್ವಅಧ್ಯಕ್ಷರು, ಹಾಗೂ ವಲಯ 14 ರ ಪೂರ್ವ ವಲಯ ಅಧಿಕಾರಿಗಳಾದ ಜೇಸಿ ರಮೇಶ್ ಆಚಾರ್ಯರವರು ಮಾತನಾಡಿ,
ಜನ್ಮ ಕೊಡುವಳು ತಾಯಿಯಾದರೆ ಪ್ರಾಣ ಉಳಿಸುವವರು ವೈದ್ಯರು,
ನಮ್ಮ ದೇವಸ್ಥಾನಗಳು ಎರಡು ವರ್ಷದಿಂದ ಬಾಗಿಲು ಮುಚ್ಚಿದ್ದರೂ ಅಸ್ವತ್ರೆ ಎಂಬ ದೇವಾಲಯ 24 ಗಂಟೆ ಬಾಗಿಲು ತೆರೆದಿರುತ್ತದೆ.
ಅದರಲ್ಲಿ ವೈದ್ಯರೆಂಬ ದೇವರು ಸದಾ ಸೇವೆ ಕೊಟ್ಟಿರುತ್ತಾರೆ ಎಂದು ಹಿತನುಡಿಗಳಾಡಿದರು.
ಹಾಗೂ ಎಂ ಜಿ ಎಂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಆದ ಡಾ.ಶಾಂಭವಿ ಮಾತಾನಾಡಿ ಮೂಡಿಗೆರೆ ಜೆಸಿ ಸಂಸ್ಥೆಯವರು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ ಇಂದು ಜೆಸಿಐ ಇವರು ನಮ್ಮ ಆಸ್ಪತ್ರೆಗೆ ಬಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸುವ ಮೂಲಕ ವೈದ್ಯರಿಗೆ ಶುಭಹಾರೈಸಿ ರುವುದು ತುಂಬಾ ಸಂತಸಕರ ವಿಷಯ ಹಾಗೂ ಇಂದಿನ ದಿನವನ್ನು ನಾವು ಎಂದೂ ಮರೆಯಲಾರದ ದಿನ. ನಮ್ಮ ಸೇವೆಯನ್ನು ಗುರುತಿಸಿ ಸನ್ಮಾನಿಸಿದಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಜೆಸಿಯವರಿಗೆ ತಿಳಿಸಿದರು. ಡಾ.ಸುಂದರೇಶ, ತಾಲ್ಲೂಕ್ ಆಡಳಿತ ವೈದ್ಯಾಧಿಕಾರಿಗಳು, ಮಾತನಾಡಿ ಮೂಡಿಗೆರೆ ಜೆಸಿ ಅವರು ಬಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಶುಭಾಶಯಗಳನ್ನು ಕೋರಿದಕ್ಕೆತುಂಬಾ ಸಂತೋಷವಾಯಿತು ಎಂದು ತಿಳಿಸಿದರು. ಡಾಕ್ಟರ್ ಶಿವಪ್ರಸಾದ್ ಅವರು ಮಾತನಾಡಿ ಮೂಡಿಗೆರೆ ಜೇಸಿ ನಮ್ಮ ಎಂಜಿಎಂ ಆಸ್ಪತ್ರೆಗೆ ಬಂದು ವೈದ್ಯರ ದಿನದ ಸೆಲೆಬ್ರೇಟ್ ಮಾಡುತ್ತಿರುವ ತುಂಬಾ ಸಂತೋಷದ ವಿಷಯ ನಮ್ಮ ಎಲ್ಲ ಡಾಕ್ಟರು ಹಾಗೂ ನಮ್ಮ ಸಿಬ್ಬಂದಿ ವರ್ಗದವರು ಮೂಡಿಗೆರೆಯಲ್ಲಿ ತುಂಬಾ ಒಳ್ಳೆಯ ರೀತಿಯಲ್ಲಿಕೆಲಸ ಮಾಡಿರುತ್ತಾರೆ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾಕ್ಟರ್ ಭೀಮ್ ಚಂದ್ರ ರಾಯ್ ಅವರಜನ್ಮ ಮತ್ತು ಮರಣದ ನೆನಪಿಗಾಗಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀಮತಿ ಚಿತ್ರ ರವರು ನರ್ಸಿಂಗ್ ಅಧಿಕಾರಿಗಳು ಮಾತನಾಡಿ ಮೂಡಿಗೆರೆ ಜೆಸಿ ಸಂಸ್ಥೆಯವರು ಬಂದು ನಮ್ಮೇಲ್ಲರನ್ನು ಗೌರವಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.ಜೆಸಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಕುನ್ನಹಳ್ಳಿ ಮಾತನಾಡಿ ವೈದ್ಯೋ ನಾರಾಯಣ ಹರಿ ಎಂಬ ನಾಡ್ ನುಡಿಯಂತೆ ತಂದೆ-ತಾಯಿಯಲ್ಲಿ ದೇವರನ್ನು ಕಾಣುತ್ತೇವೆ. ಹಾಗೆಯೇ ದೇವರನ್ನು ವೈದ್ಯರಲ್ಲಿ ಕಾಣುತ್ತವೆ. ಜನ್ಮ ಕೊಡುವವರು ತಂದೆ-ತಾಯಿಗಳಾದರೆ ಪ್ರಾಣ ಉಳಿಸುವರು ವೈದ್ಯರು ಎಂದರು.
.ಸ್ವಾಗತವನ್ನು ಎಂಜಿಎಂ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಹೇಮಂತ್ ಭಟ್ಟರವರು ಮಾಡಿದರು.
ಜೆಸಿ ಕಾರ್ಯದರ್ಶಿ ಜೇಸಿ ಶ್ರೇಷ್ಠಿಯವರು ವಂದಿಸಿದರು.
ವೇದಿಕೆಯಲ್ಲಿ ಜೇಸಿರೆಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್,
ಜೆಸಿರಟ್ ಕಾರ್ಯದರ್ಶಿ ಕೃತಿ ಪ್ರದೀಪ್ ಇದ್ದರು. ಕಾರ್ಯಕ್ರಮದಲ್ಲಿ ಜೇಸಿ ಪೂರ್ವಅಧ್ಯಕ್ಷರಾದ ಪ್ರದೀಪ್ ದುಂಡಗ.
ವಿನೋದ್ .
ಶಶಿಕರಣ್ .
ಜೇಸಿ ಸದಸ್ಯರಾದ ವಿಶ್ವ ಕುಮಾರ್ .
ಬಸವರಾಜ್ .
ಪ್ರದೀಪ್ ಕುನ್ನಹಳ್ಳಿ.
ನಝೀಮ್ .
ಆಕಾಶ್ .
ಜೇಸಿರೆಟ್ ಪೂರ್ವಾಧ್ಯಕ್ಷರಾದ ಸೌಭಾಗ್ಯ ಅತುಲ್ ರಾವ್ .
ವಿದ್ಯಾರಾಜ್ , ಜೆಜೆಸಿ ಅಧ್ಯಕ್ಷರಾದ ರಾಣಿ ಚಂದ್ರಶೇಖರ್ ಹಾಗೂ ಎಂ ಜಿ ಎಂ ಆಸ್ಪತ್ರೆಯ ಎಲ್ಲಾ ಡಾಕ್ಟರುಗಳು ಹಾಗೂ ಶುಶ್ರೂಕಿ
ಅಧಿಕಾರಿಗಳು,ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಹಾಗೆಯೇ ಈ ದಿನ ಎಂಜಿಎಂ ಆಸ್ಪತ್ರೆಯ ಶುಶ್ರೂಕಿಯರು ಶುಶ್ರೂಕಿ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author