AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳಸ:ವೈದ್ಯರು ದೈವ ಸ್ವರೂಪಿಗಳು :ಡಾ.ಮೋಹನ್ ರಾಜಣ್ಣ. #avintvcom

1 min read
Featured Video Play Icon

ಕಳಸ : ವೈದ್ಯರು ದೈವ ಸ್ವರೂಪಿಗಳು :ಡಾ.ಮೋಹನ್ ರಾಜಣ್ಣ.
ಕಳಸ; ಎಲ್ಲರ ಪ್ರಾಣ ಉಳಿಸುವ ವೈದ್ಯರು ದೇವರ ಪ್ರತಿರೂಪ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು.
ಅವರು ಇಂದು ಡಾ.ಭಿದಾನ್ ಚಂದ್ರರಾಯ್ ರವರ ಜನ್ಮದಿನವಾದ ಜುಲೈ ಒಂದು ವಿಶ್ವ ವೈದ್ಯರ ದಿನಾಚರಣೆಯಪ್ರಯುಕ್ತ ಕಳಸ ಪಟ್ಟಣದ ರಾಘವೇಂದ್ರ ಕ್ಲಿನಿಕ್ ನ ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ.ಜಿ. ಬಿ. ನಟರಾಜ್ ರವರಿಗೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ವೈದ್ಯರು ತಾಳ್ಮೆ. ಸಹನಶೀಲಗುಣ.ರೋಗಿಗಳ ಬಗ್ಗೆ ನಿಸ್ಕಲ್ಮಷ ಪ್ರೀತಿ. ಇಡೀ ಜಗತ್ತಿಗೆ ಮಾದರಿ ಹಾಗೂ ಸೇವಾ ಮನೋ ಭಾವ. ಸಮಾಜದ ಅರೋಗ್ಯ ಜಾತಿ ಮತ ಧರ್ಮ ಗಳ ಮೀರಿ ನಿಂತ ಆಧುನಿಕ ಬ್ರಹ್ಮ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜಿ. ಬಿ. ನಟರಾಜ್ ನಮ್ಮಲೊಂದು ಮಾತೃ ಹೃದಯ ವಿದೆ ನೋವು ನಲಿವು ಗಳಿಗೆ ಮಿಡಿಯುವ ನಿಸ್ವಾರ್ಥ ಮನಸ್ಸಿದೆ ರೋಗಿಗಳ ಸಾವು -ನೋವಿ ನಿಂದ ಉಳಿಸಿ ಸಂತಸ ಪಡುವ ಹೃದಯ ವೈಶಾಲ್ಯತೆ ಯಿದೆ ಎಂದರು.

ಪತ್ರಿಕಾ ಪ್ರತಿನಿಧಿ ಕುಕ್ಕೋಡು ಗಣೇಶ್ ಮಾತನಾಡುತ್ತ ವೈದ್ಯರು ಆಧುನಿಕ ಬ್ರಹ್ಮ ಚೈತನ್ಯ ಇವರಿಗೆ ನಮನ ಗಳನ್ನು ಸಲ್ಲಿಸುತ್ತೇನೆ. ವೈದ್ಯರಿಗೂ ಸಹ ಕುಟುಂಬವಿದೆ.ತಂದೆ -ತಾಯಿ, ಪತ್ನಿ. ಮಕ್ಕಳು . ಎಲ್ಲರ ಮರೆತು ರೋಗಿಗಳ ರಕ್ಷಿಸಲು ಅನವರತ ಹೋರಾಟ ನೆಡೆಸುತ್ತಿರುವ ತ್ಯಾಗಮಯಿ ಎಂದರು.
ಕಾರ್ಯಕ್ರಮ ದಲ್ಲಿ ಸುಹಾಸ್. ಗಜೇಂದ್ರ. ರಾಘವೇಂದ್ರ ಇದ್ದರು.

Career | job

Navachaitanya Old Age Home

About Author