**ಸರ್ಕಾರಕ್ಕೆ ಮನವಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ** #avintvcom
1 min read
**ಸರ್ಕಾರಕ್ಕೆ ಮನವಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ**
ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು.
ದಿನಾಂಕ 26-06-2021 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ. ಭಾರತ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ, ಕೃಷಿ ಉತ್ಪನ್ನಗಳಿಗೆ ಕಾನೂನಿನ ರಕ್ಷಣೆ, ಇನ್ನಿತರ ವಿಷಯಗಳ ವಿಚಾರವಾಗಿ ದೆಹಲಿ ಗಡಿಗಳಲ್ಲಿ ಕಳೆದ ಏಳು ತಿಂಗಳಿನಿಂದ ಅನಿರ್ದಿಷ್ಟ ಕಾಲದ ಸತ್ಯಗ್ರಹ ಮುಂದುವರೆದಿದೆ. ಈ ಹೋರಾಟಕ್ಕೆ ಬೆಂಬಲಿಸಿ ಮತ್ತು ಕಳೆದ 16 ತಿಂಗಳ ಕೋವಿಡ್ ಅವಧಿಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಆದ ನಷ್ಟ ಹಾಗೂ ಭತ್ತ,ರಾಗಿ, ಜೋಳ ಇತ್ಯಾದಿ ಬೆಳೆಗಳ ಖರೀದಿ ಕೇಂದ್ರ ತೆರೆಯದೆ ತಡ ಮಾಡಿದ್ದಲ್ಲದೆ, ಖರೀದಿ ಮಾಡಿದ ಬೆಳೆಗಳ ಹಣವನ್ನು ಸರ್ಕಾರ ಪಾವತಿ ಮಾಡಿಲ್ಲ.
ರೈತರ ಪಂಪ್ಸೆಟ್ ಗಳಿಗೆ ಸರಿಯಾದ ವಿದ್ಯುತ್ ಸರಬರಾಜು ಮಾಡದೇ ಇರುವುದು, ರೈತರ ಸಾಲ ಮನ್ನಾ ಇನ್ನಿತರ ವಿಷಯಗಳ ಕುರಿತು ದಿನಾಂಕ 26- 06-2021 ರಂದು ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಎಂದು ಈ ಮೇಲಿನ ಒತ್ತಾಯಗಳನ್ನು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಕರೆ ನೀಡಿರುವಂತೆ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲು ರೈತರು, ದಲಿತರು,ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಡಿ. ಆರ್. ದುಗ್ಗಪ್ಪ ಗೌಡ
ಜಿಲ್ಲಾಧ್ಯಕ್ಷರು.
ಬಿ.ಸಿ. ದಯಾಕರ್
ಕಾರ್ಯಾಧ್ಯಕ್ಷರು.
http://nisargacare.com/career/