AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಜೆಡಿಎಸ್ ಪಕ್ಷದ ಶ್ರೀ ರಂಜನ್ ಅಜಿತ್ ಕುಮಾರ್* ಮನೆಗೆ ತೆರಳಿ ಕಿಟ್ ಗಳನ್ನು ವಿತರಿಸಿದ್ದಾರೆ, *#avintvcom

1 min read
Featured Video Play Icon

*ಸಹಾಯ ಹಸ್ತ*

ಕ್ಷೇತ್ರ ಜನತಾದಳ, ಮೂಡಿಗೆರೆ ವಿಧಾನಸಭಾ ಕ್ಷೇತ್ರ.

ಆತ್ಮೀಯರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿ ಕೊರೊನ ವೈರಸ್ ಎರಡನೇ ಅಲೆಯೂ ಅತೀ ವೇಗವಾಗಿ ಹರಡುತ್ತಿದ್ದೂ ಹಲವಾರು ಜನ ಸಂಕಷ್ಟಕ್ಕೆ ಸಿಲುಕಿರುತ್ತಾರೆ.
ಅದರಂತೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಹಲವಾರು ಜನ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರುಗಳಿಗೆ ಕೈಲಾದ ಮಟ್ಟಿಗೆ ಏನಾದರೂ ಸಹಾಯ ಮಾಡಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ರಂಜನ್ ಅಜಿತ್ ಕುಮಾರ್ ರವರು ಅವರ ಸ್ವಂತ ಖರ್ಚಿನಲ್ಲಿ ಫುಡ್ ಕಿಟ್ ಗಳನ್ನು ತಯಾರಿಸಿ ಇಂದು (19.06.2021) ರಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ದಾರದಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಬಡತನದಲ್ಲಿರುವವರ ಮನೆ ಮನೆಗೆ ತೆರಳಿ ಕಿಟ್ ಗಳನ್ನು ವಿತರಿಸಿದ್ದಾರೆ, ನಿಮ್ಮಗಳ ಕಷ್ಟಕ್ಕೆ ನಾನು ಹಾಗೂ ನಮ್ಮ ಜೆಡಿಎಸ್ ಪಕ್ಷವು ಸದಾ ಸ್ಪಂದಿಸಲು ಸಿದ್ದರಿರುತ್ತೇವೆ ಎಂದು ತಿಳಿಸಿದರು.
ಮಾನ್ಯ ಜಿಲ್ಲಾಧ್ಯಕ್ಷರ ಜೊತೆಯಲ್ಲಿ
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ,
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸಾಜಿದಾ,
ಸದಸ್ಯರುಗಳಾದ ಸಿದ್ದೇಶ್, ಶ್ರೀಮತಿ ನವೀನ ಅಶ್ವತ್, ಶ್ರೀಮತಿ ಲತಾ ವಿಜಯೇಂದ್ರ,
ವಿಕ್ರಂ,
ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಸುಬ್ರಮಣ್ಯ, ಹಾಗೂ ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ನಾಸೀರ್ ಬಿಳಗುಳ, ನದೀಮ್ ಮೂಡಿಗೆರೆ, ಧರ್ಮಣ್ಣ, ಸೋಮಶೇಖರ್ ಆಲೂರು, ಕೋಮರಾಜ್, ಮಂಜುನಾಥ ಹಾಗೂ ಇನ್ನಿತರರು ಜೊತೆಯಲ್ಲಿದ್ದರು.

ಇವರ ಈ ಒಂದು ಸೇವಾ ಕಾರ್ಯಕ್ಕೆ ಗ್ರಾಮಸ್ಥರುಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ .

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author