**ಕೇಂದ್ರ ಸರ್ಕಾರದ ಹಾನಿ ಪರಿಶೀಲನ ತಂಡ** ಪರಿಶೀಲನೆ ನಡೆಸಿದರು.#avintvcom
1 min read
*ಕೇಂದ್ರ ಸರ್ಕಾರದ ಹಾನಿ ಪರಿಶೀಲನ ತಂಡ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೊಕಿನ,
ಮಧುಗುಂಡಿ ಗ್ರಾಮಕ್ಕೆ ಕೇಂದ್ರದ ಹಾನಿ ಪರಿಶೀಲನಾ ತಂಡ ಬೇಟಿ ನೀಡಿತ್ತು.
ಮಧುಗುಂಡಿ ಗ್ರಾಮಕ್ಕೆ ಶುಕ್ರವಾರ ಸಂಜೆ ಕೇಂದ್ರ ಸರ್ಕಾರದ ಹಾನಿ ಪರಿಶೀಲನಾ ತಂಡದ ಹೆದ್ದಾರಿ ಸಚಿವಾಲಯದ ಅದೀಕ್ಷಕ ಅಭಿಯಂತರರಾದ ( ಮಿನಿಸ್ಟ್ರಿ ಆಪ್ ರೋಡ್ ಟ್ರಾನ್ಸ್ ಪೋರ್ಟ್ ಸೂಪರ್ಡೆಂಟ್ ಇಂಜಿನಿಯರ್) ಸದಾನಂದ ಬಾಬು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ವಿಪತ್ತು ಮತ್ತು ನಿರ್ವಹಣಾ ತಂಡದ ಆಯುಕ್ತರಾದ ಮನೋಜ್ ಮಾತನಾಡಿ, ತೌಕ್ತೆ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಆದ ಮನೆ, ರಸ್ತೆ, ಸೇತುವೆ, ಕೃಷಿ ಭೂಮಿಯ ಹಾನಿಯ ಕುರಿತ ಅನಾಹುತಗಳ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ತರಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
ಆ ವರದಿಯ ಪರಿಶೀಲನೆಗೆ ಕೇಂದ್ರದ ಅಧಿಕಾರಿಗಳು ಸ್ಥಳಗಳಿಗೆ ಬೇಟಿ ನೀಡುತ್ತಾರೆ. ಇಂದು ಹೆದ್ದಾರಿ ಸಚಿವಾಲಯದ ಅದೀಕ್ಷಕ ಅಭಿಯಂತರರಾದ ( ಮಿನಿಸ್ಟ್ರಿ ಆಪ್ ರೋಡ್ ಟ್ರಾನ್ಸ್ ಪೋರ್ಟ್ ಸೂಪರ್ಡೆಂಟ್ ಇಂಜಿನಿಯರ್) ಸದಾನಂದ ಬಾಬು ಬೇಟಿ ಪರಿಶೀಲನೆ ನಡೆಸಿದ್ದು ಅವರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಾರೆ.
ಆ ವರದಿಯ ಆಧಾರದ ಮೇಲೆ ಅನುದಾನ ಬಿಡುಗಡೆಯಾಗುತ್ತದೆ ಎಂದರು.
ತೌಕ್ತೆ ಚಂಡಮಾರುತದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ೩೦೦ ಕಿ.ಮಿ ನಷ್ಟು ರಸ್ತೆ ಹಾನಿಯಾಗಿದೆ ಎಂದು ವರದಿ ಇದ್ದು ಜಿಲ್ಲೆಯ ಹಾನಿಯಾದ ಪ್ರದೇಶಗಳಿಗೆ ಬೇಟಿ ನೀಡಿದ್ದು ಮಧುಗುಂಡಿಯಲ್ಲಿ ೭.೫ ಕಿ.ಮಿ ಡಾಂಬಾರು ರಸ್ತೆ ಹಾನಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಸ್ಥಳೀಯರ ಬಳಿ ಮಾಹಿತಿ ಕಲೆ ಹಾಕಲಾಗಿದೆ.
ಅದರ ಪ್ರಕಾರ ನಮ್ಮ ತಂಡ ಸಚಿತ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಮೇಶ್, ಜಿಲ್ಲಾ ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ತಹಶೀಲ್ದಾರ್ ರಮೇಶ್, ಜಿ.ಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ತಾ.ಪಂ ಪ್ರಭಾರಿ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/