ಮನೆ ಮೇಲೆ ವಿದ್ಯುತ್ **ಕಂಬ **ರಸ್ತೆ ತಡೆದು ಗ್ರಾಮಸ್ಥರ ಅಕ್ರೊಶ**#avintvcom
1 min read*ರಸ್ತೆ ತಡೆದು ಗ್ರಾಮಸ್ಥರ ಅಕ್ರೊಶ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ.
ಚಕ್ಕಮಕ್ಕಿಯಲ್ಲಿ ನಡೆದ ಘಟನೆ.
ಮನೆ ಮೇಲೆ ವಿದ್ಯುತ್ *ಕಂಬ ಬಿದ್ದು ತಪ್ಪಿದ ಅನಾಹುತ ಅಧಿಕಾರಿಗಳನ್ನು ಚಳಿ ಬಿಡಿಸಿದ ಗ್ರಾಮಸ್ಥರು*
ಕಳೆದ ಮೂರು ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ,ಗಾಳಿಗೆ ಬಣಕಲ್ ಸಮೀಪ ಚಕ್ಕಮಕ್ಕಿ ಗ್ರಾಮದಲ್ಲಿ ವಿದ್ಯುತ್ ಕಂಬ ಮನೆಗಳ ಮೇಲೆ ಬಿದ್ದು ಬಹುದೊಡ್ಡ ಅನಾಹುತ ತಪ್ಪಿದೆ.
ಕಂಬದಲ್ಲಿ ವಿದ್ಯುತ್ ಸಂಚಾರ ಇತ್ತು.
112.ಗೆ ಕರೆ ಮಾಡಿ ವಿದ್ಯುತ್ ನ್ನು ಅವರು ಸ್ಥಳಕ್ಕೆ ಬಂದು 2.ಘಂಟೆಗಳ ಕಾಲ ಹರಿಯುತ್ತಿದ್ದ ವಿದ್ಯುತ್ ನ್ನು ತೆರವು ಗೊಳಿಸಿದರು.
ಮನೆಯ ಮೇಲ್ಚಾವಣೆಗೆ ಅಪಾರವಾದ ನಷ್ಟ ಉಂಟಾಗಿದ್ದು ಮನೆಯಲ್ಲಿ ಇದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ವಿದ್ಯುತ್ ಕಂಬ ಉರುಳಲು ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಗ್ರಾಮಸ್ಥರು ತಿಳಿಸಿದರು.
ಘಟನೆ ತಿಳಿದು ಸ್ಥಳಕ್ಕೆ ತಡವಾಗಿ ಬಂದ ಮೆಸ್ಕಾಂ ಜೆ ಇ ಮಂಜುನಾಥರನ್ನು ಗ್ರಾಮಸ್ಥರು ಇಗ್ಗಾಮುಗ್ಗ ತರಟೆಗೆ ತೆಗೆದುಕೊಂಡರು.
ಕಡೆಗೂ ಅಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪಲ್ಗುಣಿ
ಗ್ರಾಮ ಪಂಚಾಯತಿ ಸದಸ್ಯರಾದ ಜಾಬೀರ್ ರವರಮನೆಗೆ ಜಖಂ ಅಗಿದ್ದು ಸ್ಥಳಕ್ಕೆ ಬಂದ ಜೆ ಇ. ಕಂಬಗಳನ್ನು ಹಾಕಿಸಿಕೊಡುವುದಾಗಿ ಮತ್ತು ಅಗಿರುವ ನಷ್ಟಕ್ಕೆ ಪರಿಹಾರ ಕೊಡುವುದಾಗಿ ತಿಳಿದಿದರು.
ಪ್ರತಿಭಟನೆ ನಡೆಸುತಿದ್ದ ಗ್ರಾಮಸ್ಥರು ಎ ಎಸ್ ಐ ಶಶಿಕುಮಾರ್ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.