*ಕೃಷಿ ಅರಣ್ಯ ಪ್ರೋತ್ಸಹಯೋಜನೆಯಲ್ಲಿ ಸಿಲ್ವೇರ್ಸಸಿಗಳ ವಿತರಣೆ*#avintvcom
1 min read
*ಕೃಷಿಅರಣ್ಯಪ್ರೋತ್ಸಹಯೋಜನೆಯಲ್ಲಿಸಿಲ್ವೇರ್ಸಸಿಗಳವಿತರಣೆ*
ಚಿಕ್ಕಮಗಳೂರು ಜಿಲ್ಲೆ.
#ಬೆಳೆಯುವುದುಎಲ್ಲಿ….?#ತರಿಜಮೀನಿನಲ್ಲಿ…..!
*ಅರಣ್ಯ ಇಲಾಖೆ ವತಿಯಿಂದ ಪ್ರತಿವರ್ಷ ಹಲವು ಜಾತಿಯ ಸಸಿಗಳನ್ನು ಬೆಳೆದು ಗ್ರಾಮಪಂಚಾಯಿತಿ ಮುಖಾಂತರ ರೈತರಿಗೆ ವಿತರಿಸುವುದು ಸಾಮಾನ್ಯ.ಇದು ಒಳ್ಳೆಯ ಕೆಲಸವೇ…ಆದರೆ,ಈ ವರ್ಷದ ವಿಶೇಷತೆ ಏನು ಎಂದರೆ,ಸಿಲ್ವೇರ್ ಸಸಿಗಳನ್ನು ಪಡೆಯಲು ಕಡ್ಡಾಯವಾಗಿ ತರಿ ಜಮೀನಿನ(ಭತ್ತದ ಗದ್ದೆ) ಪಹಣಿ ನೀಡುವುದು.
ಈ ಕಾನೂನನ್ನು ಜಾರಿಗೊಳಿಸಿದ ಮಹಾನುಭಾವರು ಯಾರು ಎಂದು ಪ್ರಶ್ನಿಸಿದರೆ ಅವರು ಹೇಳುವುದು ಸರ್ಕಾರದ ನಿಯಮ ಎಂದು.ಕೇವಲ ಸಸಿಗಳನ್ನು ಮಾತ್ರ ವಿತರಿಸಿ ಸುಮ್ಮನಾಗುವುದಿಲ್ಲ,ಗಿಡಗಳನ್ನು ಬೆಳೆಯುವುದಕ್ಕೆ ತಗಲುವ ಖರ್ಚನ್ನು ಕೂಡ ಇಲಾಖೆನೆ ಭರಿಸುತ್ತದೆ.wow ಒಳ್ಳೆಯ ಕೆಲಸ ಎಂದುಕೊಳ್ಳಬೇಡಿ.ಕಂಡಿಷನ್ಸ್ ಅಪ್ಲೇ…. ಏನೆಂದರೆ,ರೈತರ ಖಾತೆಗಳಿಗೆ ಹಣ ಹಾಕುವ ಸಂಧರ್ಭದಲ್ಲಿ ಇಲಾಖೆಯವರು ತಮ್ಮ ಜಮೀನಿಗೆ ಬಂದು ತಾವು ಬೆಳೆದಿರುವ ಸಿಲ್ವೇರ್ ಸಸಿಗಳನ್ನು ವೀಕ್ಷಿಸುತ್ತಾರೆ.ಒಂದು ವೇಳೆ ಕಾಫಿ,ಅಡಿಕೆ,ಬಾಳೆ ಇತ್ಯಾದಿ ತೋಟಗಳ ಮದ್ಯೆ ಸಿಲ್ವೇರ್ ಗಿಡಗಳನ್ನು ನಾಟಿ ಮಾಡಿದ್ದರೆ ನಿಮಗೆ ಹಣ ಸಿಗುವುದಿಲ್ಲ.ಭತ್ತದ ಗದ್ದೆಯಲ್ಲಿ ಸಿಲ್ವೇರ್ ಸಸಿ ನಾಟಿ ಮಾಡಿರಬೇಕು.ಇದು ಸರ್ಕಾರದ ನಿಯಮವಂತೆ.ಇದು ರಾಗಿ ಬೆಳೆಯುವ ಅರಣ್ಯ ಮಂತ್ರಿಗಳು ಮಾಡಿರುವ ಶಿಫಾರಸ್ಸ ಎನ್ನುವುದು ರೈತರ ಪ್ರಶ್ನೆ.ರಾಜ್ಯದಲ್ಲಿ ಅತಿ ಹೆಚ್ಚು ಸಿಲ್ವೇರ್ ಸಸಿಗಳನ್ನು ಬೆಳೆಯುವ ಪ್ರದೇಶವೆಂದರೆ ಅದು ಕಾಫಿತೋಟಗಳು.ಭತ್ತದ ಜೊತೆಯಲ್ಲಿ ಸಿಲ್ವೇರ್ ಹೇಗೆ ಬೆಳೆಯಬೇಕು ಎಂದು ಪ್ರತ್ಯಾಕ್ಷಿಕೆ ಏರ್ಪಡಿಸಿ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ತಿಳಿಸಿಕೊಡಲು ಸರ್ಕಾರ ಸೂಚಿಸಬೇಕು.ಇಲ್ಲವಾದರೆ ಈ ಶಿಫಾರಸ್ಸು ಮಾಡಿರುವ ಅಧಿಕಾರಿಯನ್ನು ರಾಗಿ ಬೆಳೆಯುವ ಪ್ರದೇಶಕ್ಕೆ ವರ್ಗಾಯಿಸಬೇಕು.ರೈತರಿಗೆ ಸಂಕಷ್ಟದ ದಿನಗಳು ಎದುರಾಗಿರುವ ಈ ಸಂಧರ್ಭದಲ್ಲಿ ಮನಸ್ಸಿಗೆ ಬಂದಹಾಗೆ ಕಾನೂನು ರೂಪಿಸಿ ರೈತರ ಜೀವನದ ಜೊತೆ ಚಲ್ಲಾಟವಾಡುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡನೀಯ.
ಇಂದು ಕಾಫಿತೋಟಗಳು ಅರಣ್ಯವಾಗಿ ಪರಿವರ್ತಿತವಾಗುತ್ತಿವೆ.ಇದಕ್ಕೆ ಕಾರಣ ಕಾರ್ಮಿಕರ ಸಮಸ್ಯೆ.ಮರಗಸಿ ಮಾಡಲು ಕಾರ್ಮಿಕರು ಕೇಳುವ ಸಂಬಳ ನೀಡಲು ಸಾಧ್ಯವಾಗದೇ ಮತ್ತು ಕಾರ್ಮಿಕರು ಸಿಗದೆ ಅದೆಷ್ಟೋ ಕಾಫಿತೋಟಗಳು ಅರಣ್ಯವಾಗಿ ಮಾರ್ಪಾಡಾಗಿವೆ.ಪರಿಸರಕ್ಕೆ ಕಾಫಿಬೆಳೆಗಾರರ ಕೊಡುಗೆ ಹೆಚ್ಚಿದೆ.ಇಂದು ಪರಿಸರವೇನಾದರು ಸ್ವಚ್ಛವಾಗಿದ್ದರೆ ಅದು ಕಾಫಿಬೆಳೆಯುವ ಮಲೆನಾಡು ಬಾಗದಲ್ಲಿ.ಇಷ್ಟೆಲ್ಲ ಪರಿಸರಕ್ಕೆ ಕೊಡುಗೆ ನೀಡಿದ್ದರು,ಅರಣ್ಯ ಇಲಾಖೆ ಕಾಫಿಬೆಳೆಗಾರರನ್ನು ಒಂದು ರೀತಿ ಅಪರಾಧಿ ಸ್ಥಾನದಲ್ಲಿ ನೋಡುತ್ತಿರುವುದು ವಿಪರ್ಯಾಸವೇ ಸರಿ.
✍ಕೆರೆಮಕ್ಕಿಮಹೇಶ್,ಕಾರ್ಯದರ್ಶಿ,ಆವತಿ ಹೋಬಳಿ ಕಾಫಿಬೆಳೆಗಾರರ ಸಂಘ.(ರಿ).
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.