*ಮಲೆನಾಡಿನಲ್ಲಿ ವರುಣನ ರೌದ್ರ ನರ್ತನ… ಮಲೆನಾಡಿನಲ್ಲಿ ಅಟ್ಟಹಾಸ ಮೆರೆದ ವರುಣ,*#avintvcom
1 min read
*ಮಲೆನಾಡಿಗೆ ಮುಂಗಾರು ಮಳೆಯ ಅಭಿಷೇಕ*
ಮಲೆನಾಡಿಗೆ ಕಳೆದ ಮೂರು ದಿನಗಳಿಂದ ಸಮೃದ್ಧ ಮುಂಗಾರು ಮಳೆಯ ಅಭಿಷೇಕವಾಗುತ್ತಿದೆ.
ಕವಿಯ ಭಾಷೆಯಲ್ಲಿಯೇ ಮಳೆಯನ್ನು ವರ್ಣಿಸುವುದಾದರೆ ಹೆಪ್ಪುಗಟ್ಟಿದ ಮೋಡದ ಒಡಲು,
ಭೂರಮೆಯ ಒಲುಮೆಗೆ ಅಣಿಯಾಗಿ ಹನಿಗಳ ರೂಪದಿ ಆಗಮಿಸಿದೆ.
ಮುಂಗಾರು ಮಳೆಯೇ…
ಏನು ನಿನ್ನ ಹನಿಗಳ ಲೀಲೆ. ಎಂಬ ಮಳೆ ಮತ್ತು ಪ್ರೇಮದ ಸಮ್ಮಿಶ್ರದ ಯೋಗರಾಜ್ ಭಟ್ ರ ಮುಂಗಾರು ಮಳೆಯ ಹಾಡಿನ ಸಾಲು ಸದ್ಯದ ಮಳೆಗಾಲದ ಪರಿಸ್ಥಿತಿಯಲ್ಲಿ ಮಾಧ್ಯಮಗಳಿಗೆ ನೆನಪಾಗುವ ಬದಲಿಗೆ
*ಮಲೆನಾಡಿನಲ್ಲಿ ವರುಣನ ರೌದ್ರ ನರ್ತನ… ಮಲೆನಾಡಿನಲ್ಲಿ ಅಟ್ಟಹಾಸ ಮೆರೆದ ವರುಣ, ಕಾಫಿ ನಾಡಿನಲ್ಲಿ ವರುಣ ಆರ್ಭಟ *ಎಂಬ ಜನರ ಎದೆ ಒಡೆದು ಹೋಗುವ ತಲೆಬರಹಗಳೇ ಹೆಚ್ಚು.
ಕಾರಣವಿಷ್ಟೇ ಬದಲಾದ ಜಾಗತಿಕ ತಾಪಮಾನ ನಿಸರ್ಗದ ವೈಪರಿತ್ಯದ ಕಾರಣಗಳಿಂದಾಗಿ ಭೂಮಿಯು ತನ್ನ ಸಮತೋಲನವನ್ನು ಕಳೆದು ಕೊಂಡು ಋತುಮಾನಗಳಿಗೆ ಸರಿಯಾಗಿ ಚಲಿಸಬೇಕಾದ ನೈಸರ್ಗಿಕ ಸರಪಳಿಯಲ್ಲಿನ ಅಸಮತೋಲನವೆ ಈ ಸಂದಿಗ್ದ ಸ್ಥಿತಿಗೆ ಕಾರಣ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮುಂಗಾರಿನ ಗಾಳಿಮಿಶ್ರಣದ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಸರಿಯಾದ ಸಮಯಕ್ಕೆ ಸರ್ಕಾರ ಕೆಲಸ ಮಾಡದೆ
ಮಳೆಯ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿದ್ದು ಸಂಚಾರಕ್ಕೆ ಅಡಚಣೆಯನ್ನು ಉಂಟುಮಾಡಿದೆ.ಕಮಿಷನ್ ದಂದೆಯ
ಜೊತೆಗೆ ಸರ್ಕಾರ ನಿರ್ಮಿತ ಕಟ್ಟಡಗಳು ಸೋರುತ್ತಿವೆ.
ಜನರ ಜೀವನಾಡಿಯಾಗಿರುವ ಸಂಚಾರವ್ಯವಸ್ಥೆಗೆ ಪೂರಕವಾಗಿ ಒಳ ಚರಂಡಿ ವ್ಯವಸ್ಥೆಯನ್ನು ನಿರ್ಮಿಸದೆ ಇರುವುದು,
ಚರಂಡಿಯ ವ್ಯವಸ್ಥೆಯನ್ನು ಮಾಡಿದ್ದರು ಭ್ರಷ್ಟಾಚಾರದ ಕಮಿಷನ್ ಲೆಕ್ಕಾಚಾರದ ಕಳಪೆ ಗುಣಮಟ್ಟದ ಕಾಮಗಾರಿಯ ಕಾರ್ಯಗಳು ಜನರನ್ನು ಸಂಕಷ್ಟಕ್ಕೀಡುಮಾಡಿವೆ.
ಸುಮಾರು 5 ತಿಂಗಳುಗಳ ಕಾಲ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಸುರಿಯುವ ಮುಂಗಾರು ಮಳೆಗೆ ಇಡೀ ಮಲೆನಾಡೇ ತತ್ತರಿಸಿ ಹೋಗುವ ಮಟ್ಟಿಗೆ ಅಗಿದೆ.
ತಾವಿರುವ ಜಾಗವನ್ನು ಅವೈಜ್ಞಾನಿಕವಾಗಿ ನಿರ್ಮಿಸಲು ಅವಕಾಶ ಮಾಡಿ ಕೊಟ್ಟು ಕಣ್ಣು ಮುಚ್ಚಿಕೊಂಡು ಕೂತಿರುವ ಶ್ರೀಸಾಮಾನ್ಯರು,
ಅವಿವೇಕಿ ಆಡಳಿತವನ್ನು ನಡೆಸುತ್ತಿರುವ ಜಿಲ್ಲಾಡಳಿತವನ್ನು,
ಜನ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಯಾವಾಗ.?
ರಸ್ತೆ ನಿರ್ಮಿಸಿ ಕೇವಲ ಮೂರೇ ತಿಂಗಳಿನಲ್ಲಿ ಕಿತ್ತು ಹೋಗುವ ಕಳಪೆ ಕಾಮಗಾರಿ,
ರಸ್ತೆಯ ಬದಿಯಲ್ಲಿ ಅಗತ್ಯವಾಗಿ ನಿರ್ಮಿಸಬೇಕಾದ ಒಳಚರಂಡಿ, ಮುರಿದು ಬಿದ್ದು ವರ್ಷಗಳೇ ಕಳೆದರು ಇನ್ನೂ ಸಿದ್ಧವಾಗದ ಸೇತುವೆಗಳು, ದಾರಿ ಮದ್ಯದಲ್ಲಿ ಕುಸಿಯುತ್ತಿರುವ ಗುಡ್ಡಗಳು ,
ನಿರಂತರವಾಗಿ ಸುರಿಯುವ ಮಲೆನಾಡಿನ ಮಳೆಯ ನೀರು ರಸ್ತೆಯಲ್ಲಿಯೇ ನೇರವಾಗಿ ಹರಿಯುತಿದ್ದರೆ ಇದನ್ನ ಪ್ರಶ್ನೆಮಾಡದೆ ನಿರಂತರ ವ್ಯಥೆಪಡುವ ಜನರ ನೋವನ್ನು ಕೇಳುವವರಾರು?
ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.
*ಪ್ರಕೃತಿಯ ಒಂದು ಭಾಗ ನಾವು.ಪ್ರಕೃತಿಯೇ ನಮ್ಮ ಒಂದು ಭಾಗವಲ್ಲ*
ಕೆ. ಪಿ. ಪೂರ್ಣಚಂದ್ರ ತೇಜಸ್ವಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.
http://nisargacare.com/career/